ETV Bharat / bharat

ಗ್ಯಾಂಗ್​ಸ್ಟರ್​-ಉಗ್ರರ ನಂಟು ಪ್ರಕರಣ: ನಾಲ್ಕು ರಾಜ್ಯ ಸೇರಿ ಕೇಂದ್ರಾಡಳಿತ ಪ್ರದೇಶದಲ್ಲಿ ಎನ್​ಐಎ ದಾಳಿ

author img

By ANI

Published : Mar 12, 2024, 10:28 AM IST

Updated : Mar 12, 2024, 10:57 AM IST

NIA raids 30 places  NIA raids  Punjab
ನಾಲ್ಕು ರಾಜ್ಯ ಸೇರಿ ಕೇಂದ್ರಾಡಳಿತ ಪ್ರದೇಶದಲ್ಲಿ ಎನ್​ಐಎ ದಾಳಿ

ಎನ್‌ಐಎ ನಾಲ್ಕು ರಾಜ್ಯಗಳಲ್ಲಿ ದಾಳಿ ನಡೆಸಿದೆ. ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಮಧ್ಯಪ್ರದೇಶ ಹಾಗೂ ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢದಲ್ಲಿ ತನಿಖಾ ಸಂಸ್ಥೆ ಮಾಡಿದೆ.

ನವದೆಹಲಿ: ಖಲಿಸ್ತಾನ್​ ಗ್ಯಾಂಗ್​ಸ್ಟರ್​ ಮತ್ತು ಉಗ್ರರ ಸಂಪರ್ಕ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ನಾಲ್ಕು ರಾಜ್ಯಗಳಲ್ಲಿ ದಾಳಿ ನಡೆಸಿದೆ. ತನಿಖಾ ಸಂಸ್ಥೆಯು ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಹಾಗೂ ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢದಲ್ಲಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ಗ್ಯಾಂಗ್​ಸ್ಟರ್ ಮತ್ತು ಭಯೋತ್ಪಾದಕರ ನಡುವಿನ ಸಂಬಂಧದ ಬಗ್ಗೆ ತನಿಖೆ ಮಾಡಲಾಗುತ್ತಿದೆ.

ತನಿಖಾ ಸಂಸ್ಥೆಯು ಪಂಜಾಬ್‌ನ ಮೋಗಾದಲ್ಲಿ ವಿವಿಧ ಸ್ಥಳಗಳಲ್ಲಿ ದಾಳಿ ಮಾಡಿದೆ. ಎನ್‌ಐಎ ಜೊತೆಗೆ ಮೊಗಾ ಪೊಲೀಸರು ಕೂಡ ಹಾಜರಾಗಿದ್ದಾರೆ. ಮೊಗಾದ ನಿಹಾಲ್ ಸಿಂಗ್ ವಾಲಾ ಅವರ ಬಿಲಾಸ್‌ಪುರ ಗ್ರಾಮದಲ್ಲಿ ಎನ್‌ಐಎ ತಂಡ ತನಿಖೆ ನಡೆಸುತ್ತಿದೆ.

ಈ ಹಿಂದೆ ಸೆಪ್ಟೆಂಬರ್ 2023 ರಲ್ಲಿ, ಗ್ಯಾಂಗ್​ಸ್ಟರ್ಸ್​ ಮತ್ತು ಖಲಿಸ್ತಾನಿ ನೆಕ್ಸಸ್ ವಿರುದ್ಧ ಎನ್ಐಎ ಪ್ರಮುಖ ಕ್ರಮ ಕೈಗೊಂಡಿತ್ತು. ಪಂಜಾಬ್, ಹರಿಯಾಣ, ರಾಜಸ್ಥಾನ, ದೆಹಲಿ ಎನ್‌ಸಿಆರ್, ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ಸುಮಾರು 51 ಸ್ಥಳಗಳಲ್ಲಿ ತನಿಖಾ ಸಂಸ್ಥೆ ದಾಳಿ ನಡೆಸಿತ್ತು. ಭಯೋತ್ಪಾದಕರು, ದರೋಡೆಕೋರರು ಮತ್ತು ಡ್ರಗ್ ಡೀಲರ್‌ಗಳ ನಡುವಿನ ಸಂಬಂಧಕ್ಕೆ ಸಂಬಂಧಿಸಿದ 3 ಪ್ರಕರಣಗಳಲ್ಲಿ ಎನ್‌ಐಎ ಈ ಕ್ರಮ ಕೈಗೊಂಡಿದೆ.

ಐದು ತಿಂಗಳ ಹಿಂದೆ ದಾಳಿ: ಸೆಪ್ಟೆಂಬರ್‌ನಲ್ಲಿ ನಡೆಸಿದ ದಾಳಿಯಲ್ಲಿ ಎನ್‌ಐಎ ತಂಡ ಪಂಜಾಬ್‌ನಲ್ಲಿ ಗರಿಷ್ಠ 30 ಸ್ಥಾನಗಳನ್ನು ತಲುಪಿತ್ತು. ಅದೇ ಸಮಯದಲ್ಲಿ, ರಾಜಸ್ಥಾನದ 13 ಸ್ಥಳಗಳಲ್ಲಿ, ಹರಿಯಾಣದಲ್ಲಿ 4, ಉತ್ತರಾಖಂಡದಲ್ಲಿ 2, ದೆಹಲಿ-ಎನ್‌ಸಿಆರ್ ಮತ್ತು ಯುಪಿಯಲ್ಲಿ ತಲಾ 1 ಸ್ಥಳಗಳಲ್ಲಿ ದಾಳಿ ನಡೆಸಲಾಯಿತು. ಎನ್‌ಐಎ ಮೂಲಗಳ ಪ್ರಕಾರ, ವಿದೇಶಗಳಲ್ಲಿರುವ ಖಲಿಸ್ತಾನಿ ಮತ್ತು ಗ್ಯಾಂಗ್​ಸ್ಟರ್​​ಗಳು ಭಾರತದ ಗ್ರೌಂಡ್​ ವರ್ಕರ್​ಗೆ ಹವಾಲಾ ಚಾನೆಲ್ ಮೂಲಕ ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳಿಗೆ ಹಣ ನೀಡುತ್ತಿದ್ದಾರೆ. ಗ್ಯಾಂಗ್​ಸ್ಟರ್​ಗಳು-ಖಲಿಸ್ತಾನಿಗಳ ಹಣಕಾಸಿನ ಸರಪಳಿಯನ್ನು ಕೊನೆಗೊಳಿಸಲು NIA ಕ್ರಮ ಕೈಗೊಂಡಿದೆ.

ಮೂರು ಗುಂಪುಗಳ ಮೇಲೆ ನಿಗಾ: ಸುಮಾರು ಐದು ತಿಂಗಳ ಹಿಂದೆ ಎನ್‌ಐಎ ದಾಳಿ ಮಾಡಿದ ಸ್ಥಳಗಳು ಲಾರೆನ್ಸ್ ಬಿಷ್ಣೋಯ್, ಬಾಂಬಿಹಾ ಗ್ಯಾಂಗ್ ಮತ್ತು ಅರ್ಶ್ ದಲ್ಲಾ ಗ್ಯಾಂಗ್‌ನ ಸದಸ್ಯರಿಗೆ ಸಂಬಂಧಿಸಿವೆ. ಎನ್‌ಐಎ ತಂಡ ದೆಹಲಿಯಲ್ಲಿ ವೃತ್ತಿಯಲ್ಲಿ ಬೌನ್ಸರ್ ಆಗಿರುವ ಯದ್ವಿಂದರ್ ಅಲಿಯಾಸ್ ಜಶನ್‌ಪ್ರೀತ್ ಮನೆ ಮೇಲೆ ದಾಳಿ ನಡೆಸಲಾಗಿದೆ. ಯದ್ವಿಂದರ್ ಖಾತೆಗೆ ವಿದೇಶದಿಂದ ಹಣ ಬಂದಿದ್ದು, ವಿದೇಶದಲ್ಲಿರುವ ಅವರ ಫೋನ್‌ನಿಂದಲೂ ಕರೆಗಳು ಬಂದಿರುವುದು ಪತ್ತೆಯಾಗಿದೆ.

ಓದಿ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಶಂಕಿತನಿಗೆ ಕಲ್ಯಾಣ ಕರ್ನಾಟಕದಲ್ಲಿ ಶೋಧ

Last Updated :Mar 12, 2024, 10:57 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.