ETV Bharat / state

ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಆಸ್ತಿ ಮೌಲ್ಯ ₹55.85 ಕೋಟಿ - B Y Raghavendra Assets

author img

By ETV Bharat Karnataka Team

Published : Apr 18, 2024, 9:44 PM IST

BJP candidate B Y Raghavendra filed nomination paper
ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ನಾಮಪತ್ರ ಸಲ್ಲಿಸಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರು ಚುನಾವಣಾ ಅಫಿಡವಿಟ್‌ನಲ್ಲಿ ತಮ್ಮ ಕುಟುಂಬದ ಆಸ್ತಿ ವಿವರ ಸಲ್ಲಿಸಿದ್ದಾರೆ.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿದರು.

ಶಿವಮೊಗ್ಗ: ಬಿ.ಎಸ್‌.ಯಡಿಯೂರಪ್ಪನವರ ಹಿರಿಯ ಪುತ್ರ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಇಂದು ತಮ್ಮ ನಾಮಪತ್ರ ಸಲ್ಲಿಸಿದರು. ಇದೇ ವೇಳೆ ತಮ್ಮ ಹಾಗೂ ಪತ್ನಿಯ ಆಸ್ತಿ ವಿವರ ನೀಡಿದ್ದಾರೆ. ರಾಘವೇಂದ್ರ ಒಟ್ಟು 55.85 ಕೋಟಿ ರೂ. ಮೌಲ್ಯದ ಸ್ಥಿರ ಹಾಗೂ ಚರಾಸ್ತಿ ಹೊಂದಿದ್ದಾರೆ. ಪತ್ನಿ ತೇಜಸ್ವಿನಿ 17.86 ಕೋಟಿ ರೂ. ಮೌಲ್ಯದ ಸ್ಥಿರ ಹಾಗೂ ಚರಾಸ್ತಿ ಹೊಂದಿರುವ ಮಾಹಿತಿ ಒದಗಿಸಿದ್ದಾರೆ.

ರಾಘವೇಂದ್ರ ಅವರು ಒಟ್ಟು 73.71 ಕೋಟಿ ರೂ ಮೌಲ್ಯದ ಆಸ್ತಿ ವಿವರವನ್ನು ತಮ್ಮ ಅಫಿಡವಿಟ್‌ನಲ್ಲಿ ನೀಡಿದ್ದಾರೆ. ತಮ್ಮ ಬಳಿ 33,291 ರೂ. ನಗದು ಹಾಗು ಪತ್ನಿ ಬಳಿ 9.39 ಲಕ್ಷ ರೂ ನಗದು ಇರುವುದಾಗಿ ವಿವರ ನೀಡಿದ್ದಾರೆ. ರಾಘವೇಂದ್ರ ವಿವಿಧ ಬ್ಯಾಂಕ್‌ಗಳಲ್ಲಿ 13 ಖಾತೆ ಹೊಂದಿದ್ದಾರೆ. 13 ಅಕೌಂಟ್‌ಗಳಲ್ಲಿ 98.01 ಲಕ್ಷ ರೂ. ಹೊಂದಿದ್ದಾರೆ. ತೇಜಸ್ವಿನಿ ವಿವಿಧ ಬ್ಯಾಂಕ್‌ಗಳಲ್ಲಿ 08 ಖಾತೆ ಹೊಂದಿದ್ದಾರೆ. ಇವರು ತಮ್ಮ ಖಾತೆಗಳಲ್ಲಿ 25.65 ಲಕ್ಷ ರೂ. ಹೊಂದಿದ್ದಾರೆ. ರಾಘವೇಂದ್ರ ಸುಮಾರು 15 ಕಂಪನಿಗಳಲ್ಲಿ 7.68 ಕೋಟಿ ಹೂಡಿಕೆ ಮಾಡಿದ್ದಾರೆ. ತೇಜಸ್ವಿನಿ 6 ಕಂಪನಿಗಳಲ್ಲಿ 1.22 ಕೋಟಿ ಹೂಡಿಕೆ ಮಾಡಿದ್ದಾರೆ.

ಪತ್ನಿ, ತಮ್ಮ, ಮಕ್ಕಳಿಗೆ ಕೋಟಿ ಕೋಟಿ ಸಾಲ: ರಾಘವೇಂದ್ರ ಪತ್ನಿ ತೇಜಸ್ವಿನಿಗೆ 5.4 ಕೋಟಿ ರೂ, ಸಹೋದರ ವಿಜಯೇಂದ್ರಗೆ 85 ಲಕ್ಷ ರೂ, ಪುತ್ರ ಭಗತ್‌ಗೆ 65 ಲಕ್ಷ ರೂ ಹಾಗೂ ಸುಭಾಷ್‌ಗೆ 85 ಲಕ್ಷ ರೂ ಸಾಲ ನೀಡಿದ್ದಾರೆ. ಅಲ್ಲದೆ ಸಂಬಂಧಿಗಳು ಹಾಗೂ ವಿವಿಧ ಕಂಪನಿಗಳಿಗೆ ಒಟ್ಟು 20.39 ಕೋಟಿ ಸಾಲ ನೀಡಿದ್ದಾರೆ.

ವಾಹನಗಳ ವಿವರ: ರಾಘವೇಂದ್ರ ಅವರು ಅಂಬಾಸಿಡರ್ ಕಾರು, ಟ್ರ್ಯಾಕ್ಟರ್ ಹಾಗೂ ಟಯೋಟಾ ಫಾರ್ಚೂನರ್ ಕಾರು ಹೊಂದಿದ್ದಾರೆ.

ಚಿನ್ನಾಭರಣ: ರಾಘವೇಂದ್ರ 1021.50 ಗ್ರಾಂ ಚಿನ್ನ ಹಾಗೂ 8.6 ಕೆ.ಜಿ ಬೆಳ್ಳಿ ಹೊಂದಿದ್ದಾರೆ. ಇವರ ಬಳಿ 116.26 ಕ್ಯಾರೆಟ್ ವಜ್ರ ಮತ್ತು 42 ಕ್ಯಾರೆಟ್ ಬೆಲೆಬಾಳುವ ಹರಳುಗಳಿವೆ. ತೇಜಸ್ವಿನಿ 1395.92 ಗ್ರಾಂ ಚಿನ್ನ ಹಾಗೂ 5.1 ಕೆ.ಜಿ ಬೆಳ್ಳಿ ಹೊಂದಿದ್ದಾರೆ. 96.022 ಕ್ಯಾರೆಟ್ ವಜ್ರ ಹೊಂದಿದ್ದಾರೆ.

ಸಾಲ: ರಾಘವೇಂದ್ರ 69.39 ಲಕ್ಷ ರೂ ಸಾಲ ಮಾಡಿದ್ದಾರೆ. ಪತ್ನಿ ತೇಜಸ್ವಿನಿ 12.91 ಕೋಟಿ ಸಾಲ ಹೊಂದಿದ್ದಾರೆ.

ರಾಘವೇಂದ್ರ 3 ಲಕ್ಷ ಮತಗಳ ಅಂತರದಿಂದ ಗೆಲ್ತಾರೆ- ಬಿಎಸ್​ವೈ: ಮೈತ್ರಿ ಅಭ್ಯರ್ಥಿ ರಾಘವೇಂದ್ರ 3 ಲಕ್ಷ ಮತಗಳ ಅಂತರದಿಂದ ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ ಎಂದು ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಪುತ್ರ ಬಿ.ವೈ.ರಾಘವೇಂದ್ರ ಅವರ ನಾಮಪತ್ರದ ರೋಡ್ ಶೋನಲ್ಲಿ ಭಾಗಿಯಾಗಿ ನಂತರ ಮಾತನಾಡಿದ ಅವರು, ಮುಂಬರುವ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ದೇವೇಗೌಡರು ರಾಷ್ಟ್ರದಲ್ಲಿ ಓಡಾಟ ನಡೆಸುತ್ತಾರೆ. ನಮ್ಮ ರಾಜ್ಯದಲ್ಲಿನ 28 ಲೋಕಸಭಾ ಕ್ಷೇತ್ರವನ್ನು ನಾವು ಗೆಲ್ಲುತ್ತೇವೆ ಎಂದರು.

ಇದಕ್ಕೂ ಮುನ್ನ ರಾಘವೇಂದ್ರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ನಂತರ ನಡೆದ ರೋಡ್ ಶೋನಲ್ಲಿ ಬಿ.ಎಸ್.ಯಡಿಯೂರಪ್ಪ, ಹೆಚ್.ಡಿ.ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ಸಿ.ಟಿ.ರವಿ ಸೇರಿದಂತೆ ಇತರೆ ಬಿಜೆಪಿ ಮುಖಂಡರು ಭಾಗಿಯಾಗಿದ್ದರು. ಅಭಿಮಾನಿಗಳು ಸೇಬಿನ ಹಾರ ಹಾಕಿದರು. ಬಿಸಿಲಿನ ತಾಪಕ್ಕೆ ಯಡಿಯೂರಪ್ಪ ಸೇಬು ಹಣ್ಣುಗಳನ್ನು ಕಿತ್ತು ಅಭಿಮಾನಿಗಳಿಗೆ ನೀಡಿದ್ದು ವಿಶೇಷವಾಗಿತ್ತು.

ಇದನ್ನೂಓದಿ: ಧಾರವಾಡ: ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ದಿಂಗಾಲೇಶ್ವರ‌ ಸ್ವಾಮೀಜಿ - Dingaleshwar Swamiji

ETV Bharat Logo

Copyright © 2024 Ushodaya Enterprises Pvt. Ltd., All Rights Reserved.