ದಿಲ್ಲಿಯಲ್ಲಿ ಜೈ ಶ್ರೀರಾಮ್ ಘೋಷಣೆ ಮೂಲಕ ರಾಣಾ ದಂಪತಿಗೆ ಸ್ವಾಗತ.. 'ಈಟಿವಿ ಭಾರತ'ದೊಂದಿಗೆ ಸಂಸದೆ ಮಾತು

By

Published : May 9, 2022, 9:45 PM IST

thumbnail

ನವದೆಹಲಿ: ತಮಗೆ ಆಗಿರುವ ಅನ್ಯಾಯದ ಬಗ್ಗೆ ದೂರು ನೀಡಲು ರಾಣಾ ದಂಪತಿ ಮಹಾರಾಷ್ಟ್ರದಿಂದ ದೆಹಲಿಗೆ ಆಗಮಿಸಿದ್ದು, ಜೈ ಶ್ರೀರಾಮ್ ಘೋಷಣೆ ಮೂಲಕ ಅವರನ್ನ ಬೆಂಬಲಿಗರು ಸ್ವಾಗತಿಸಿದ್ದಾರೆ. ಈ ಸಂದರ್ಭದಲ್ಲಿ 'ಈಟಿವಿ ಭಾರತ' ಜೊತೆ ಮಾತನಾಡಿರುವ ನವನೀತ್ ಕೌರ್ ರಾಣಾ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದರು. ನನ್ನನ್ನು ಆರು ಗಂಟೆಗಳ ಕಾಲ ಲಾಕಪ್​​ನಲ್ಲಿ ಇರಿಸಲಾಗಿತ್ತು. ಜೈಲಿನಲ್ಲಿದ್ದ ವೇಳೆ ವೈದ್ಯರನ್ನ ಕರೆಸುವಂತೆ ಮನವಿ ಮಾಡಿದ್ರೂ, ಅವರು ನನ್ನ ಮಾತು ಕೇಳಿಲ್ಲ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಸಭೆ ಸ್ಪೀಕರ್​ಗೆ ದೂರು ನೀಡುತ್ತೇನೆ ಎಂದರು. ಮಹಾರಾಷ್ಟ್ರ ಸಿಎಂ ವಿರುದ್ಧ ನನ್ನ ಹೋರಾಟ ಮುಂದುವರೆಯಲಿದೆ ಎಂಬ ಮಾತನ್ನು ಅವರು ತಿಳಿಸಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.