ETV Bharat / bharat

ಕೇಂದ್ರಕ್ಕೆ ನ.26ರ ವರೆಗೆ ಗಡುವು.. ಧರಣಿ ತೀವ್ರಗೊಳಿಸುವ ಎಚ್ಚರಿಕೆ ನೀಡಿದ ರಾಕೇಶ್ ಟಿಕಾಯತ್​

author img

By

Published : Nov 1, 2021, 2:23 PM IST

rakesh-tikait
ರಾಕೇಶ್ ಟಿಕಾಯತ್​

ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಚಳವಳಿಗೆ ಒಂದು ವರ್ಷ ತುಂಬಲು ಕಾಲ ಸನ್ನಿಹಿತವಾಗಿದೆ. ಈ ನಡುವೆ ರಾಕೇಶ್ ಟಿಕಾಯತ್​​ ಧರಣಿಯೂ ಇನ್ನಷ್ಟು ತೀವ್ರಗೊಳ್ಳುವ ಎಚ್ಚರಿಕೆ ರವಾನಿಸಿದ್ದಾರೆ.

ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಕಾನೂನು ಹಿಂಪಡೆಯುವಂತೆ ಒತ್ತಾಯಿಸಿ ರೈತರು ದೆಹಲಿಯ ಘಾಜಿಪುರ ಬಾರ್ಡರ್​ನಲ್ಲಿ ವರ್ಷಗಳಿಂದಲೂ ಧರಣಿ ನಡೆಸುತ್ತಿದ್ದಾರೆ. ವಿವಿಧ ಬೇಡಿಕೆ ಈಡೇರುವವರೆಗೂ ಧರಣಿ ಹಿಂಪಡೆಯುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಇದೇ ನವೆಂಬರ್ 26ರಂದು ಈ ಧರಣಿಗೆ ಒಂದು ವರ್ಷ ಸಂಪೂರ್ಣವಾಗಲಿದ್ದು, ಪ್ರತಿಭಟನೆ ಇನ್ನಷ್ಟು ತೀವ್ರಗೊಳಿಸುವ ಸೂಚನೆ ಸಿಕ್ಕಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ರೈತ ಮುಖಂಡ ರಾಕೇಶ್ ಟಿಕಾಯತ್ ಅನ್ನದಾತರ ಹೋರಾಟ ಹೊಸ ರೂಪ ತಳೆಯುವ ಸೂಚನೆ ಕೊಟ್ಟಿದ್ದಾರೆ. ಸರ್ಕಾರಕ್ಕೆ ನವೆಂಬರ್ 26ರ ವರೆಗೆ ಸಮಯಾವಕಾಶವಿದ್ದು, 26ರ ಬಳಿಕ ದೆಹಲಿಗೆ ಇನ್ನಷ್ಟು ರೈತರು ಆಗಮಿಸಲಿದ್ದಾರೆ, ಹಳ್ಳಿ ಹಳ್ಳಿಯಿಂದ ಚಳವಳಿಗೆ ಹಾಜರಾಗಲಿದ್ದಾರೆ ಎಂದು ಎಚ್ಚರಿಸಿದ್ದಾರೆ.

ಈವರೆಗೆ ರೈತರ ಜೊತೆ 11 ಸುತ್ತಿನ ಮಾತುಕತೆ ನಡೆದಿದೆ. ಕಳೆದ 9 ತಿಂಗಳಿಂದ ಈ ಸುತ್ತಿನ ಮಾತುಕತೆ ನನೆಗುದಿಗೆ ಬಿದ್ದಿದ್ದು, ರೈತರು ಮತ್ತು ಸರ್ಕಾರದ ನಡುವೆ ಜಟಾಪಟಿ ಮುಂದುವರಿದಿದೆ. ಕೇಂದ್ರ ಸರ್ಕಾರದಿಂದ ಬೇಡಿಕೆಗಳನ್ನು ಈಡೇರಿಸುವವರೆಗೆ ದೆಹಲಿಯನ್ನು ಬಿಟ್ಟು ತೆರಳುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ: ಎನ್‌ಸಿಎಸ್‌ಸಿ ಅಧ್ಯಕ್ಷರನ್ನು ಭೇಟಿ ಮಾಡಿ, ಜಾತಿ ದಾಖಲೆಗಳನ್ನು ಸಲ್ಲಿಸಲಿದ್ದಾರೆ ಸಮೀರ್ ವಾಂಖೆಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.