ಮಹಾರಾಷ್ಟ್ರ ಸಿಎಂ ಶಿಂಧೆ ನಿವಾಸದಲ್ಲಿ ಗಣಪತಿ ಪೂಜೆ; ಶಾರುಖ್​​, ಸಲ್ಮಾನ್​ ಭಾಗಿ​-ವಿಡಿಯೋ

By ETV Bharat Karnataka Team

Published : Sep 25, 2023, 9:27 AM IST

thumbnail

ಮುಂಬೈ (ಮಹಾರಾಷ್ಟ್ರ): ಬಾಲಿವುಡ್​ ನಟರಾದ ಶಾರುಖ್​ ಖಾನ್​ ಮತ್ತು ಸಲ್ಮಾನ್​ ಖಾನ್​ ಭಾನುವಾರ ರಾತ್ರಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ನಿವಾಸದಲ್ಲಿ ನಡೆದ ಗಣಪತಿ ಪೂಜೆಯಲ್ಲಿ ಪಾಲ್ಗೊಂಡರು. ಶಾರುಖ್ ಖಾನ್​ ತಮ್ಮ ಮ್ಯಾನೇಜರ್ ಪೂಜಾ ದದ್ಲಾನಿ ಜೊತೆಗೆ ಆಗಮಿಸಿದ್ದರು. ಸಲ್ಮಾನ್ ತನ್ನ ಸಹೋದರಿ ಅರ್ಪಿತಾ ಮತ್ತು ಸೋದರ ಮಾವ ಆಯುಷ್ ಶರ್ಮಾ ಅವರೊಂದಿಗೆ ಕಾಣಿಸಿಕೊಂಡರು. ಸಿಎಂ ಶಿಂಧೆ ಜೊತೆಗೆ ಶಾರುಖ್​ ಖಾನ್​ ಮತ್ತು ಸಲ್ಮಾನ್ ​ಖಾನ್ ಇರುವ​ ಫೋಟೋ, ವಿಡಿಯೋಗಳು ವೈರಲಾಗುತ್ತಿವೆ. 

ಶಾರುಖ್​ ನೀಲಿ ಬಣ್ಣದ ಪಠಾಣ್ ಸೂಟ್‌ನಲ್ಲಿ ಕಂಡುಬಂದರೆ, ಸಲ್ಮಾನ್ ಕಡು ಗುಲಾಬಿ ಬಣ್ಣದ ಕುರ್ತಾಕ್ಕೆ ಕೇಸರಿ ಶಾಲು ಧರಿಸಿದ್ದರು. ಜಾಕಿ ಶ್ರಾಫ್, ಅರ್ಜುನ್ ರಾಂಪಾಲ್, ಆಶಾ ಭೋಸ್ಲೆ, ಬೋನಿ ಕಪೂರ್ ಮತ್ತು ರಶ್ಮಿ ದೇಸಾಯಿ ಸೇರಿದಂತೆ ಇತರ ಬಿ-ಟೌನ್ ಸ್ಟಾರ್​ಗಳು ಶಿಂಧೆ ಮನೆಯಲ್ಲಿ ನಡೆದ ಗಣೇಶ ಚತುರ್ಥಿ ಆಚರಣೆಯಲ್ಲಿ ಪಾಲ್ಗೊಂಡರು. ಇದಕ್ಕೂ ಮುನ್ನಾ ದಿನ ಶಾರುಖ್​ ಖಾನ್​ ತನ್ನ ಕಿರಿಮಗ ಅಬ್ರಮ್ ಜೊತೆಗೆ ಮುಂಬೈನ ಪ್ರಸಿದ್ಧ ಲಾಲ್‌ಬಾಗ್ಚಾ ರಾಜಾದಲ್ಲಿ ಗಣೇಶನ ದರ್ಶನ ಪಡೆದಿದ್ದರು. 

ಇದನ್ನೂ ಓದಿ: Parineeti Chopra - Raghav Chadha Wedding: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪರಿಣಿತಿ ಚೋಪ್ರಾ-ರಾಘವ್​ ಚಡ್ಡಾ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.