ETV Bharat / state

131 ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರ ವಿತರಿಸಿದ ಶಾಸಕ ನಾಗನಗೌಡ ಕಂದಕೂರ

author img

By

Published : Mar 1, 2023, 10:22 PM IST

ಹಕ್ಕುಪತ್ರ ವಿತರಣೆ
ಹಕ್ಕುಪತ್ರ ವಿತರಣೆ

ಗುರುಮಠಕಲ್​ನಲ್ಲಿ 131 ಫಲಾನುಭವಿಗಳಿಗೆ ಶಾಸಕ ನಾಗನಗೌಡ ಕಂದಕೂರ ಮತ್ತು ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ ನಿವೇಶನ ಹಕ್ಕುಪತ್ರ ವಿತರಿಸಿದರು.

ಗುರುಮಠಕಲ್ (ಯಾದಗಿರಿ): ಆಶ್ರಯ ಯೋಜನೆಯಡಿ ಸುಮಾರು 131 ಫಲಾನುಭವಿಗಳಿಗೆ ಇಂದು ಶಾಸಕ ನಾಗನಗೌಡ ಕಂದಕೂರ ಮತ್ತು ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ ಹಕ್ಕುಪತ್ರಗಳನ್ನು ಹಂಚಿಕೆ ಮಾಡಿದರು. ಗುರುಮಠಕಲ್ ಪುರಸಭೆ ವ್ಯಾಪ್ತಿಯ ಆಶ್ರಯ ಯೋಜನೆ ಅಡಿ ಸರ್ವೆ ನಂ.19/1 ರಲ್ಲಿ 33 ಜನ, ಸರ್ವೆ.ನಂ 20ರಲ್ಲಿ 30 ಜನ, 25ರಲ್ಲಿ 131 ಜನರನ್ನು ಆಯ್ಕೆಮಾಡಿ ಈ ಹಿಂದೆ ನಿವೇಶನಗಳ ಹಕ್ಕುಪತ್ರಗಳನ್ನು ನೀಡಲಾಗಿತ್ತು.

ಆದರೆ ಹಕ್ಕು ಪತ್ತ ನೀಡಿದ್ದರೂ ನಿವೇಶನಗಳನ್ನು ಹಂಚಿಕೆ ಮಾಡದೇ ನನೆಗುದಿಗೆ ಬಿದ್ದ 30 ವರ್ಷಗಳು ಕಳೆದಿದ್ದವು. ಇದೀಗಾ ನನೆಗುದಿಗೆ ಬಿದ್ದ ಸಮಸ್ಯೆಯನ್ನು ಶಾಸಕ ನಾಗನಗೌಡ ಕಂದಕೂರ ಮತ್ತು ಮುಖ್ಯಾಧಿಕಾರಿ ಭಾರತಿ ದಂಡೋತಿ ಅವರ ಸಮಕ್ಷಮದಲ್ಲಿ ಇಂದು ಪರಿಹರಿಸಲಾಯಿತು. 2017-18ನೇ ಸಾಲಿನ ರಾಜೀವಗಾಂಧಿ ವಸತಿ ನಿಗಮದ ಆಶ್ರಯಯೋಜನೆ ಅಡಿಯಲ್ಲಿ ಮಂಜೂರಾದ ಸರ್ವೆನಂ 25ರಲ್ಲಿ ಹಂಚಿಕೆಯಾದ 131 ನಿವೇಶನಗಳ ಸ್ಥಳವನ್ನು ಶಾಸಕರು ಅಧಿಕಾರಿಗಳೊಂದಿಗೆ ಆಗಮಿಸಿ ಪರಿಶೀಲಿಸಿ ನಂತರ ನಿವೇಶನ ಗುರುತಿಸಿ ಫಲಾನುಭವಿಗಳಿಗೆ ಹಕ್ಕುಪ್ರತ ನೀಡಿದರು.

ಬಳಿಕ ಮಾತನಾಡಿದ ಶಾಸಕ, ಕಳೆದ 30 ವರ್ಷಗಳಿಂದ ನನೆಗುದಿಗೆ ಬಿದ್ದ ಸಮಸ್ಯೆ ಬಗೆಹರಿಸುವ ಮೂಲಕ ಬಡವರ ಕನಸನ್ನು ನನಸಾಗಿ ಮಾಡಲು ಶ್ರಮಿಸಿದ್ದೇನೆ. ಸಮಸ್ಯೆಯ ಗಂಭೀರತೆಯ ಬಗ್ಗೆ ಅಧಿಕಾರಿಗಳು ತಿಳಿಸಿದಾಗ ಬಡವರಿಗೆ ನ್ಯಾಯ ಒದಗಿಸಲು ಸಂಪೂರ್ಣ ಸಹಕಾರ ನೀಡಿದ್ದೇನೆ. ಅದಕ್ಕೆ ಮುಖ್ಯಾಧಿಕಾರಿ ಭಾರತಿ ದಂಡೋತಿ ಮತ್ತು ಅವರ ತಂಡದ ಶ್ರಮವನ್ನು ಮರೆಯುವಂತಿಲ್ಲ. ಅಲ್ಲದೇ ಈಟಿವಿ ಭಾರತ ನ್ಯೂಸ್​ನಲ್ಲಿ ಬಂದ ವರದಿಯು ಅತ್ಯಂತ ಮಹತ್ವದಾಗಿದೆ ಎಂದು ಇದೇ ವೇಳೆ ಶಾಸಕ‌ ನಾಗನಗೌಡ ಕಂದಕೂರ ತಿಳಿಸಿದರು.

ಸರ್ವೆ ನಂ.25 ಪರಿಶೀಲನೆ: ಬಳಿಕ ಪಟ್ಟಣದ ಸರ್ವೆ ನಂ 25ರಲ್ಲಿರುವ 3 ಎಕರೆ ಹೊಲದಲ್ಲಿ 131 ನಿವೇಶಗಳನ್ನು ಮಾಡಿರುವುದನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ ಮಾತನಾಡಿ, ನಿವೇಶನ ಗುರುತಿಸುವಲ್ಲಿ ಇರುವ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಮಧ್ಯವರ್ತಿಯಿಲ್ಲದೇ ನೇರವಾಗಿ ಫಲಾನುಭವಿಗಳಿಗೆ ಯಶಸ್ವಿಯಾಗಿ ಹಕ್ಕುಪತ್ರ ನೀಡಿದ್ದೇವೆ. ಈ ಕಾರ್ಯದಲ್ಲಿ ಸಹಕರಿಸಿದ ಶಾಸಕರು ಮತ್ತು ಸಿಬ್ಬಂದಿಗಳ ಸಹಕಾರ ಮರೆಯುವಂತಿಲ್ಲ ಎಂದು ತಿಳಿಸಿದರು.

ನಂತರ ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ ಮಾತನಾಡಿ, 1991ರಲ್ಲಿ ನೀಡಿದ್ದ ಹಕ್ಕು ಪತ್ರದ ವಿತರಣೆಯ ದಾಖಲೆಗಳನ್ನು ತರಿಸಿ ಫಲಾನುಭವಿಗಳು ನಿವೇಶನಗಳನ್ನು ಗುರುತಿಸಿ ಹಕ್ಕುಪತ್ರ ಕೊಡಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ, ಪುರಸಭೆ ಉಪಾಧ್ಯಕ್ಷೆ ಭೀಮಮ್ಮ ಮುಕುಡಿ, ಸದಸ್ಯ ನವಾಜರೆಡ್ಡಿ, ಆಶ್ರಯ ಯೋಜನೆ ಸಮಿತಿ ಸದಸ್ಯರಾದ ವೆಂಕಟರಾಮುಲು, ಮಮ್ತಜ್ ಬೇಗಂ, ನರಸಪ್ಪ ಬೋಯಾ, ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ಅವುಂಟಿ, ಬ್ಲಾಕ್ ಜೆಡಿಎಸ್ ಅಧ್ಯಕ್ಷ ಪ್ರಕಾಶ ನಿರೇಟಿ, ಮುಖಂಡರಾದ ಜಿ.ತಮ್ಮಣ್ಣ, ಕಿಷ್ಟರೆಡ್ಡಿ ಪಾಟೀಲ್, ಬಸಣ್ಣ ದೇವರಹಳ್ಳಿ, ಅಂಬದಾಸ್ ಜಿತ್ರೆ ಉಪಸ್ಥಿತರಿದ್ದರು. ಪರಶುರಾಮ ಕಾರ್ಯಕ್ರಮ ನಿರೂಪಿಸಿದರು.

ಇದನ್ನೂ ಓದಿ: ಕಲ್ಯಾಣ ಕರ್ನಾಟಕದಲ್ಲಿ ಮೋದಿ: ಐತಿಹಾಸಿಕ ಕ್ಷಣ‌ ಸೃಷ್ಟಿಸಿದ ಹಕ್ಕುಪತ್ರ ವಿತರಣೆ ಕಾರ್ಯಕ್ರಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.