ಮತ್ತೆ ನೆರೆಯ ಸೆಳೆತಕ್ಕೆ ಸಿಕ್ಕ ಕುಂದಾನಗರಿ, ಕರುಣೆ ತೋರೆಯಾ ವರುಣ?
ಎರಡು ತಿಂಗಳ ಹಿಂದಷ್ಟೇ ಕಂಡು ಕೇಳರಿಯದ ಪ್ರವಾಹಕ್ಕೆ ಗಡಿ ಜಿಲ್ಲೆ ಬೆಳಗಾವಿ ತತ್ತರಿಸಿತ್ತು. ಮನೆ ಕಳೆದುಕೊಂಡು, ಬೆಳೆದ ಬೆಳೆಯೂ ಕೈಗೆ ಸಿಗದೇ ಜನರ ಬದುಕು ಬೀದಿಗೆ ಬಂದಿತ್ತು. ಪ್ರವಾಹದ ಭೀಕರತೆಯಿಂದ ಸುಧಾರಿಸುವ ಹೊತ್ತಲ್ಲೇ, ಎರಡನೇ ಬಾರಿ ನೆರೆ ಭೀತಿ ಎದುರಿಸಿ, ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದರು. ಆದರೀಗ ಮತ್ತೊಮ್ಮೆ ಪ್ರವಾಹ ಆರ್ಭಟಿಸಿದೆ.