ಹಾವೇರಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನಿನ್ನೆ ಬ್ಯಾಡಗಿ ತಾಲೂಕಿನಲ್ಲಿ ರೋಡ್ ಶೋ ನಡೆಸಿ ಬಸವರಾಜ್ ಬೊಮ್ಮಾಯಿ ಪರ ಮತಯಾಚಿಸಿದರು. ಈ ವೇಳೆ, ಮಾತನಾಡಿದ ಅವರು, ಬೊಮ್ಮಾಯಿ ಪರ ಮತಯಾಚಿಸಲು ಬಂದಿದ್ದೇನೆ. ಇಲ್ಲಿಯ ಉತ್ಸಾಹ ಚಪ್ಪಾಳೆ ಜೋಶ್ ಶಕ್ತಿ ನೋಡಿದರೆ ನನಗೆ ಬೊಮ್ಮಾಯಿ ಸಂಸದರಾಗುವ ಭರವಸೆ ಸಿಕ್ಕಿದೆ.
ಬೊಮ್ಮಾಯಿಯನ್ನ ದೆಹಲಿಗೆ ಕಳಿಸಿಕೊಡುತ್ತೀರಿ ಎಂಬ ವಿಶ್ವಾಸವೂ ಸಿಕ್ಕಿದೆ. ಈ ಚುನಾವಣೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಮತ್ತು ಮೋದಿ ಸಂಕಲ್ಪ ಪೂರ್ತಿಮಾಡುವ ಚುನಾವಣೆ ಅಗಿದೆ. ಮೋದಿ ಯುವಕರು, ರೈತರು, ವ್ಯಾಪಾರಿಗಳು ಸೇರಿದಂತೆ ಎಲ್ಲರ ಬಗ್ಗೆ ಚಿಂತನೆ ಮಾಡುತ್ತಾರೆ. ವಿದೇಶದಲ್ಲಿ ಭಾರತದ ಹೆಸರು ಬೆಳೆಸಿದ್ದಾರೆ. ಹಾಗಾಗಿ ಪ್ರಧಾನಿ ಅವರನ್ನು ನೀವು ಗೆಲ್ಲಿಸಿದರೆ ಆರ್ಥಿಕವಾಗಿ ವಿಶ್ವದಲ್ಲಿ ಭಾರತ ಮೂರನೇ ಸ್ಥಾನಕ್ಕೆ ತಲುಪಲಿದೆ.
ಐಎನ್ಡಿಐಎ ಅಲೈನ್ಸನಲ್ಲಿ ನಮ್ಮ ರೀತಿ ಪ್ರಧಾನಿ ಅಭ್ಯರ್ಥಿ ಇಲ್ಲಾ. ಕಾಂಗ್ರೆಸ್ ಅಕ್ಕಿ, ವಿಮಾನ, ಹೆಲಿಕಾಪ್ಟರ್ ಖರೀದಿಯಲ್ಲಿ ಭ್ರಷ್ಟಾಚಾರ ಮಾಡಿದೆ. ಕಾಂಗ್ರೆಸ್ ಅಂದರೆ ಕಮಿಷನ್, ಕರಪ್ಷನ್. ಇಂಡಿ ಅಲೈನ್ಸ್ನಲ್ಲಿ ನಾಲ್ಕು ವರ್ಷದಲ್ಲಿ ಐದು ಪ್ರಧಾನಿ ಮಾಡುತ್ತಾರೆ. ನಮ್ಮ ರೀತಿ ಮೋದಿಯಂತೆ ಕಾಂಗ್ರೆಸ್ ಮೈತ್ರಿಕೂಟದಲ್ಲಿ ನಾಯಕರು ಯಾರಿದ್ದಾರೆ. ಲಾಲೂ ಪ್ರಸಾದ್ ಯಾದವ್, ಅಖಿಲೇಶ, ಮಮತಾ, ಡಿಎಂಕೆ ಎಲ್ಲರೂ ಭ್ರಷ್ಟಾಚಾರಿಗಳೇ ಎಂದು ನಡ್ಡಾ ಆರೋಪಿಸಿದರು. ಸೋನಿಯಾ, ರಾಹುಲ್, ಚಿದಂಬರಂ, ಸಂಜಯಸಿಂಗ್ ಡಿಕೆಶಿ ಎಲ್ಲರೂ ಬೇಲ್ ಮೇಲೆ ಹೊರಗಿದ್ದಾರೆ. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಸೇರಿದಂತೆ ಹಲವರು ಜೈಲಿನಲ್ಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈ ಬಾರಿ ಚುನಾಚಣೆಯಲ್ಲಿ ಮೋದಿ ನೇತೃತ್ವದಲ್ಲಿ ನಮಗೆ 400 ಸ್ಥಾನಗಳು ಸಿಗಲಿವೆ. ಮೋದಿ ಮತ್ತೊಮ್ಮೆ ಪ್ರಧಾನಿಯಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಹುಬ್ಬಳ್ಳಿಗೆ ಅಮಿತ್ ಶಾ: ನೋ ಡ್ರೋಣ್ ಜೋನ್ ಆದೇಶ ಹೊರಡಿಸಿದ ಕಮೀಷನರ್ - Amit Shah