ಕರ್ನಾಟಕ

karnataka

G20 Summit: 'ನಿಮ್ಮ ನಾಯಕತ್ವದಲ್ಲಿ ಎಲ್ಲರ ಏಳಿಗೆ'.. ಪ್ರಧಾನಿ ಮೋದಿ ಕುರಿತು ಬಾಲಿವುಡ್​ ಕಿಂಗ್​ ಶಾರುಖ್​ ಟ್ವೀಟ್​

By ETV Bharat Karnataka Team

Published : Sep 10, 2023, 7:36 PM IST

Updated : Sep 10, 2023, 8:00 PM IST

Shah Rukh Khan congratulates PM Modi: ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಶೃಂಗಸಭೆ ಯಶಸ್ಸಿಗೆ ನಟ ಶಾರುಖ್​ ಖಾನ್​​ ಟ್ವಿಟ್​ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

shah rukh khan on g20 summit
ಜಿ20 ಶೃಂಗಸಭೆ ಯಶಸ್ಸಿಗೆ ಶಾರುಖ್​ ಅಭಿನಂದನೆ

ಇತ್ತೀಚೆಗಷ್ಟೇ ತೆರೆಕಂಡು ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿರುವ ಜವಾನ್​ ಸಿನಿಮಾದ ನಾಯಕ ನಟ ಶಾರುಖ್​ ಖಾನ್​​ ಅವರು ಜಿ20 ಶೃಂಗಸಭೆ ಯಶಸ್ಸಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದ್ದಾರೆ.

ಇಂಡಿಯನ್​ ಸೂಪರ್​ ಸ್ಟಾರ್​ ಎಸ್​ಆರ್​ಕೆ ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್​​ X (ಹಿಂದಿನ ಟ್ವಿಟರ್​) ನಲ್ಲಿ ಜಿ20 ಶೃಂಗಸಭೆ ಯಶಸ್ಸಿನ ಕುರಿತು ಬರೆದುಕೊಂಡಿದ್ದಾರೆ. ''ಭಾರತದ ಅಧ್ಯಕ್ಷತೆಯ ಜಿ20 ಶೃಂಗಸಭೆ ಯಶಸ್ಸಿಗೆ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ವಿಶ್ವದ ಜನರ ಉತ್ತಮ ಭವಿಷ್ಯಕ್ಕಾಗಿ ರಾಷ್ಟ್ರಗಳ ನಡುವೆ ಏಕತೆ ಪೋಷಿಸಿರುವುತ್ತಿರುವುದಕ್ಕಾಗಿ ಅಭಿನಂದನೆಗಳು'' ಎಂದು ಬರೆದುಕೊಂಡಿದ್ದಾರೆ. ದೇಶದ ಸಮೃದ್ಧಿ ದೃಷ್ಟಿಯಲ್ಲಿ ಪಿಎಂ ಮೋದಿ ನಾಯಕತ್ವವನ್ನು ಎಸ್​ಆರ್​ಕೆ ಶ್ಲಾಘಿಸಿದ್ದಾರೆ.

ನವದೆಹಲಿಯಲ್ಲಿ ಐತಿಹಾಸಿಕ ಜಿ20 ಶೃಂಗಸಭೆ ಮುಕ್ತಾಯಗೊಂಡಂತೆ ಶಾರುಖ್​ ಖಾನ್​​ ಪ್ರಧಾನಿ ಬಗ್ಗೆ ಈ ರೀತಿಯಾಗಿ ಹಾಡಿ ಹೊಗಳಿದ್ದಾರೆ. ''ಇದು ಪ್ರತಿ ಭಾರತೀಯನ ಹೃದಯದಲ್ಲಿ ಗೌರವ ಹಾಗೂ ಹೆಮ್ಮೆಯ ಭಾವನೆ ಮೂಡಿಸಿದೆ. ಸರ್​, ನಿಮ್ಮ ನಾಯಕತ್ವದಲ್ಲಿ, ನಾವು ಏಕತೆಯಲ್ಲಿ ಏಳಿಗೆ ಹೊಂದುತ್ತೇವೆ, ಏಂಕಾಂತದಲ್ಲಿ ಅಲ್ಲ. ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ'' ಎಂದು ಬರೆದುಕೊಂಡಿದ್ದಾರೆ. ಈ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ:UI: ನಾಳೆ ಬಹುನಿರೀಕ್ಷಿತ ಯುಐ ಟೀಸರ್​ ಅನಾವರಣ - ಉಪ್ಪಿ ಅಭಿಮಾನಿಗಳಲ್ಲಿ ಕುತೂಹಲ

ಇನ್ನೂ ಜವಾನ್​ ಸಿನಿಮಾ ಬಿಡುಗಡೆ ಆದ ಮೂರೇ ದಿನದಲ್ಲಿ 200 ಕೋಟಿ ರೂ. ಗಡಿ ದಾಟಿದೆ. ಪಠಾಣ್​ ಬಳಿಕ ಮತ್ತೊಂದು ಬ್ಲಾಕ್​ಬಸ್ಟರ್​​ ಖುಷಿಯಲ್ಲಿ ಬಾಲಿವುಡ್​ ಬಾದ್​ಶಾ ತೇಲುತ್ತಿದ್ದಾರೆ. ದಕ್ಷಿಣ ಚಿತ್ರರಂಗದ ಖ್ಯಾತ ನಿರ್ದೇಶಕ ಅಟ್ಲೀ ಆ್ಯಕ್ಷನ್​ ಕಟ್​ ಹೇಳಿರುವ ಈ ಸಿನಿಮಾ ಹಲವು ಬಾಕ್ಸ್​​ ಫೀಸ್​ ದಾಖಲೆಗಳನ್ನು ಮುರಿದಿದೆ. ಒಂದೇ ವರ್ಷದಲ್ಲಿ ಎರಡು ಯಶಸ್ವಿ ಚಿತ್ರಗಳನ್ನು ನೀಡಿದ ಗೌರವಕ್ಕೆ ಎಸ್​ಆರ್​ಕೆ ಪಾತ್ರರಾಗಿದ್ದಾರೆ. ಚಿತ್ರದಲ್ಲಿ ಎಸ್​ಆರ್​ಕೆ ಜೊತೆಗೆ ದಕ್ಷಿಣ ಚಿತ್ರರಂಗದ ಖ್ಯಾತ ಕಲಾವಿದರಾದ ನಟ ವಿಜಯ್​ ಸೇತುಪತಿ ಮತ್ತು ನಟಿ ನಯನತಾರಾ ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ. ದಕ್ಷಿಣ ಚಿತ್ರರಂಗದೊಂದಿಗೆ ಕೈ ಜೋಡಿಸಿ ಎಸ್​ಆರ್​ಕೆ ಮಾಡಿದ ಮೊದಲ ಸಿನಿಮಾವಿದು. ತಮ್ಮದೇ ಬ್ಯಾನರ್​ ರೆಡ್​ ಚಿಲ್ಲೀಸ್​​ ಅಡಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ:ಕಣ್ಣಪ್ಪ ಸಿನಿಮಾದಲ್ಲಿ ಶಿವನ ಪಾತ್ರ ವಹಿಸಲಿರುವ ಪ್ರಭಾಸ್​.. ಆದಿಪುರುಷ್​ ನಟಿ ಕೃತಿ ಸಹೋದರಿ ಜೊತೆ ಸ್ಕ್ರೀನ್​ ಶೇರ್

ಭಾರತದ ಅಧ್ಯಕ್ಷತೆಯಲ್ಲಿ ಜಿ20 ಶೃಂಗಸಭೆ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಹಲವು ಪ್ರಮುಖ ವಿಚಾರಗಳ ಚರ್ಚೆ ನಡೆದಿದೆ. ಮುಂದಿನ ಸಭೆಯ ಜವಾಬ್ದಾರಿ ಬ್ರೆಜಿಲ್​ ದೇಶದ ಹೆಗಲೇರಿದೆ. ಡಿಸೆಂಬರ್​​ 1 ರಂದು ಅಧಿಕೃತವಾಗಿ ಬ್ರೆಜಿಲ್​​ ಒಕ್ಕೂಟದ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲಿದೆ.

Last Updated :Sep 10, 2023, 8:00 PM IST

ABOUT THE AUTHOR

...view details