ಹುಬ್ಬಳ್ಳಿ: ವಿದ್ಯುತ್ ತಂತಿ ತಗುಲಿ ಕ್ಯಾಂಟರ್ ವಾಹನ ಭಸ್ಮ
![ETV Thumbnail thumbnail](https://etvbharatimages.akamaized.net/etvbharat/prod-images/640-480-17871544-thumbnail-4x3-mh.jpg)
ಹುಬ್ಬಳ್ಳಿ: ವಿದ್ಯುತ್ ತಂತಿ ಸ್ಪರ್ಶಿಸಿ ಕ್ಯಾಂಟರ್ ವಾಹನವೊಂದು ಸುಟ್ಟು ಕರಕಲಾದ ಘಟನೆ ಗಾಮನಗಟ್ಟಿ ಬಸ್ ನಿಲ್ದಾಣದ ಬಳಿ ಇಂದು ನಡೆದಿದೆ. ಚಾಲಕ ಕೆಳಗೆ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇತ್ತೀಚೆಗೆ ಗೋಕುಲ ರಸ್ತೆಯ ಗ್ರಾಮೀಣ ಪ್ರಾದೇಶಿಕ ಕಾರ್ಯಾಗಾರ, ಏರ್ಪೋರ್ಟ್ ಆವರಣದಲ್ಲಿ ಬೆಂಕಿ ಅವಘಡ ಪ್ರಕರಣಗಳು ನಡೆದಿದ್ದವು.