ETV Bharat / city

ರಾಜ್ಯಾದ್ಯಂತ ಕ್ರಿಸ್​​ಮಸ್​ ಆಚರಣೆ: ಚರ್ಚ್​ಗೆ ತೆರಳಿ ಪ್ರಾರ್ಥನೆ ಮಾಡಿದ ಕ್ರೈಸ್ತ ಬಾಂಧವರು

author img

By

Published : Dec 25, 2019, 6:28 PM IST

KN_CKD_2_crismasa_habba_acharane_script_KA10023
ರಾಜ್ಯಾದ್ಯಂತ ಅದ್ದೂರಿಯಾಗಿ ಕ್ರಿಸ್ ಮಸ್ ಆಚರಣೆ: ಚರ್ಚ್​ಗೆ ತೆರಳಿ ಪ್ರಾರ್ಥನೆ ಮಾಡಿದ ಕ್ರೈಸ್ತ ಭಾಂದವರು

ರಾಜ್ಯಾದ್ಯಂತ ಇಂದು ನಡೆದ ಕ್ರಿಸ್ ಮಸ್ ಹಬ್ಬದಲ್ಲಿ ಕ್ರೈಸ್ತ ಬಾಂಧವರು ಚರ್ಚ್​ಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಮಾಡುವ ಮೂಲಕ ಪರಸ್ಪರ ಶುಭಾಶಯ ಕೋರಿ ಸಂಭ್ರಮಿಸಿದ್ದಾರೆ.

ಬೆಳಗಾವಿ\ ಬಳ್ಳಾರಿ: ರಾಜ್ಯಾದ್ಯಂತ ಇಂದು ನಡೆದ ಕ್ರಿಸ್ ಮಸ್ ಹಬ್ಬದಲ್ಲಿ ಕ್ರೈಸ್ತ ಬಾಂಧವರು ಚರ್ಚ್​ಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಮಾಡುವ ಮೂಲಕ ಪರಸ್ಪರ ಶುಭಾಶಯ ಕೋರಿ ಸಂಭ್ರಮಿಸಿದ್ದಾರೆ.

ರಾಜ್ಯಾದ್ಯಂತ ಅದ್ದೂರಿಯಾಗಿ ಕ್ರಿಸ್ ಮಸ್ ಆಚರಣೆ: ಚರ್ಚ್​ಗೆ ತೆರಳಿ ಪ್ರಾರ್ಥನೆ ಮಾಡಿದ ಕ್ರೈಸ್ತ ಬಾಂಧವರು

ಚಿಕ್ಕೋಡಿಯ ಮೆಥೋಡಿಸ್ಟ್ ಚರ್ಚ್​ನಲ್ಲಿ ಕ್ರಿಸ್ ಮಸ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಹಬ್ಬದ ನಿಮಿತ್ತ ಚರ್ಚ್​ ಅಲಂಕರಿಸಿ ಕ್ರೈಸ್ತ ಬಾಂಧವರು ಸಾಮೂಹಿಕವಾಗಿ ಪ್ರಾರ್ಥನೆ ಮಾಡಿದರು. ಅದೇ ರೀತಿ ಅಥಣಿ ನಗರದಲ್ಲಿಯು ಸಹ ಇನಪೆಂಟ್ ಜೀಸಸ್ ಚರ್ಚ್​ ನಲ್ಲಿ ಸಂಭ್ರಮದಿಂದ ಕ್ರಿಸ್ ಮಸ್ ಆಚರಿಸಲಾಯಿತು. ಇದೆ ಸಂದರ್ಭದಲ್ಲಿ ಯೇಸುವಿನ ಆರಾಧನೆ ಪ್ರಾರ್ಥನೆ ಗೀತೆಗಳನ್ನು ಹಾಡಿದರು.

ಹೊಸಪೇಟೆ ನಗರದಲ್ಲಿ ಇಂದು ಇಸಿಐ ಚರ್ಚ್​ನಲ್ಲಿ ಕ್ರಿಸ್ ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಣೆಯನ್ನು ಮಾಡಲಾಯಿತು. ಯೇಸು ಕ್ರಿಸ್ತನು ಸುಖ ಶಾಂತಿ ನೆಮ್ಮದಿಯಿಂದ ಇರುವಂತೆ ಮಾಡುತ್ತಾನೆ. ಯೇಸು ಒಂದೇ ಧರ್ಮದವರಿಗೆ ಸೀಮಿತವಾಗಿಲ್ಲ. ಯೇಸು ಸ್ವಾಮಿಯ ಮೇಲೆ ನಂಬಿಕೆಯಿಂದ ಪ್ರಾರ್ಥನೆ ಮಾಡಿದರೆ ಭಕ್ತರ ನೋವು ದೂರವಾಗುತ್ತದೆ ಎಂದು ಫಾದರ್ ರವಿಕುಮಾರ ಅಂದ್ಲಿ ತಿಳಿಸಿದರು.

Intro:ಚಿಕ್ಕೋಡಿಯಲ್ಲಿ ಅದ್ದೂರಿಯಿಂದ ಚರ್ಚನಲ್ಲಿ ಕ್ರೈಸ್ತ ಭಾಂದರು ಕೂಡಿ ಕ್ರಿಸ್ಮಸ್ ಹಬ್ಬ ಆಚರಣೆ
Body:
ಚಿಕ್ಕೋಡಿ :

ಕ್ರೈಸ್ತ ಕೇಂದ್ರ ಮೆಥೋಡಿಸ್ಟ್ ಚರ್ಚನಲ್ಲಿ ಕ್ರಿಸ್ಮಸ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಹಬ್ಬದ ನಿಮಿತ್ಯವಾಗಿ ಚರ್ಚನ್ನು ಅಲಂಕರಿಸಿ ಕ್ರೈಸ್ತ ಬಾಂಧವರು ಸಾಮೂಹಿಕವಾಗಿ ಪ್ರೇಯರ್ ಮಾಡಿದರು.

ಚಿಕ್ಕೋಡಿ ಶೈಕ್ಷಣಿಕ ವಿಭಾಗದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಿದ ಕ್ರೈಸ್ತ ಬಾಂಧವರು ಕ್ಷಮೆ, ಸಹನೆ, ಪ್ರೀತಿ , ಸಹಬಾಳ್ವೆಯೇ, ಜೀವನದ ಸಂದೇಶ ಸಾರಲು ಯೇಸುಕ್ರಿಸ್ತನು ಹುಟ್ಟಿ ಬಂದಿದ್ದಾನೆ ಎಂದು ಸುವಾರ್ತೆ ಸಾರುವ ಮೂಲಕ ಚರ್ಚ ಮುಗಿದ ಬಳಿಕ ಪರಸ್ಪರ ಒಬ್ಬರಿಗೊಬ್ಬರು ಹಬ್ಬದ ಶುಭಾಶಯ ಕೋರುವದರ ಮುಖಂತರ ಕ್ರೈಸ್ತ ಬಾಂಧವರು ಸಂಭ್ರಮಿಸಿದರು.




Conclusion:ಸಂಜಯ ಕೌಲಗಿ
ಚಿಕ್ಕೋಡಿ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.