ETV Bharat / state

ರಾಯಚೂರು ‌ಜಿಲ್ಲೆಯಲ್ಲಿ ಆಪತ್ತು ತಂದ ಪ್ರವಾಹ: ನೀರಿನ ರಭಸಕ್ಕೆ ಕೊಚ್ಚಿ ಹೋದ ಯುವಕ

author img

By

Published : Oct 22, 2019, 2:58 PM IST

ರಾಯಚೂರು ‌ಜಿಲ್ಲೆಯಲ್ಲಿ ಮತ್ತೆ ಪ್ರವಾಹ ಉಂಟಾಗಿದೆ.

ನಡುಗಡ್ಡೆಯಿಂದ ದನ ಮೇಯಿಸಿಕೊಂಡು ಬರುವ ಹೊತ್ತಿಗೆ ಹಳ್ಳದ ನೀರು ಹೆಚ್ಚಾಗಿ ಯುವಕನೋರ್ವ ಕೊಚ್ಚಿಹೋಗಿರುವ ಘಟನೆ ಚಿಂಚೋಡಿಯಲ್ಲಿ ನಡೆದಿದೆ.

ರಾಯಚೂರು: ಜಿಲ್ಲೆಯಲ್ಲಿ ಮತ್ತೆ ಪ್ರವಾಹ ಉಂಟಾಗಿದೆ. ದೇವದುರ್ಗ ತಾಲೂಕಿನ ಚಿಂಚೋಡಿ ಗ್ರಾಮದ ಯುವಕ ಸಂತೋಷ ಎಂಬಾತ ನೀರುಪಾಲಾಗಿದ್ದಾನೆ.

ರಾಯಚೂರು ‌ಜಿಲ್ಲೆಯಲ್ಲಿ ಮತ್ತೆ ಪ್ರವಾಹ: ನೀರಲ್ಲಿ ಕೊಚ್ಚಿಹೋದ ಯುವಕ

ಚಿಂಚೋಡಿ ಗ್ರಾಮದ ನದಿ ಅಚೆಗೆ ನಡುಗಡ್ಡೆ ಪ್ರದೇಶಕ್ಕೆ ದನ ಮೇಯಿಸಲು ಯುವಕರು ಹೋಗಿದ್ದರು. ಆದರೆ ಮಧ್ಯಾಹ್ನ ಕೃಷ್ಣಾ ಏಕಾಏಕಿ ನದಿಗೆ 50 ಸಾವಿರ ಕ್ಯೂಸೆಕ್​ಗೂ ಅಧಿಕ ನೀರು ಬಿಟ್ಟಿದ್ದಾರೆ. ಹೀಗಾಗಿ ದನ ಕಾಯಲು ಹೋದ ನಾಲ್ವರ ನಡುಗಡ್ಡೆಯಲ್ಲಿ ಸಿಲುಕಿದ್ದರು.

ನಡುಗಡ್ಡೆಯಿಂದ ವಾಪಸ್​ ಮನೆಗೆ ಬರುವಾಗ ಸಂತೋಷ್​ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾನೆ. ಈತ ಜೊತೆಯಲ್ಲಿದ್ದ ಮೂವರು ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಂತೋಷ್ ದನದ ಬಾಲ ಹಿಡಿದುಕೊಂಡು ಹಳ್ಳ ದಾಟುವಾಗ ಕೈಜಾರಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿ ನಿನ್ನೆ ಸಂಜೆ ಹಾಗೂ ಇಂದು ಬೆಳಗ್ಗೆ ಬೋಟ್ ಸಹಾಯದಿಂದ ಶೋಧ ಕಾರ್ಯ ನಡೆಸಿದ್ರು ಸಂತೋಷ್​ ಮೃತದೇಹ ಪತ್ತೆಯಾಗಿಲ್ಲ. ಮಗನನ್ನು ಕಳೆದಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಜಿಲ್ಲಾಡಳಿತದಿಂದ ನದಿಗೆ ನೀರು ಬಿಟ್ಟಿರುವ ಬಗ್ಗೆ ಮಾಹಿತಿ ನೀಡಿರಲಿಲ್ಲ. ಜಿಲ್ಲಾಡಳಿತ ಮಾಹಿತಿ ನೀಡದಿರುವುದೇ ಈ ಅನಾಹುತಕ್ಕೆ ಕಾರಣವೆಂದು ಮೃತ ಯುವಕನ ಪೋಷಕರು ಹಾಗೂ ಗ್ರಾಮಸ್ಥರು ಆರೋಪಿಸಿದ್ದಾರೆ.

Intro:ರಾಯಚೂರು ‌ಜಿಲ್ಲೆಗೆ ಮತ್ತೊಮ್ಮೆ ಪ್ರವಾಹ ಭೀತಿ ಎದುರಾಗಿದ್ದು, ಪ್ರವಾಹ ಯುವಕ ನೀರಿಗೆ ಕೊಚ್ಚಿ ಹೋಗಿದ್ದಾನೆ.


Body:ಜಿಲ್ಲೆಯ ದೇವದುರ್ಗ ತಾಲೂಕಿನ ಚಿಂಚೋಡಿ ಗ್ರಾಮದಲ್ಲಿ ಸಂತೋಷ ನೀರುಪಾಲು ಆಗಿದೆ. ಚಿಂಚೋಡಿ ಗ್ರಾಮದ ನದಿ ಅಚೆಗೆ ನಡುಗಡ್ಡೆ ಪ್ರದೇಶಕ್ಕೆ ದನ ಕಾಯಲು ಯುವಕರು ತೆರಳಿದ್ದಾರೆ. ನಡುಗಡ್ಡೆ ಪ್ರದೇಶಕ್ಕೆ ಬೆಳಿಗ್ಗೆ ತೆರಳಿದಾಗ ನದಿಯಲ್ಲಿ ಇರಲಿಲ್ಲ. ಆದ್ರೆ ಮಧ್ಯಾಹ್ನ ಏಕಾಏಕಿ ನದಿಗೆ ೫೦ ಸಾವಿರ ಹೆಚ್ಚು ಕ್ಯೂಸೆಕ್ಸ್ ಅಧಿಕ ನೀರು ಬಿಟ್ಟಿದ್ದಾರೆ. ಹೀಗಾಗಿ ದನ ಕಾಯಲು ಹೋದ ನಾಲ್ವರ ನಡುಗಡ್ಡೆ ಸಿಲುಕಿದ್ದಾರೆ.


Conclusion:ಆಗ ಸಂತೋಷ ಸೇರಿದಂತೆ ನಾಲ್ವರ ದನಗಳ ಬಾಲ ಹಿಡಿದುಕೊಂಡು ವಾಪಾಸ್ ಬರುತ್ತಿದ್ದಾರೆ. ಸಂತೋಷ ಹಿಡಿದಕೊಂಡಗ ಆಕಸ್ಮಿಕ ಕೈಜಾರಿಗೆ ನೀರು ಕೊಚ್ಚಿಕೊಂಡು ಹೋಗಿದ್ದು, ಮೂವರು ಪ್ರಾಣಪಾಯದಿಂದ ಪಾರು ಆಗಿದ್ದಾರೆ. ಸಂತೋಷ ಮಾತ್ರದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಮೃತದೇಹ ಇದುವರೆಗೆ ಪತ್ತೆಯಾಗಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ನಿನ್ನೆ ಸಂಜೆ ಹಾಗೂ ಇಂದು ಬೆಳಿಗ್ಗೆ ಬೋಟ್ ಸಹಾಯದಿಂದ ಶೋಧ ಕಾರ್ಯ ನಡೆಸಿದ್ರು ದೇಹ ಪತ್ತೆಯಾಗಿಲ್ಲ. ಮಗನನ್ನು ಕಳೆದಕೊಂಡ ಪೊಷಕರ ಆಕ್ರಂದನ ಮುಗಿಲು ಮುಟ್ಟದೆ‌. ಜಿಲ್ಲಾಡಳಿತದಿಂದ ನದಿಗೆ ನೀರು ಬಿಟ್ಟಿರುವ ಬಗ್ಗೆ ಡಂಗೋರ ಸರಿ, ಮಾಹಿತಿ ನೀಡಿಲ್ಲ. ಒಂದು ನದಿಗೆ ನೀರು ಬಿಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದರೆ ನಾವು ನಮ್ಮ ಮಕ್ಕಳನ್ನ ಕಳೆದುಕೊಳ್ಳುತ್ತಿಲ್ಲ, ಜಿಲ್ಲಾಡಳಿತ ಮಾಹಿತಿ ನೀಡದೆ ಇರುವುದು ಈ ಅನಾಹುತ ಕಾರಣವೆಂದು ಮೃತ ಯುವಕನ ಪೊಷಕರು ಹಾಗೂ ಗ್ರಾಮಸ್ಥರು ದೂರಿದ್ರೆ.

ಬೈಟ್.೧: ಬಸವರಾಜ ಮೇಟಿ, ಸಂತೋಷನ ಚಿಕ್ಕಪ್ಪ
ಬೈಟ್.೨: ದುರುಗಣ್ಣ ಆದೋನಿ, ಚಿಂಚೋಡಿ ಗ್ರಾಮಸ್ಥ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.