ETV Bharat / state

ಹಂದಿಗೆ ಅಳವಡಿಸಿದ್ದ ವಿದ್ಯುತ್ ತಂತಿಯಿಂದ ಶಾಕ್:  7 ಜಾನುವಾರುಗಳ ಸಾವು, ಮೂವರ ಬಂಧನ

author img

By

Published : Oct 19, 2022, 4:24 PM IST

ಜಾನುವಾರುಗಳು ಸಾವು
ಜಾನುವಾರುಗಳು ಸಾವು

ಉತ್ತರಕನ್ನಡ ಜಿಲ್ಲೆಯ ಕಿನ್ನರ ಗ್ರಾಮದಲ್ಲಿ ಹಂದಿಗೆ ಅಳವಡಿಸಿದ್ದ ವಿದ್ಯುತ್​ ತಂತಿಯಿಂದ ಶಾಕ್​​ ತಗುಲಿ ಏಳು ಜಾನುವಾರುಗಳು ಮೃತಪಟ್ಟಿವೆ.

ಉತ್ತರಕನ್ನಡ (ಕಾರವಾರ): ಹಂದಿಗೆ ಅಳವಡಿಸಿದ ವಿದ್ಯುತ್ ತಂತಿಯಿಂದ ಶಾಕ್ ತಗುಲಿ ಏಳು ಜಾನುವಾರುಗಳು ದಾರುಣವಾಗಿ ಮೃತಪಟ್ಟಿರುವ ಘಟನೆ ತಾಲೂಕಿನ ಕಿನ್ನರ ಗ್ರಾಮದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಹಂದಿಗೆ ಅಳವಡಿಸಿದ್ದ ವಿದ್ಯುತ್ ತಂತಿ ಶಾಕ್ ತಗುಲಿ 7 ಜಾನುವಾರುಗಳು ಸಾವು

ಅಕ್ರಮವಾಗಿ ಜಮೀನಿನ ಸುತ್ತಲೂ ವೈರ್​ಗಳನ್ನು ಎಳೆದು ವಿದ್ಯುತ್ ಹರಿಬಿಟ್ಟಿದ್ದರು. ಹಂದಿ ಬಾರದಂತೆ ತಡೆಯಲು ಈ ರೀತಿ ಮಾಡಲಾಗಿತ್ತು ಎನ್ನಲಾಗಿದೆ. ಆದರೆ, ಸೈರೋಬ ನಾಯ್ಕ್ ಎಂಬುವವರು ಎಮ್ಮೆ, ಕೋಣ ಹಾಗೂ ಕರುಗಳನ್ನು ಜಮೀನಿಗೆ ಹೊಡೆದುಕೊಂಡು ಹೋಗುವಾಗ ತಂತಿ ತುಳಿದಿದ್ದು, ಪ್ರಾಣಿಗಳಿಗೆ ಶಾಕ್ ತಗುಲಿದೆ. ಇದರಿಂದ ಎಮ್ಮೆ, ಕೋಣ ಹಾಗೂ ಕರುಗಳು ಸೇರಿದಂತೆ ಏಳು ಜಾನುವಾರುಗಳು ಮೃತಪಟ್ಟಿವೆ.

ಘಟನೆಯಿಂದ 2 ಲಕ್ಷ ರೂ. ನಷ್ಟವಾಗಿದೆ ಎಂದು ಪ್ರದೀಪ ಸುಬ್ಬಾ ವಾಘ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಸಂಬಂಧ ನರಸಿಂಹ ನಾರಾಯಣ ಕಾಣೆಕರ, ದಯಾನಂದ ರಾಮ ಕಾಣೆಕರ ಹಾಗೂ ಅನಂದರಾಯ ರಾಮ ಕಾಣೆಕರ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಓದಿ: ಲಂಪಿ ರೋಗದಿಂದ ಸಾವಿರಾರು ಜಾನುವಾರು ಸಾವು: ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.