ಕರ್ನಾಟಕ

karnataka

42 ಅಯ್ಯಪ್ಪ ಭಕ್ತಾದಿಗಳನ್ನು ಕಾಪಾಡಿ ಪ್ರಾಣ ಬಿಟ್ಟ ಬಸ್​ ಚಾಲಕ!

By

Published : Nov 25, 2022, 2:13 PM IST

bus driver died after save 42 Ayyappa devotees  save 42 Ayyappa devotees in Andhra Pradesh  bus driver save Ayyappa devotees  ಅಯ್ಯಪ್ಪ ಭಕ್ತಾದಿಗಳನ್ನು ಕಾಪಾಡಿ ಪ್ರಾಣ ಬಿಟ್ಟ ಬಸ್​ ಚಾಲಕ  ರನ್ನಿಂಗ್​ ಬಸ್ ವೇಳೆ ಚಾಲಕನಿಗೆ ಎದೆ ನೋವು  ಅಯ್ಯಪ್ಪ ಭಕ್ತಾದಿಗಳನ್ನು ಕಾಪಾಡಿ ಪ್ರಾಣ ಬಿಟ್ಟ  ರನ್ನಿಂಗ್​ ಬಸ್​ ವೇಳೆ ತೀವ್ರ ಎದೆ ನೋವು  ಬಸ್ ಚಾಲಕ ಭಾಸ್ಕರ್ ರಾವ್  ಅಯ್ಯಪ್ಪ ಭಕ್ತರು ಕಣ್ಣೀರಿಟ್ಟರು
ಅಯ್ಯಪ್ಪ ಭಕ್ತಾದಿಗಳನ್ನು ಕಾಪಾಡಿ ಪ್ರಾಣ ಬಿಟ್ಟ ಬಸ್​ ಚಾಲಕ

42 ಮಂದಿ ಅಯ್ಯಪ್ಪ ಭಕ್ತಾದಿಗಳನ್ನು ಕಾಪಾಡಿ ಬಸ್‌ ಚಾಲಕನೋರ್ವ ಪ್ರಾಣ ಬಿಟ್ಟಿರುವ ಘಟನೆ ಆಂಧ್ರಪ್ರದೇಶ ಶ್ರೀಪೊಟ್ಟಿ ಶ್ರೀರಾಮುಲು ನೆಲ್ಲೂರು ಜಿಲ್ಲೆಯಲ್ಲಿ ನಡೆದಿದೆ.

ನೆಲ್ಲೂರು(ಆಂಧ್ರಪ್ರದೇಶ):ಬಸ್‌ ಸಂಚರಿಸುತ್ತಿದ್ದಾಗಚಾಲಕನಿಗೆ ತೀವ್ರ ಎದೆ ನೋವು ಕಾಣಿಸಿಕೊಂಡಿದ್ದು, 42 ಅಯ್ಯಪ್ಪ ಭಕ್ತರನ್ನು ಕಾಪಾಡಿ ಪ್ರಾಣ ಬಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಇದೇ ತಿಂಗಳ 16ರಂದು ಕಾಕಿನಾಡ ಜಿಲ್ಲೆಯ ಕಿರ್ಲಂಪುಡಿ ತಾಲೂಕಿನ ತಾಮರಡದ 42 ಅಯ್ಯಪ್ಪ ಭಕ್ತರು ಖಾಸಗಿ ಟ್ರಾವೆಲ್ ಬಸ್‌ನಲ್ಲಿ ಶಬರಿಮಲೆಗೆ ತೆರಳಿದ್ದರು. ಬಸ್ ಚಾಲಕ ಭಾಸ್ಕರ್ ರಾವ್ (38) ತಾಮರಡದಿಂದ ಹೊರಟು ಗುರುವಾರ ಸಂಜೆ ಬೋಗೋಲು ತಾಲೂಕಿನ ಕಡನೂತಾಳ ಹೊಂಡ ಪ್ರದೇಶಕ್ಕೆ ಬಂದಾಗ ಹೃದಯ ಬೇನೆ ಕಾಣಿಸಿಕೊಂಡಿದೆ. ಆದ್ರೂ ಸಹ ಅವರು ಬಸ್​ ನಿಲ್ಲಿಸದೇ ಮುಂದೆ ಸಾಗಿದ್ದಾರೆ. ಫ್ಲೈಓವರ್ ಹತ್ತಿದ ನಂತರ ಭಾಸ್ಕರ್​ ರಾವ್​ಗೆ ಎದೆ ನೋವು ಹೆಚ್ಚಾಗಿದೆ. ಬಳಿಕ ಅವರು ಬಸ್​ ಅನ್ನು ರಸ್ತೆ ಪಕ್ಕದ ನಿಲ್ಲಿಸಿ ಹಿಂಬದಿ ಸೀಟ್​ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.

ಇದನ್ನು ಗಮನಿಸಿದ ಅಯ್ಯಪ್ಪ ಮಾಲಾಧಾರಿಗಳು ಅವರನ್ನು ವಿಚಾರಿಸಲು ಮುಂದಾದಾಗ ಸಾವನ್ನಪ್ಪಿರುವುದು ಕಂಡುಬಂತು. ನಿಮ್ಮ ಪ್ರಾಣ ಹೋಗುತ್ತಿದ್ದರೂ ನಮ್ಮನ್ನು ಕಾಪಾಡಿದಿಯಾ ಸ್ವಾಮಿ ಎಂದು ಕಣ್ಣೀರಿಟ್ಟರು. ಭಾಸ್ಕರ್ ರಾವ್ ಅವರ ಮೃತದೇಹವನ್ನು ಅವರ ಸ್ವಗ್ರಾಮವಾದ ಆಂಬ್ಯುಲೆನ್ಸ್‌ ಮೂಲಕ ಕಳುಹಿಸಲಾಯಿತು.

ಇದನ್ನೂ ಓದಿ:ಬೈಕ್ ಸವಾರರನ್ನು ಬಚಾವ್ ಮಾಡಲು ಹೋಗಿ ಮರಕ್ಕೆ ಗುದ್ದಿದ ಕೆಎಸ್​ಆರ್​ಟಿಸಿ ಬಸ್

ABOUT THE AUTHOR

...view details