ಪಂಜಾಬ್​ ತಂಡಕ್ಕೆ ಇದೀಗ ದುರಾದೃಷ್ಟ ಮುಗಿದು ಅದೃಷ್ಟದ ಬಾಗಿಲು ಓಪನ್​: ಮಂದೀಪ್​ ಸಿಂಗ್​

By

Published : Oct 27, 2020, 3:56 AM IST

thumbnail

ಶಾರ್ಜಾ: ಆರಂಭದಿಂದಲೂ ಸೋಲಿನ ಸುಳಿಗೆ ಸಿಲುಕಿ ಕಂಗೆಟ್ಟಿದ್ದ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡ ಇದೀಗ ಸತತ ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಪ್ಲೇ-ಹಂತಕ್ಕೆ ತಲುಪುವ ಕನಸು ಜೀವಂತವಾಗಿಟ್ಟುಕೊಂಡಿದೆ. ನಿನ್ನೆ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ನಡೆದ ಪಂದ್ಯದಲ್ಲಿ 8 ವಿಕೆಟ್​ಗಳ ಗೆಲುವು ದಾಖಲು ಮಾಡಿರುವ ತಂಡ ಸದ್ಯ 4ನೇ ಸ್ಥಾನಕ್ಕೆ ಲಗ್ಗೆ ಹಾಕಿದೆ. ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿರುವ ಮಂದೀಪ್​ ಸಿಂಗ್​ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದರು. ಈ ವೇಳೆ ತಂಡ ಆರಂಭದಲ್ಲಿ ಉತ್ತಮವಾಗಿ ಆಡುತ್ತಿದ್ದರೂ ಅದೃಷ್ಟ ಕೈಹಿಡಿಯುತ್ತಿರಲಿಲ್ಲ. ಆದರೆ ಇದೀಗ ಅದೃಷ್ಟ ನಮ್ಮೊಂದಿಗಿದೆ. ನಮ್ಮ ತಂಡ ಎಲ್ಲ ವಿಭಾಗಗಳಲ್ಲೂ ಬಲಿಷ್ಠವಾಗಿದೆ. ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವುದಾಗಿ ಹೇಳಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.