ಕರ್ನಾಟಕ

karnataka

ಹುಲಿಹೈದರ ಗ್ರಾಮದ ಗುಂಪು ಘರ್ಷಣೆ.. 30 ಜನರ ವಿರುದ್ಧ ಮತ್ತೊಂದು ದೂರು ದಾಖಲು

By

Published : Aug 13, 2022, 1:56 PM IST

ಹುಲಿಹೈದರ ಗ್ರಾಮ
Hulihaidar village

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ನಡೆದ ಗುಂಪು ಘರ್ಷಣೆಗೆ ಸಂಬಂಧಿಸಿದಂತೆ ಮತ್ತೊಂದು ದೂರು ನೀಡಲಾಗಿದ್ದು, 30 ಜನರ ವಿರುದ್ಧ ಎಫ್ಐಆರ್​ ​ದಾಖಲಾಗಿದೆ.

ಗಂಗಾವತಿ: ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ನಡೆದ ಕೋಮು ಘರ್ಷಣೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡ ಘಟನೆಗೆ ಸಂಬಂಧಿಸಿದಂತೆ ಮತ್ತೊಂದು ದೂರು ದಾಖಲಾಗಿದ್ದು, 30 ಜನರ ವಿರುದ್ಧ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಫ್ಐಆರ್​ ಪ್ರತಿ

ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಯಂಕಪ್ಪ ತಳವಾರ ಅವರ ಪತ್ನಿ ಹಂಪಮ್ಮ ತಳವಾರ, ತನ್ನ ಪತಿ ಮನೆಯಲ್ಲಿದ್ದಾಗ ಆರೋಪಿಗಳು ಅಕ್ರಮ ಕೂಟ ರಚಿಸಿಕೊಂಡು ಬಂದು ಹಲ್ಲೆ ಮಾಡಿ ಮಾರಣಾಂತಿಕವಾಗಿ ಗಾಯಗೊಳಿಸಿದ್ದಾರೆ. ಇದಕ್ಕೆ ಸಣ್ಣ ಹನುಮಂತ ಮರಿಯಪ್ಪ ಹರಿಜನ ಸೇರಿದಂತೆ 30 ಜನ ಕಾರಣ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಘಟನೆಯಲ್ಲಿ ಮೃತಪಟ್ಟ ಪಾಷಾವಲಿ ಎಂಬ ಯುವಕನ ಸಹೋದರ ಖಾದರಾಬಾಷ ಈಗಾಗಲೇ ಕನಕಗಿರಿ ಠಾಣೆಯಲ್ಲಿ 28 ಜನರ ಮೇಲೆ ದೂರು ದಾಖಲಿಸಿದ್ದರು. ಇದೀಗ ಮತ್ತೊಂದು ಪ್ರಕರಣ ದಾಖಲಾಗಿದ್ದು, ಪರ-ವಿರೋಧ ದೂರಿನಲ್ಲಿ ಒಟ್ಟು 58 ಜನರ ಮೇಲೆ ಎಫ್ಐಆರ್ ದಾಖಲಾಗಿದೆ.

ಇದನ್ನೂ ಓದಿ:ಹುಲಿಹೈದರ ಪ್ರಕರಣಕ್ಕೆ ಶಾಸಕ, ಪೊಲೀಸರೇ ಹೊಣೆ: ಕೆಪಿಸಿಸಿ ವಕ್ತಾರ ಮುಕುಂದರಾವ್

ABOUT THE AUTHOR

...view details