ETV Bharat / bharat

ಮೇ 11ಕ್ಕೆ ಉದ್ಧವ್ ಠಾಕ್ರೆ, ಶರದ್ ಪವಾರ್ ಭೇಟಿ ಮಾಡಲಿರುವ ನಿತೀಶ್ ಕುಮಾರ್

author img

By

Published : May 8, 2023, 6:29 PM IST

Bihar CM Nitish Kumar
ಬಿಹಾರ ಸಿಎಂ ನಿತೀಶ್ ಕುಮಾರ್​ಯಿಂದ ಉದ್ಧವ್ ಠಾಕ್ರೆ, ಶರದ್ ಪವಾರ್ ಮೇ 11ಕ್ಕೆ ಭೇಟಿ..

ಕರ್ನಾಟಕ ಚುನಾವಣೆಯ ನಂತರ ನಡೆಯಲಿರುವ ಮೂರನೇ ಮೈತ್ರಿಕೂಟದ ಸಭೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಎನ್​ಸಿಪಿ ನಾಯಕ ಶರದ್ ಪವಾರ್ ಮತ್ತು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಆಹ್ವಾನಿಸಿದ್ದಾರೆ. ಪ್ರಧಾನಮಂತ್ರಿ ಪಟ್ಟಕ್ಕೆ ಅಭ್ಯರ್ಥಿ ಯಾರು ಆಗಲಿದ್ದಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

ಮಹಾರಾಷ್ಟ್ರ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮೇ 11ಕ್ಕೆ ಮುಂಬೈಗೆ ಭೇಟಿ ನೀಡಲಿದ್ದಾರೆ. ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಮತ್ತು ಠಾಕ್ರೆ ಗ್ರೂಪ್ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಲಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆ ಬಳಿಕ ನಡೆಯಲಿರುವ ಮೂರನೇ ಮೈತ್ರಿಕೂಟದ ಸಭೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಎನ್‌ಸಿಪಿ ನಾಯಕ ಶರದ್ ಪವಾರ್ ಮತ್ತು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಆಹ್ವಾನಿಸಿದ್ದಾರೆ. ಇದರಿಂದ ಶಿವಸೇನೆ ಮತ್ತು ಎನ್‌ಸಿಪಿ ಮೂರನೇ ಮೈತ್ರಿಕೂಟಕ್ಕೆ ಸೇರುತ್ತಾರಾ, ಪ್ರಧಾನಮಂತ್ರಿ ಹುದ್ದೆ ಯಾರಿಗೆ ಎಂಬ ಪ್ರಶ್ನೆಗಳು ಎದ್ದಿವೆ.

ಮೂರನೇ ಮೈತ್ರಿ ಚರ್ಚೆ ಆರಂಭ: ಎನ್​ಸಿಪಿ ನಾಯಕ ಶರದ್ ಪವಾರ್ ಮತ್ತೊಮ್ಮೆ ಪಕ್ಷದ ಸಾರಥ್ಯ ವಹಿಸಿಕೊಂಡ ಬೆನ್ನಲ್ಲೇ ಇದೀಗ ಮೂರನೇ ಮೈತ್ರಿಕೂಟದ ಚರ್ಚೆ ಆರಂಭವಾಗಿದೆ. ಬಿಜೆಪಿ ವಿರೋಧಿ ತೃತೀಯ ಮೈತ್ರಿಕೂಟ ಒಂದಾಗುತ್ತಿರುವ ಹಿನ್ನೆಲೆಯಲ್ಲಿ ಈ ಪಕ್ಷಗಳು ಯಾವ್ಯಾವ ವಿಚಾರಗಳಲ್ಲಿ ಒಂದಾಗಲಿವೆ ಎಂಬ ಚರ್ಚೆಗಳು ಶುರುವಾಗಿವೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೂರನೇ ಮೈತ್ರಿಕೂಟಕ್ಕೆ ಮುಂದಾಗಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಕೂಡ ಇದರಲ್ಲಿ ಭಾಗಿಯಾಗಿದ್ದಾರೆ. ಮಹಾರಾಷ್ಟ್ರದಿಂದ ಮೂರನೇ ಮೈತ್ರಿಕೂಟದಲ್ಲಿ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಎನ್‌ಸಿಪಿ ನಾಯಕ ಶರದ್ ಪವಾರ್ ಭಾಗವಹಿಸವ ನಿಟ್ಟಿನಲ್ಲಿ ಕೆಲವು ನಾಯಕರಿಂದ ಪ್ರಯತ್ನಗಳು ಪ್ರಾರಂಭವಾಗಿವೆ. ಈ ಹಿಂದೆ ಕೆಸಿಆರ್ ಮತ್ತು ಮಮತಾ ಬ್ಯಾನರ್ಜಿ ಈ ನಿಟ್ಟಿನಲ್ಲಿ ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಿದ್ದರು.

ಮೇ 11ಕ್ಕೆ ಮುಂಬೈಗೆ ಭೇಟಿ: ತೃತೀಯ ಮೈತ್ರಿಕೂಟದಲ್ಲಿ ಭಾಗವಹಿಸಲು ಉದ್ಧವ್ ಠಾಕ್ರೆ ಮತ್ತು ಶರದ್ ಪವಾರ್ ಅವರು ನಿತೀಶ್ ಕುಮಾರ್ ಅವರೊಂದಿಗೆ ದೂರವಾಣಿ ಮೂಲಕ ಚರ್ಚಿಸಿದ್ದಾರೆ ಎಂದು ಪವಾರ್ ಮಾಹಿತಿ ನೀಡಿದರು. ಈ ನಿಟ್ಟಿನಲ್ಲಿ ಕರ್ನಾಟಕ ಚುನಾವಣೆ ನಂತರ ನಡೆಯಲಿರುವ ಸಭೆಗೆ ಆಹ್ವಾನಿಸಲು ನಿತೀಶ್ ಕುಮಾರ್ ಅವರು ಮೇ 11ರಂದು ಮುಂಬೈಗೆ ಬರಲಿದ್ದಾರೆ. ಈ ಸಂದರ್ಭದಲ್ಲಿ ನಿತೀಶ್ ಕುಮಾರ್ ಅವರು ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಲಿದ್ದಾರೆ. ಮಹಾರಾಷ್ಟ್ರದ ಈ ಎರಡು ಪಕ್ಷಗಳು ಮೂರನೇ ಮೈತ್ರಿಕೂಟದಲ್ಲಿ ಭಾಗವಹಿಸುವ ನಿರೀಕ್ಷೆಯಲ್ಲಿದ್ದಾರೆ.

ಉದ್ಧವ್ ಠಾಕ್ರೆ ಭಾಗವಹಿಸುತ್ತಾರೆಯೇ?: ಶಿವಸೇನಾ ನಾಯಕ ಉದ್ಧವ್ ಬಾಳಾಸಾಹೇಬ್ ಠಾಕ್ರೆ ಮತ್ತು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನೂ ನಿತೀಶ್ ಕುಮಾರ್ ಭೇಟಿಯಾಗಲಿದ್ದಾರೆ. ಭಾರತೀಯ ಜನತಾ ಪಕ್ಷದ ವಿರುದ್ಧ ಶಿವಸೇನೆಯ ದೃಢ ನಿಲುವು ಮತ್ತು ಮೂರನೇ ಮೈತ್ರಿಕೂಟದಲ್ಲಿ ಪಾಲ್ಗೊಳ್ಳಲು ಇಚ್ಛೆ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಉದ್ಧವ್ ಠಾಕ್ರೆ ಅವರು ಮೂರನೇ ಮೈತ್ರಿಕೂಟಕ್ಕೆ ಸೇರಿ ಬಿಜೆಪಿಯನ್ನು ಬಲವಾಗಿ ವಿರೋಧಿಸುವ ಸಾಧ್ಯತೆ ಇದೆ. ಆದರೆ, ಶರದ್ ಪವಾರ್ ಅವರ ಇತ್ತೀಚಿನ ಹೇಳಿಕೆಗಳಿಂದ ನೊಂದಿರುವ ಉದ್ಧವ್ ಠಾಕ್ರೆ ಅವರು ಮೂರನೇ ಮೈತ್ರಿಕೂಟದಲ್ಲಿ ಭಾಗವಹಿಸುವಾಗ ಎನ್‌ಸಿಪಿಯೊಂದಿಗೆ ಹೇಗೆ ನಿಲುವು ತಳೆಯುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ ಎಂದು ಹಿರಿಯ ರಾಜಕೀಯ ವಿಶ್ಲೇಷಕ ವಿವೇಕ್ ಭಾವಸರ್ ಹೇಳಿದರು.

ಪ್ರಧಾನಿ ಹುದ್ದೆಯ ಅಭ್ಯರ್ಥಿ ಯಾರು?: ಕಳೆದ 40 ವರ್ಷಗಳಿಂದ ರಾಷ್ಟ್ರ ರಾಜಕಾರಣದಲ್ಲಿರುವ ಶರದ್ ಪವಾರ್ ಅವರು ಪ್ರಧಾನಿಯಾಗುವ ಆಸೆಯನ್ನು ಯಾವತ್ತೂ ಮುಚ್ಚಿಟ್ಟಿಲ್ಲ. ಆದರೆ, ಶರದ್ ಪವಾರ್​ಗೆ ವಾಸ್ತವದಲ್ಲಿ ಅಂತಹ ಅವಕಾಶ ಸಿಗಲೇ ಇಲ್ಲ. ಕಾಂಗ್ರೆಸ್​ನಲ್ಲಿದ್ದಾಗ ಪ್ರಧಾನಿ ಹುದ್ದೆ ನೀಡಿದ ನಂತರ ತಮ್ಮದೇ ಪಕ್ಷವನ್ನು ಸ್ಥಾಪಿಸಿ, ಅದೃಷ್ಟ ಪರೀಕ್ಷೆಗೆ ಯತ್ನಿಸಿದರು.

ಆದರೆ, ಅವರ ಪಕ್ಷಕ್ಕೆ ಬಲ ಬರಲೇ ಇಲ್ಲ. ಮಹಾರಾಷ್ಟ್ರದಲ್ಲಿ ಕೇವಲ ನಾಲ್ವರು ಸಂಸದರ ಬಲದ ಮೇಲೆ ಪ್ರಧಾನಿ ಹುದ್ದೆ ಸಿಗುವುದಿಲ್ಲ ಎಂಬುದು ಶರದ್ ಪವಾರ್​ಗೆ ಖಚಿತವಾಗಿದೆ. ಅಲ್ಲದೇ ತೃತೀಯ ಮೈತ್ರಿಕೂಟದ ಸಂದರ್ಭದಲ್ಲಿ ಪ್ರಧಾನಿ ಹುದ್ದೆಯ ಅಭ್ಯರ್ಥಿಯನ್ನು ಪ್ರಕಟಿಸಿದರೆ, ಮೈತ್ರಿ ಉಳಿಯುವುದಿಲ್ಲ ಹಾಗಾಗಿ ಹೆಚ್ಚು ಸಂಸದರನ್ನು ಹೊಂದಿರುವ ಪಕ್ಷವೇ ಪ್ರಧಾನಿಯಾಗಲಿದೆ ಎಂಬ ಅಲಿಖಿತ ನಿಯಮದ ಮೇಲೆ ಮೂರನೇ ಮೈತ್ರಿಕೂಟ ನಿಂತಿದೆ.

ಇದನ್ನೂ ಓದಿ: ಅದಾನಿ ಸಮೂಹಕ್ಕೆ ನೆರವು ನೀಡಲು ಮುಂದಾದ 3 ಜಪಾನ್​ ಬ್ಯಾಂಕ್​ಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.