ಕರ್ನಾಟಕ

karnataka

ದೀಪಾವಳಿಗೆ ದುಬಾರಿಯಾದ ಚೆಂಡು ಹೂವಿನ ದರ!

By

Published : Nov 14, 2020, 4:05 PM IST

ಮುದ್ದೇಬಿಹಾಳ: ಕೊರೊನಾ ಹಾವಳಿ, ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಈ ಸಲದ ದೀಪಾವಳಿ ರಂಗೇರಿದ್ದರೂ ಪ್ರಮುಖ ಆಕರ್ಷಣೆಯಾದ ಚೆಂಡು ಹೂವಿನ ದರ ಗಗನಕ್ಕೇರಿದೆ. ಪಟ್ಟಣದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಚೆಂಡು ಹೂವು ಆವಕವಾಗಿಲ್ಲ. ಈ ಹಿನ್ನೆಲೆ ಬಂದಷ್ಟೇ ಹೂವಿಗೆ ಬಂಗಾರದ ಬೆಲೆ ಬಂದಂತಾಗಿದೆ. ಕೆಜಿಯೊಂದಕ್ಕೆ 150-200 ರೂ.ನಂತೆ ಮಾರಾಟವಾಗುತ್ತಿದ್ದು, ಗ್ರಾಹಕರು ಹೂವಿನ ಬೆಲೆ ಕೇಳಿ ಶಾಕ್ ಆಗುತ್ತಿದ್ದಾರೆ. ಇನ್ನು ಮಾರುಕಟ್ಟೆಯಲ್ಲಿ ಬಾಳೆ ದಿಂಡು, ಕುಂಬಳಕಾಯಿ, ಹಸಿ ತೆಂಗು, ಚೆಂಡು ಹೂವಿನ ಗಿಡ, ಮಾವಿನ ಎಲೆ ಹಾಗೂ ಅಲಂಕಾರಿಕ ಸಾಮಗ್ರಿಗಳ ಖರೀದಿ ಸಹ ಜೋರಾಗಿದೆ.

ABOUT THE AUTHOR

...view details