ETV Bharat / state

ತುಂಗಭದ್ರಾ ನಾಲೆಗೆ ಅಕ್ರಮ ಪಂಪ್​ಸೆಟ್​​​ಗಳ ಕಾಟ... ಕೊನೆ ಭಾಗದ ರೈತರ ಪರದಾಟ!

author img

By

Published : Sep 15, 2019, 7:02 PM IST

ನಿಲ್ಲದ ತುಂಗಭದ್ರಾ ನೀರು ಕಳ್ಳತನ

ರಾಯಚೂರು ಜಿಲ್ಲೆಯ ತುಂಗಭದ್ರಾ ಎಡದಂಡೆ ಕಾಲುವೆ ನೀರು ಕೊನೆ ಭಾಗದ ರೈತರಿಗೆ ತಲುಪುವಂತೆ ನೋಡಿಕೊಳ್ಳಲು ಹಲವಾರು ಕ್ರಮ ಕೈಗೊಳ್ಳಲಾಗಿದೆ. ಕಾಲುವೆಯ ಮೇಲ್ಭಾಗದಲ್ಲಿ ಅನಧಿಕೃತವಾಗಿ ನೀರು ಬಳಸಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಲಾಗಿತ್ತು. ಆದರೂ ನೀರು ಕಳ್ಳತನ ಮಾತ್ರ ನಿಂತಿಲ್ಲ.

ರಾಯಚೂರು: ಜಿಲ್ಲೆಯ ತುಂಗಭದ್ರಾ ಎಡದಂಡೆ ಕಾಲುವೆಯ ಮೇಲ್ಭಾಗದಲ್ಲಿ ಕೆಲವರು ಅನಧಿಕೃತ ಪಂಪ್​ಸೆಟ್ ಮೂಲಕ ನೀರು ಕಳ್ಳತನ ಮಾಡುವ ಹಿನ್ನೆಲೆಯಲ್ಲಿ ಕಾಲುವೆ ಕೊನೆ ಭಾಗದ ರೈತರು ನೀರು ಸಿಗದೆ ಪರದಾಡುತ್ತಿದ್ದಾರೆ.

ತುಂಗಭದ್ರಾ ಎಡದಂಡೆ ಕಾಲುವೆ ನೀರು ಕೊನೆ ಭಾಗದ ರೈತರಿಗೆ ತಲುಪುವಂತೆ ನೋಡಿಕೊಳ್ಳಲು ಹಲವಾರು ಸಭೆ ಹಾಗೂ ಹೋರಾಟಗಳನ್ನು ನಡೆಸಲಾಗಿದೆ. ಸ್ವತಃ ಎಸ್ಪಿ ನೇತೃತ್ವದಲ್ಲಿ ಡಂಗೂರ ಸಾರುವ ಮೂಲಕ ಅನಧಿಕೃತವಾಗಿ ನೀರು ಬಳಸಿದರೆ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಲಾಗಿತ್ತು. ಆದರೂ ನೀರು ಕಳ್ಳತನ ನಿಂತಿಲ್ಲ.

ಮೇಲ್ಭಾಗದ ರೈತರು ಹಾಗೂ ಕೆಲ ರಾಜಕೀಯ ನಾಯಕರ ಬೆಂಬಲಿಗರು ಅನಧಿಕೃತ ಪಂಪ್​ಸೆಟ್ ಮೂಲಕ ನೀರು ಕಳ್ಳತನ ಮಾಡುತ್ತಿದ್ದಾರೆ ಎಂಬ ಆರೋಪವಿದೆ.

ನಿಲ್ಲದ ತುಂಗಭದ್ರಾ ನೀರು ಕಳ್ಳತನ

ಈ ಹಿನ್ನೆಲೆಯಲ್ಲಿ ನೀರು ಕಳ್ಳತನಕ್ಕೆ ಕಡಿವಾಣ ಹಾಕಲು ಪಂಪ್​ಸೆಟ್​ಗಳಿಗೆ ಇರುವ ವಿದ್ಯುತ್ ಸಂಪರ್ಕವನ್ನೂ ಕಡಿತಗೊಳಿಸಲಾಗಿತ್ತು. ಇಷ್ಟೇ ಅಲ್ಲದೆ ನಾಲೆಯ ಅಧಿಕಾರಿಗಳು ಸ್ಥಳದಲ್ಲೇ ಇದ್ದು ನೋಡಿಕೊಂಡಿದ್ದರು. ಜೊತೆಗೆ ಪೊಲೀಸರು ನಾಲೆಯ ಸುತ್ತಮುತ್ತ 144 ಸೆಕ್ಷನ್ ಜಾರಿ ಮಾಡಿ ಬಿಸಿ ಮುಟ್ಟಿಸಿದ್ದರು. ಅನಧಿಕೃತವಾಗಿ ನೀರನ್ನು ಬಳಸುವವರು ಕಠಿಣ ಕಾನೂನು ಕ್ರಮಕ್ಕೆ ಗುರಿಯಾಗಬೇಕಾಗುತ್ತೆ ಎಂಬ ಎಚ್ಚರಿಕೆಯನ್ನೂ ನೀಡಲಾಗುತಿತ್ತು. ಆದರೂ ಸಹ ನೀರು ಕಳ್ಳತನ ಮಾತ್ರ ನಿಲ್ಲುತ್ತಿಲ್ಲ ಎನ್ನಲಾಗಿದೆ.

Intro:ತುಂಗಭದ್ರಾ ನಾಲೆ ನೀರು ಕಳ್ಳತನಕ್ಕೆ ಬ್ರೆಕ್ ಹಾಕಲು ಹಲವು ಕ್ರಮ ಆದ್ರೂ ನಿಂತಿಲ್ಲ ನೀರು ಕಳ್ಳತನ.
ರಾಯಚೂರು ಸೆ.15
ಜಿಲ್ಲೆಯ ತುಂಗಭದ್ರಾ ಎಡದಂಡೆ ಕಾಲುವೆಯ ನೀರು ಮೇಲ್ಭಾಗದಲ್ಲಿ ಕೆಲವರು ಅನಧಿಕೃತ ಪಂಪ್ಸೆಟ್ ಮೂಲಕ ಕಳಳತನ ಮಾಡುವ ಹಿನ್ನೆಲೆಯಲ್ಲಿ ಕೊನೆ ಭಾಗದ ರೈತರಿಗೆ ನೂರು ಸಿಗದೇ ಪರದಾಡುತಿದ್ದಾರೆ.
Body: ತುಂಗಭದ್ರಾ ಎಡದಂಡೆ ಕಾಲುವೆ ನೀರು ಕೊನೆ ಭಾಗದ ರೈತರಿಗೆ ತಲುಪುವಂತೆ ನೋಡಿಕೊಳ್ಳಲು ಹಲವಾರು ಸಭೆ ಹೋರಾಟ ಹಾಗೂ ಸ್ವತಃ ಎಸ್ಪಿ ಅವರ ನೇತೃತ್ವದಲ್ಲಿ ಡಂಗುರ ಸಾರುವ ಮೂಲಕ ಅನಧಿಕೃತ ನೀರು ಪಡರದರೆ ಕ್ರಮಕ್ಕೆ ಗುರಿಯಾಗ್ಬೆಕಾಗುತ್ತೆ ಎಂಬ ಜಾಗೃತಿಯೂ ಮಾಡಲಾಗಿದೆ.ಆದ್ರೂ ಕೂಡ ನೀರು ಕಳ್ಳತನ ನಿಂತಿಲ್ಲ ಮೇಳ್ಭಾಗದ ರೈತರು ಹಾಗೂ ಕೆಲ ರಾಜಕೀಯ ನಾಯಕರ ಬರಂಬಲಿಗರು ಅನಧಿಕೃತ ಪಂಪ್ಸೆಟ್ ಮೂಲಕ ನೀರು ಕಳ್ಳತನ ಮಾಡುತಿದ್ದಾರೆ.
ಅನಧಿಕೃತ ನೀರು ಕಡಿವಾಣ ಹಾಕಲು ಪಂಪ್ಸೆಟ್ಗಳಿಗೆ ಇರುವ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತಗತು.
ಇಷ್ಟೇ ಅಲ್ದೆ ನಾಲೆಯ ನೀರು ಅನಧಿಕೃತ ಕಳವು ಅಗದಂತೆ ತಡೆಯಲು ಅಧಿಕಾರಿಗಳನ್ನುಬಲ ಸ್ಥಳದಲ್ಲಿಬನೋಡಿಕೊಳ್ಳುವುದರ ಜೊತೆಗೆ ಪೊಲೀಸ್ ಅಧಿಕಾರಿಗಳು ನಾಲೆಯ ಸುತ್ತಮುತ್ತ 144ಸೆಕ್ಷನ್ ಜಾರಿ ಮಾಡಿ ಬಿಸಿ ಮುಟ್ಟಿಸಲಾಗಿತ್ತು.
ಅನಧಿಕೃತವಾಗಿ ನೀರನ್ನು ಬಳಸುವವರ ವಿರುದ್ದ ಕಠಿಣ ಕಾನೂನು ಕ್ರಮಕ್ಕೆ ಗುರಿಯಾಗಬೇಕಾಗುತ್ತೆ ಎಂಬ ಎಚ್ಚರಿಕೆಯೂ ನೀಡಲಾಗುತಿತ್ತು ಆದ್ರೂ ಸಹ ನೀರು ಕಳ್ಳತನ ಪ್ರಕರಣ ನಿಲ್ಲುತ್ತಿಲ್ಲ.


ಬೈಟ್: ಇಲ್ಲ ....
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.