ಅಮಿತ್​ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೋರ್ಟ್​ಗೆ ರಾಹುಲ್​ ಗಾಂಧಿ ಗೈರು, ಮತ್ತೊಮ್ಮೆ ಸಮನ್ಸ್​ ಜಾರಿ

By ETV Bharat Karnataka Team

Published : Dec 16, 2023, 7:04 PM IST

thumbnail

ಸುಲ್ತಾನ್​ಪುರ: ಕೇಂದ್ರ ಗೃಹ ಸಚಿವ ಅಮಿತಾ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರಿಗೆ ಸುಲ್ತಾನ್​ಪುರದ ಎಂಪಿ-ಎಂಎಲ್​ಎ ನ್ಯಾಯಾಲಯ ಮತ್ತೆ ಸಮನ್ಸ್​ ನೀಡಿದ್ದು, 2024ರ ಜನವರಿ 6 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶ ಹೊರಡಿಸಿದೆ. ಶನಿವಾರ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್​ ಜಾರಿ ಮಾಡಿದ್ದರೂ, ರಾಹುಲ್​ ಗಾಂಧಿ ಇಂದು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ.

ರಾಹುಲ್​ ಗಾಂಧಿ ಅವರು ಅಮಿತ್​ ಶಾ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕ ವಿಜಯ್​ ಮಿಶ್ರಾ ಅವರು 2018ರ ಆಗಸ್ಟ್​ 4ರಂದು ದೂರು ದಾಖಲಿಸಿದ್ದರು. ಸುಲ್ತಾನ್​ಪುರದ ಎಂಪಿ- ಎಂಎಲ್​ಎ ನ್ಯಾಯಾಲಯವು ಡಿಸೆಂಬರ್​ 16 ರಂದು ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ರಾಹುಲ್​ ಗಾಂಧಿಗೆ ಸಮನ್ಸ್​ ನೀಡಿದ್ದರೂ ಅವರು ಹಾಜರಾಗಿರಲಿಲ್ಲ ಎಂದು ಮಿಶ್ರಾ ಪರ ವಕೀಲ ಸಂತೋಷ್ ಕುಮಾರ್​​ ಪಾಂಡೆ ತಿಳಿಸಿದರು.​​

2018ರ ಮೇ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಹುಲ್​ ಗಾಂಧಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ನವೆಂಬರ್​ 18 ರಂದು ವಾದ- ಪ್ರತಿವಾದವನ್ನು ಆಲಿಸಿದ್ದ ನ್ಯಾಯಾಧೀಶ ಯೋಗೇಶ್​ ಕುಮಾರ್​ ಯಾದವ್​ ತೀರ್ಪನ್ನು ಕಾಯ್ದಿರಿಸಿದ್ದರು. ಮುಂದಿನ ವಿಚಾರಣೆಯನ್ನು ನವೆಂಬರ್​ 27ಕ್ಕೆ ಮುಂದೂಡಿದ್ದರು. ನವೆಂಬರ್​ 27ರಂದು ವಿಚಾರಣೆಗೆ ನಡೆಸಿದ್ದ ನ್ಯಾಯಾಧೀಶರು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಡಿಸೆಂಬರ್​ 16ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​ ಜಾರಿ ಮಾಡಲು ಆದೇಶಿಸಿದ್ದರು. ಆದರೆ ಇಂದು ಕೂಡ ರಾಹುಲ್​ ಗಾಂಧಿ ನ್ಯಾಯಾಲಯಕ್ಕೆ ಗೈರಾಗಿದ್ದಾರೆ.

ಇದನ್ನೂ ಓದಿ: ಪಿಎಂ ಮೋದಿಯನ್ನ ಟೀಕಿಸಿದ್ದ ರಾಹುಲ್​ಗೆ ಚುನಾವಣಾ ಆಯೋಗದ ನೋಟಿಸ್: ಕಾಂಗ್ರೆಸ್​ ಹೇಳಿದ್ದೇನು?

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.