ETV Bharat / state

ಬಂಧಿಸಲು ಬಂದ ಪೊಲೀಸರ ಮೇಲೆ ಹಲ್ಲೆಗೆ ಯತ್ನ: ರೌಡಿ ಶೀಟರ್​ ಕಾಲಿಗೆ ಶಿವಮೊಗ್ಗ ಪೊಲೀಸರಿಂದ ಗುಂಡೇಟು

author img

By

Published : Dec 19, 2022, 11:48 AM IST

Updated : Dec 19, 2022, 4:10 PM IST

Firing on the rowdy who tried to escape
ರೌಡಿ ಶೀಟರ್ ಮೋಟು ಪ್ರವೀಣ

ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಮೋಟು ಪ್ರವೀಣನ ಕಾಲಿಗೆ ಶೂಟ್​ ಮಾಡಿದ್ದು, ಆತನಿಗೆ ಮೆಗ್ಗಾನ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಶಿವಮೊಗ್ಗ: ಮತ್ತೊರ್ವ ರೌಡಿ ಶೀಟರ್ ಮೇಲೆ ಇಲ್ಲಿನ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಶಿವಮೊಗ್ಗದ ರೌಡಿ ಶೀಟರ್ ಪ್ರವೀಣ ಅಲಿಯಾಸ್ ಮೋಟು ಪ್ರವೀಣ ಮೇಲೆ ಪೊಲೀಸರು ಇಂದು ಬೆಳಗ್ಗೆ ಕಾಲಿಗೆ ಗುಂಡೇಟು ಹೊಡೆದಿದ್ದಾರೆ. ಗುಂಡೇಟಿನಿಂದ ಗಾಯಗೊಂಡ ಮೋಟು ಪ್ರವೀಣ ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Firing on the rowdy who tried to escape
ಗಾಯಗೊಂಡ ಕಾನ್ಸ್​​ಟೇಬಲ್ ಶಿವರಾಜ್

ಮೋಟು ಪ್ರವೀಣ ತನ್ನ ವಿರುದ್ಧ ನೀಡಿದ್ದ ದೂರು ವಾಪಸ್ ಪಡೆಯುವಂತೆ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಹಿಳೆಯೂಬ್ಬರ ಕಾರಿಗೆ ಬೆಂಕಿ ಹಚ್ಚಿದ್ದ. ಈ ಪ್ರಕರಣದಲ್ಲಿ ಮೋಟು ಪ್ರವೀಣನನ್ನು ಬಂಧಿಸಲು ಹೋದಾಗ ಗ್ರಾಮಾಂತರ ಪೊಲೀಸ್ ಠಾಣೆಯ ಕಾನ್ಸಟೇಬಲ್ ಶಿವರಾಜ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಗ್ರಾಮಾಂತರ ಪಿಎಸ್ಐ ರಮೇಸ್​ರವರು ಎಚ್ಚರಿಕೆ ನೀಡಿ, ಒಂದು ಸಾರಿ ಗಾಳಿಯಲ್ಲಿ ಗುಂಡು ಹಾರಿದ್ದಾರೆ. ಆದರೂ ಕೂಡ ಹಲ್ಲೆಗೆ ಯತ್ನಿಸಿದ ಮೋಟು ಪ್ರವೀಣನ ಕಾಲಿಗೆ ಪಿಎಸ್ಐ ರಮೇಶ್​ ಗುಂಡು ಹೊಡೆದಿದ್ದಾರೆ.

ಈ ವೇಳೆ ಗಾಯಗೊಂಡ ಕಾನ್ಸ್​​ಟೇಬಲ್ ಶಿವರಾಜ್​ರನ್ನು ಹಾಗೂ ಮೋಟು ಪ್ರವೀಣನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೋಟು ಪ್ರವೀಣ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದನು.

ಇದನ್ನೂ ಓದಿ: ನೆಲಮಂಗಲದಲ್ಲಿ ಪೊಲೀಸರಿಂದ ದರೋಡೆಕೋರನ ಮೇಲೆ ಫೈರಿಂಗ್

Last Updated :Dec 19, 2022, 4:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.