ETV Bharat / state

CET ಯಲ್ಲಿ ಉತ್ತಮ ಅಂಕದ ಅನುಮಾನ: ರಿಸಲ್ಟ್​​ಗೂ ಮುನ್ನವೇ ಸೊರಬದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ

author img

By

Published : Aug 9, 2021, 6:54 PM IST

Updated : Aug 9, 2021, 7:36 PM IST

students committed suicide before CET results come
ಚಿನ್ಮಯ್

ಸಿಇಟಿಯಲ್ಲಿ ಉತ್ತಮ‌ ಅಂಕ ಬರದೇ ಸರ್ಕಾರಿ‌ ಕೋಟಾದಡಿ ಇಂಜಿನಿಯರಿಂಗ್​ ಅಭ್ಯಾಸ ಮಾಡಲು ಆಗುತ್ತದೆಯೋ ಇಲ್ಲವೋ ಎಂದು ಫಲಿತಾಂಶ ಬರುವ ಮುನ್ನವೇ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಶಿವಮೊಗ್ಗ: ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯಲ್ಲಿ ಉತ್ತಮ ಅಂಕ ಬರುತ್ತದೆಯೋ ಇಲ್ಲವೋ ಎಂಬ ಆತಂಕದಿಂದ ವಿದ್ಯಾರ್ಥಿಯೊಬ್ಬ ನೇಣಿಗೆ‌ ಶರಣಾಗಿರುವ ಘಟನೆ ಜಿಲ್ಲೆಯ ಚಂದ್ರಗುತ್ತಿಯಲ್ಲಿ ನಡೆದಿದೆ.

students committed suicide before CET results come
ಚಿನ್ಮಯ್

ಸೊರಬ ತಾಲೂಕು‌ ಚಂದ್ರಗುತ್ತಿಯ ನಿವಾಸಿ ಚಿನ್ಮಯ್ (19) ತನ್ನ ಮನೆಯ ಹಿಂದೆಯೇ ನೇಣಿಗೆ‌ ಶರಣಾಗಿದ್ದಾನೆ. ಚಿನ್ಮಯ್​, ಚಂದ್ರಗುತ್ತಿಯ ಕೃಷ್ಣರಾವ್​​ ಅವರ ಮಗನಾಗಿದ್ದು, ಕಳೆದ ಬಾರಿ ಸಹ ಸಿಇಟಿಯಲ್ಲಿ ಉತ್ತಮ ಅಂಕ ಬಾರದ ಕಾರಣ ಮತ್ತೊಮ್ಮೆ ಸಿಇಟಿ ಪರೀಕ್ಷೆ ಬರೆದಿದ್ದ. ಆದರೆ ತನಗೆ ಈ ಬಾರಿಯೂ ಉತ್ತಮ‌ ಅಂಕ ಬರದೇ ಸರ್ಕಾರಿ‌ ಕೋಟಾದಡಿ ಇಂಜಿನಿಯರಿಂಗ್​ (ಬಿಇ) ಅಭ್ಯಾಸ ಮಾಡಲು ಆಗುತ್ತದೆಯೋ ಇಲ್ಲವೋ ಎಂದು ಪ್ರಾಣ ಬಿಟ್ಟಿದ್ದಾನೆ.

ಇದನ್ನೂ ಓದಿ: ಕ್ಷುಲ್ಲಕ‌ ಕಾರಣಕ್ಕೆ ಹಾಡ ಹಗಲೇ ಯುವಕನ ಕೊಲೆ: ಬೆಚ್ಚಿಬಿದ್ದ ಶಿವಮೊಗ್ಗ ಜನತೆ

ಘಟನೆ ಸಂಬಂಧ ಸೊರಬ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated :Aug 9, 2021, 7:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.