ETV Bharat / city

ಹಾಲು ಒಕ್ಕೂಟಗಳಲ್ಲಿ ದುಬಾರಿ ವೆಚ್ಚ, ಭ್ರಷ್ಟಾಚಾರ: ಕೋಡಿಹಳ್ಳಿ ಚಂದ್ರಶೇಖರ್‌ ಆರೋಪ

author img

By

Published : Jan 20, 2022, 9:58 PM IST

kodihalli-chandrasekhar
ಕೋಡಿಹಳ್ಳಿ ಚಂದ್ರಶೇಖರ್‌

ಸರ್ಕಾರ ಕರ್ಫ್ಯೂ, ಲಾಕ್​ಡೌನ್​ ನಿರ್ಬಂಧ ಕೈಬಿಡಬೇಕು. ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ ದುರ್ಬಲ ಎಂದು ಹೇಳಿದೆ. ಆದರೆ, ಸರ್ಕಾರ ಜನರಿಗೆ ಆತಂಕ ಸೃಷ್ಟಿ ಮಾಡಿದೆ ಎಂದು ದೂರಿದರು.

ಬೆಂಗಳೂರು: ರಾಜ್ಯದ ಹಾಲಿನ ಒಕ್ಕೂಟಗಳು ದುಬಾರಿ ವೆಚ್ಚ ಹಾಗೂ ಭ್ರಷ್ಟಾಚಾರದಿಂದಾಗಿ ಭಾರೀ ನಷ್ಟದಲ್ಲಿವೆ. ಇದನ್ನು ಸರಿದೂಗಿಸಲು ರೈತರಿಗೆ ನೀಡುವ ಹಾಲಿನ ದರದಲ್ಲಿ ಇಳಿಕೆ ಮಾಡಲಾಗುತ್ತಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನಾಯಕ ಕೋಡಿಹಳ್ಳಿ ಚಂದ್ರಶೇಖರ್‌ ಆರೋಪಿಸಿದರು.

ನಗರದ ಪ್ರೆಸ್​ಕ್ಲಬ್​ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹಾಲಿನ ದರ ಏರಿಕೆ ಮಾಡಿ ಎನ್ನುತ್ತಿದ್ದಾರೆ. ಇದು ನಷ್ಟದಲ್ಲಿರುವ ಒಕ್ಕೂಟಗಳ ಆದಾಯ ಸರಿದೂಗಿಸಲು ಮಾಡಿದ ಪ್ಲಾನ್​ ಎಂದರು.

ರಾಗಿ ಖರೀದಿ ಕೇಂದ್ರಗಳನ್ನು ಸರ್ಕಾರ ಆರಂಭ ಮಾಡಿದೆ. ರಾಗಿಯ ದರ ಮಾರುಕಟ್ಟೆಯಲ್ಲಿ ಕ್ವಿಂಟಾಲ್​ಗೆ 1500 ರೂ. ಇದೆ. ಸರ್ಕಾರದ ಎಂಎಸ್​ಪಿ 3,373 ರೂ. ಘೋಷಣೆ ಮಾಡಿದೆ. ಆದರೆ, ಖರೀದಿ ಕೇಂದ್ರಗಳಲ್ಲಿ ರಾಗಿ ಖರೀದಿ ಆಗುತ್ತಿಲ್ಲ. ಖರೀದಿ ಕೇಂದ್ರಗಳಲ್ಲಿಯೇ ರಾಗಿ ಖರೀದಿ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸರ್ಕಾರ ಕರ್ಫ್ಯೂ, ಲಾಕ್​ಡೌನ್​ ನಿರ್ಬಂಧ ಕೈಬಿಡಬೇಕು. ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ ದುರ್ಬಲ ಎಂದು ಹೇಳಿದೆ. ಆದರೆ, ಸರ್ಕಾರ ಜನರಿಗೆ ಆತಂಕ ಸೃಷ್ಟಿ ಮಾಡಿದೆ ಎಂದು ದೂರಿದರು.

ಇದನ್ನೂ ಓದಿ: ರಾಜ್ಯದಲ್ಲಿಂದು 47,754 ಹೊಸ ಕೋವಿಡ್ ಕೇಸ್​​​.. ದಿಢೀರ್​ ಹೆಚ್ಚಾಯ್ತು ಮರಣ ಪ್ರಮಾಣ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.