ETV Bharat / city

ಹರ್ಷ ಮೇಲೆ ಕೊತ್ತಂಬರಿ ಸೊಪ್ಪು ತರಲು ಹೋಗಿ ಬೆಂಕಿ ಹಚ್ಚಿದ ಪ್ರಕರಣ ಇಲ್ಲ: ಭಾರತಿ ಶೆಟ್ಟಿ

author img

By

Published : Feb 22, 2022, 3:26 PM IST

Updated : Feb 23, 2022, 7:57 AM IST

statement-of-bharatishetty-member-of-vidhana-parishat
ಭಾರತಿ ಶೆಟ್ಟಿ

ಶಿವಮೊಗ್ಗದಲ್ಲಿ ಹರ್ಷ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಹರ್ಷನ ಮೇಲೆ ಯಾವುದೇ ಪ್ರಕರಣಗಳಿಲ್ಲ, ಸಾವಿನ ಬಳಿಕ ಸುಳ್ಳು ಆರೋಪಗಳನ್ನು ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ.

ಬೆಂಗಳೂರು: ಶಿವಮೊಗ್ಗದಲ್ಲಿ ಹತ್ಯೆಯಾದ ಹರ್ಷ ಮೇಲೆ ಕೊತ್ತಂಬರಿ ಸೊಪ್ಪು ತರಲು ಹೋಗಿ ಬೆಂಕಿ ಹಚ್ಚಿದ ಪ್ರಕರಣ ಇಲ್ಲ, ಹುಡುಗಿ ಜೊತೆ ಹೋದ ಕೇಸ್ ಇಲ್ಲ, ಕೊಲೆ‌ ಮಾಡಿದ ಯಾವುದೇ ಪ್ರಕರಣ ಇಲ್ಲವೆಂದು ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಯಾರದೇ ಹತ್ಯೆ ಆದ್ರೂ ಎಲ್ಲಾ ಪಕ್ಷ ಹೇಳೋದು ಕೊಲೆಗಡುಕರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು. ಎಲ್ಲಾ ಪಕ್ಷಗಳು ಹೇಳಿದ್ದು ಅದೇ. ಹರ್ಷ ಅವರು ಈ ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಹರ್ಷ ಅವರನ್ನು ನಾನು ಬಹಳ ಹತ್ತಿರದಿಂದ ನೋಡಿರುವುದರಿಂದ ನನಗೆ ಬಹಳ ಪರಿಚಯ ಇದೆ. ಈಗ ಅವರ ಮೇಲೆ ಅನೇಕ ಕೇಸ್ ಇವೆ ಎಂದು ಹೇಳಲಾಗುತ್ತಿದೆ. ಆದರೆ ಹರ್ಷ ಮೇಲೆ ಯಾವುದೇ ವೈಯಕ್ತಿಕ ಕೇಸ್ ಇಲ್ಲ, ಗಾಂಜಾ ಕೇಸ್ ಇಲ್ಲ, ಕೊತ್ತಂಬರಿ ಸೊಪ್ಪು ತರಲು ಹೋಗಿ ಬೆಂಕಿ ಹಚ್ಚಿದ ಪ್ರಕರಣ ಇಲ್ಲ. ಹರ್ಷ ಅವರ ಮೇಲೆ ಹೆಣ್ಣು ಮಕ್ಕಳನ್ನು ಹಾರಿಸಿಕೊಂಡು ಹೋದ ಕೇಸಿಲ್ಲ ಎಂದು ಹೇಳಿದ್ದಾರೆ. ಕೇವಲ ಗಣೇಶ ಮೂರ್ತಿ ಕೂರಿಸೋ ಬಗ್ಗೆ ಮಾತ್ರ ಕೇಸ್ ಇರೋದು ಎಂದು ಅವರು ಹೇಳಿದ್ದಾರೆ.

ಹರ್ಷ ಮೇಲೆ ಕೊತ್ತಂಬರಿ ಸೊಪ್ಪು ತರಲು ಹೋಗಿ ಬೆಂಕಿ ಹಚ್ಚಿದ ಪ್ರಕರಣ ಇಲ್ಲ: ಭಾರತಿ ಶೆಟ್ಟಿ

ಅವರ ತಾಯಿ ಹೇಳ್ತಿದ್ರು, ಮದುವೆ ಆಗು ಮಗನೆ ಅಂತ. ಎಲ್ಲರೂ ಮದುವೆ ಆದ್ರೆ, ದೇಶಕ್ಕಾಗಿ ಕೆಲಸ ಮಾಡೋರು ಯಾರು ಅಂತ ಆತ ಹೇಳುತ್ತಿದ್ದ ಎಂಬುದನ್ನು ಭಾರತಿ ಶೆಟ್ಟಿ ತಿಳಿಸಿದ್ದಾರೆ. ಕೇಸರಿ ಶಾಲು ಅಲ್ಲಿಂದ, ಇಲ್ಲಿಂದ ತಂದ್ರು ಅನ್ನೋ ಮಾಹಿತಿ ಇರೋ ಕಾಂಗ್ರೆಸ್​ನವರಿಗೆ. ಕೊಲೆ ಮಾಡೋ ಬಗ್ಗೆ ಮಾಹಿತಿ ಇರಲಿಲ್ವಾ.? ಎಂದು ಕಿಡಿಕಾರಿದ್ದಾರೆ. ಹರ್ಷ ಸಾವಿಗೆ ನ್ಯಾಯ ಸಿಗಬೇಕು. ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಓದಿ : ನಿಮ್ಮೊಂದಿಗೆ ನಾವಿದ್ದೇವೆ, ಧೈರ್ಯವಾಗಿರಿ : ಹರ್ಷ ಕುಟುಂಬಕ್ಕೆ ಯಡಿಯೂರಪ್ಪ ಸಾಂತ್ವನ

Last Updated :Feb 23, 2022, 7:57 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.