ಡಿವೈನ್​ ಸ್ಟಾರ್ ಕೈಹಿಡಿದ ಪಂಜುರ್ಲಿ ದೈವ: ಕಾಂತಾರ 2 ನಿರ್ಮಾಣಕ್ಕೆ ಅಭಯ

By

Published : Apr 29, 2023, 5:01 PM IST

thumbnail

ಬಂಟ್ವಾಳ (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮುತ್ತೂರಿನಲ್ಲಿ ಇತ್ತೀಚೆಗೆ ನಡೆದ "ನಟ್ಟಿಲ್ ಪಂಜುರ್ಲಿ ದೈವದ ನೇಮೋತ್ಸವ''ದಲ್ಲಿ ಕಾಂತಾರ ಸ್ಟಾರ್ ರಿಷಬ್​​ ಶೆಟ್ಟಿ ಭಾಗಿ ಆಗಿದ್ದರು. ಈ ಸಂದರ್ಭ ಕಾಂತಾರ 2 ಚಲನಚಿತ್ರ ನಿರ್ಮಾಣಕ್ಕೆ ದೈವ ಅಭಯ ನೀಡಿದೆ.

ಕಾಂತಾರ ಚಿತ್ರದ ಮತ್ತೊಂದು ಭಾಗ (ಕಾಂತಾರ 1)ದ ಕೆಲಸ ನಡೆಯುತ್ತಿದೆ. ಈ ಹಿನ್ನೆಲೆ ಪಂಜುರ್ಲಿ ದೈವದ ನೇಮದಲ್ಲಿ ಅಭಯ ಪಡೆದಿದ್ದಾರೆ. ಮುಂದಿನ ಸಿನಿಮಾವನ್ನು ಮಾಡಲು ದೈವ ಆಶೀರ್ವದಿಸಿದೆ ಎಂಬ ಮಾಹಿತಿ ಇದೆ. ಈ ಹಿಂದೆ ಕಾಂತಾರ ಮಾಡುವ ವೇಳೆಯೂ ರಿಷಬ್​ ಅವರು ಪಂಜುರ್ಲಿ ದೈವದ ಅಭಯ ಪಡೆದಿದ್ದರು. ದೈವ ನರ್ತಕ ಮುಖೇಶ್ ಬಂದಲೆ ಅವರು ಕಾಂತಾರ ಚಿತ್ರತಂಡದ ಹಿಂದೆ ನಿಂತು ಸಹಕರಿಸಿದ್ದರು. ಮುಖೇಶ್ ಅವರ ಡೈರೆಕ್ಷನ್ ಕೂಡ ಇತ್ತು. ಇತ್ತೀಚೆಗೆ ನಡೆದ ಮುಖೇಶ್ ಅವರ ನಟ್ಟಿಲ್​​ ಪಂಜುರ್ಲಿ ದೈವದ ನೇಮಕ್ಕೆ ರಿಷಬ್​ ಶೆಟ್ಟಿ ಬಂದಿದ್ದರು.  

ಇದನ್ನೂ ಓದಿ: 'ದೇವಲೋಕದ ಜೋಡಿ': ಅಭಿಮಾನಿಗಳ ಮನಗೆದ್ದ 'ಸಿಂಹಪ್ರಿಯಾ' ಫೋಟೋಗಳು

ಪಂಜುರ್ಲಿ ಗಗ್ಗರ ಸೇವೆಯ ವೇಳೆ ರಿಷಬ್​​ ಶೆಟ್ಟಿ ಅಲ್ಲದೇ ಬಂಟ್ವಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಶಾಸಕ ರಾಜೇಶ್ ನಾಯ್ಕ್ ಅವರ ಕೈ ಹಿಡಿದು ದೈವ ಅಭಯ ನೀಡಿರುವ ವಿಡಿಯೋ ಭಾರಿ ಸದ್ದು ಮಾಡಿದೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಮಂಗಳೂರು ಉತ್ತರ ಬಿಜೆಪಿ ಅಭ್ಯರ್ಥಿ ಡಾ. ಭರತ್ ಶೆಟ್ಟಿ, ಸುಬ್ರಾಯ ಮಾರ್ಲ, ಕೃಷ್ಣರಾಜ್ ಮಾರ್ಲ, ಪವನ್ ಕುಮಾರ್ ಶೆಟ್ಟಿ, ರಿತೇಶ್ ಮಾರ್ಲ, ಮತ್ತಿತರರು ಉಪಸ್ಥಿತರಿದ್ದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.