ETV Bharat / bharat

ಸೋತಲ್ಲೇ ಗೆಲ್ಲುವ ಹಠ.. ಯುಪಿಯಲ್ಲಿ ಸೋಲಿನ ಪರಾಮರ್ಶೆ.. ವಿಧಾನಸಭೆ ಚುನಾವಣೆಯತ್ತ ಪ್ರಿಯಾಂಕಾ ಗಾಂಧಿ ಚಿತ್ತ!

author img

By

Published : Jun 7, 2019, 10:07 AM IST

Priyanka

ಕಾಂಗ್ರೆಸ್ಸಿನ ವರ್ಚಸ್ವಿ ನಾಯಕಿ ಎಂದು ಕರೆಸಿಕೊಂಡಿದ್ದ ಪ್ರಿಯಾಂಕಾರನ್ನು ಪೂರ್ವ ಉತ್ತರಪ್ರದೇಶದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿತ್ತು. ಆದರೂ ರಾಯ್​ಬರೇಲಿಯಲ್ಲಿ ಸೋನಿಯಾಗಾಂಧಿ ಗೆಲುವು ಬಿಟ್ಟರೆ ಕಾಂಗ್ರೆಸ್‌ಗೆ ಮತ್ಯಾವ ಸ್ಥಾನಗಳೂ ದೊರೆಯಲಿಲ್ಲ. ಇಂತಹ ಹೀನಾಯ ಸೋಲು ಏಕಾಯ್ತು? ಎಂಬ ಬಗ್ಗೆಯೇ ಪ್ರಿಯಾಂಕಾ ಇಂದು ಚರ್ಚೆ ನಡೆಸಲಿದ್ದಾರೆ.

ಲಖನೌ: ಉತ್ತರಪ್ರದೇಶದಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಕೇವಲ ಒಂದು ಸ್ಥಾನ ಗೆದ್ದು ತೀವ್ರ ಮುಖಭಂಗ ಅನುಭವಿಸಿತು. ಇದೀಗ ಸೋಲಿನ ಪರಾಮರ್ಶೆ ಮಾಡಲು ಪ್ರಿಯಾಂಕಾ ಗಾಂಧಿ ಇಂದು ಪ್ರಯಾಗ್​ರಾಜ್​ಗೆ ಭೇಟಿ ನೀಡಲಿದ್ದಾರೆ.

ಕಾಂಗ್ರೆಸ್ಸಿನ ವರ್ಚಸ್ವಿ ನಾಯಕಿ ಎಂದು ಕರೆಸಿಕೊಂಡಿದ್ದ ಪ್ರಿಯಾಂಕಾರನ್ನು ಪೂರ್ವ ಉತ್ತರಪ್ರದೇಶದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿತ್ತು. ಆದರೂ ರಾಯ್​ಬರೇಲಿಯಲ್ಲಿ ಸೋನಿಯಾಗಾಂಧಿ ಗೆಲುವು ಬಿಟ್ಟರೆ ಕಾಂಗ್ರೆಸ್​ಗೆ ಮತ್ಯಾವ ಸ್ಥಾನಗಳೂ ದೊರೆಯಲಿಲ್ಲ. ಇಂತಹ ಹೀನಾಯ ಸೋಲು ಏಕಾಯ್ತು? ಎಂಬ ಬಗ್ಗೆಯೇ ಪ್ರಿಯಾಂಕಾ ಇಂದು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

ಕಳೆದ ಶನಿವಾರ ಪೂರ್ವಾಂಚಲದ 40 ಅಭ್ಯರ್ಥಿಗಳೊಂದಿಗೆ ಪ್ರಿಯಾಂಕಾ ಸಭೆ ನಡೆಸಿದ್ದರು. ಎಲ್ಲ ರೀತಿಯಲ್ಲೂ ಪರಾಮರ್ಶೆ ನಡೆಸುತ್ತಿರುವ ಅವರು, ಉತ್ತರ ಪ್ರದೇಶದ ಕಾಂಗ್ರೆಸ್​ನಲ್ಲಿ ಸಾಕಷ್ಟು ಬದಲಾವಣೆ ತರುವ ಸಾಧ್ಯತೆ ಇದೆ.

2020ರಲ್ಲಿ ಉತ್ತರಪ್ರದೇಶದ ವಿಧಾನಸಭೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್​ನಲ್ಲಿ ಅಗತ್ಯ ತಯಾರಿ ಆಗಲೇಬೇಕಿದೆ. ಈ ಕಾರಣ ಇಂದಿನ ಭೇಟಿಯಲ್ಲಿ ಪ್ರಿಯಾಂಕಾ 40 ಜಿಲ್ಲೆಗಳ ಪಕ್ಷದ ಮುಖ್ಯಸ್ಥರನ್ನು ಭೇಟಿ ಮಾಡಿ, ಚರ್ಚೆ ನಡೆಸಲಿದ್ದಾರೆ. ಪಕ್ಷದಲ್ಲಿನ ಭಿನ್ನಮತ ಶಮನಗೊಳಿಸಿ ಉತ್ತಮ ಸಂಘಟನೆ ಮಾಡಬೇಕಾದ ಜವಾಬ್ದಾರಿಯೂ ಪ್ರಿಯಾಂಕಾರ ಹೆಗಲ ಮೇಲಿದೆ.

Intro:Body:

Priyanka 


Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.