ಭಾರತ ಯುವಕರ ದೇಶವಾದರೂ ಸೇನೆ ಹಳತಾಗಿದೆ: ಅಜಿತ್ ದೋವಲ್
ಅಗ್ನಿಪಥ್ ಯೋಜನೆಯ ಕುರಿತು ಕೇಳಿಬಂದ ಹಲವು ಅನುಮಾನಗಳಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ ಭಾರತ ಯುವ ನಾಗರಿಕರನ್ನು ಹೊಂದಿದೆ. ಆದರೆ, ಸೇನೆ ಹಳೆಯದಾಗುತ್ತಿದೆ. ದೇಶದ ಭದ್ರತೆಯ ಹಿತದೃಷ್ಟಿಯಿಂದ ಸೇನೆಗೆ ಬಿಸಿರಕ್ತದ ಯುವಕರು ಬೇಕಾಗಿದ್ದಾರೆ. ಅದನ್ನು ಅಗ್ನಿವೀರರು ತುಂಬಲಿದ್ದಾರೆ ಎಂದು ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.