ETV Bharat / briefs

ಕೊರೊನಾ ಸಂಕಷ್ಟ: ನಿರ್ಗತಿಕರಿಗಾಗಿ ಸಚಿವ ಪ್ರಭು ಚವ್ಹಾಣ್​ರಿಂದ ನಿತ್ಯ ದಾಸೋಹ...!

author img

By

Published : May 13, 2021, 6:57 PM IST

Updated : May 13, 2021, 8:44 PM IST

Prabhu chawhan
Prabhu chawhan

ಔರಾದ್ ಪಟ್ಟಣದಲ್ಲಿ ಅನ್ನ ದಾಸೋಹ ಆರಂಭಿಸಿದ ಸಚಿವ ಚವ್ಹಾಣ್, ಸತತ ಲಾಕ್​ಡೌನ್ ಜಾರಿಯಲ್ಲಿರುವವರೆಗೆ ತಿಂಡಿ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.

ಬೀದರ್: ಕೋವಿಡ್ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಕಠಿಣ ಲಾಕ್​ಡೌನ್​ನಿಂದಾಗಿ ಸಂಕಷ್ಟದಲ್ಲಿರುವ ನಿರ್ಗತಿಕ ಹಾಗೂ ಬಡ ಜನರಿಗಾಗಿ ನಿತ್ಯ ಅನ್ನ ದಾಸೋಹ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಚಾಲನೆ ನೀಡಿದರು.

ಕೊರೊನಾ ಸಂಕಷ್ಟ: ನಿರ್ಗತಿಕರಿಗಾಗಿ ಸಚಿವ ಪ್ರಭು ಚವ್ಹಾಣ್​ರಿಂದ ನಿತ್ಯ ದಾಸೋಹ

ಜಿಲ್ಲೆಯ ಔರಾದ್ ಪಟ್ಟಣದಲ್ಲಿ ಅನ್ನ ದಾಸೋಹ ಆರಂಭಿಸಿ ಮಾತನಾಡಿದ ಅವರು, ಸತತ ಲಾಕ್​ಡೌನ್ ಜಾರಿಯಲ್ಲಿರುವವರೆಗೆ ತಿಂಡಿ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಕಾರ್ಮಿಕರು, ಬಡವರು, ನಿರ್ಗತಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರಿಣಾಮ ಅವರ ಹಸಿವು ನೀಗಿಸುವ ಕೆಲಸ ಮಾಡಲಾಗಿದೆ ಎಂದರು.

ಕಳೆದ ವರ್ಷ ಲಾಕ್​ಡೌನ್ ಸಂದರ್ಭದಲ್ಲಿ ಸ್ವಂತ ಖರ್ಚಿನಲ್ಲಿ 45 ದಿನಗಳ ಕಾಲ ಊಟದ ವ್ಯವಸ್ಥೆ ಮಾಡಲಾಗಿತ್ತು. ಅದರಂತೆ ಈ ವರ್ಷವೂ ಔರಾದ್ ಹಾಗೂ ಕಮಲನಗರ ಸೇರಿದಂತೆ ಜಿಲ್ಲೆಯಾದ್ಯಂತ ವಿವಿಧ ಜನರ ತಂಡ ಮಾಡಿ ವ್ಯವಸ್ಥಿತವಾಗಿ ವಿವಿಧ ಭಾಗವಾರು ಅನ್ನ ದಾಸೋಹ ಸರಬರಾಜು ಮಾಡಲಾಗಿದೆ ಎಂದರು.

Last Updated :May 13, 2021, 8:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.