ಯರಗೋಳ ಗ್ರಾಮದ ಉತ್ತರಾಧಿಮಠದ ಸಂಪರ್ಕ ರಸ್ತೆ ಜಲಾವೃತ
![ETV Thumbnail thumbnail](https://etvbharatimages.akamaized.net/etvbharat/prod-images/320-214-9171296-419-9171296-1602666359769.jpg)
ಯಾದಗಿರಿ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಯರಗೋಳ ಗ್ರಾಮದ ಉತ್ತರಾಧಿಮಠಕ್ಕೆ ಜಲ ದಿಗ್ಬಂಧನ ಎದುರಾಗಿದೆ. ಸತತವಾಗಿ ಸುರಿಯುತ್ತಿರುವ ಮಳೆಗೆ ತಾಲ್ಲೂಕಿನ ಯರಗೋಳ ಗ್ರಾಮದ ದೊಡ್ಡ ಕೆರೆ ಉಕ್ಕಿ ಹರಿದ ಪರಿಣಾಮ ಗ್ರಾಮದ ಉತ್ತರಾಧಿಮಠದ ಸಂಪರ್ಕ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಅಲ್ಲದೇ, ಹಿರಿ ಕೆರೆ, ಥಾವರು ನಾಯಕ್ ತಾಂಡಾ, ತಾನಿ ನಾಯಕ್ ತಾಂಡಾ ಸಂಪರ್ಕ ಕಡಿತಗೊಂಡಿದ್ದು ರಸ್ತೆ ದಾಟಲು ಜನ ಹರಸಾಹಸ ಪಡುವಂತಾಗಿದೆ.