ETV Bharat / state

ಸಂಸದ ಪ್ರತಾಪ ಸಿಂಹರಿಂದ ಮೋದಿ ಮತ್ತು ಬಿಜೆಪಿಗೆ ಕೆಟ್ಟ ಹೆಸರು: ಎಂಎಲ್​ಸಿ ಮಂಜೇಗೌಡ

author img

By

Published : Nov 17, 2022, 3:45 PM IST

Updated : Nov 17, 2022, 10:55 PM IST

KN_MYS
ಎಂಎಲ್​ಸಿ ಮಂಜೇಗೌಡ

ಮೈಸೂರಿನ ಬಸ್ ತಂಗುದಾಣದ ಗೋಪುರ ವಿವಾದ ಬಗ್ಗೆ ಎಂಎಲ್​ಸಿ ಮಂಜೇಗೌಡ ಪ್ರತಿಕ್ರಿಯಿಸಿ ಸಂಸದ ಪ್ರತಾಪ ಸಿಂಹ ಚುನಾವಣೆ ಗಿಮಿಕ್​ಗಾಗಿ ಇಂತಹ ಕೆಲಸ ಮಾಡುತ್ತಿದ್ದಾರೆ. ಇವರಿಂದ ಪ್ರಧಾನಿ ಮೋದಿ ಹಾಗೂ ಬಿಜೆಪಿಗೂ ಕೆಟ್ಟ ಹೆಸರು ಎಂದು ಹೇಳಿದರು.

ಮೈಸೂರು: ಮೈಸೂರು - ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ, ಬಸ್ ತಂಗುದಾಣದ ಗೋಪುರಕ್ಕೆ ಸಂಬಂಧಿಸಿದಂತೆ ಭಾರಿ ವಿವಾದ ಉಂಟಾದ ಹಿನ್ನೆಲೆಯಲ್ಲಿ, ಜೆಡಿಎಸ್ ಎಂಎಲ್​ಸಿ ಮಂಜೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಪತ್ರಕರ್ತರ ಭವನದಲ್ಲಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಸಂಸದ ಪ್ರತಾಪ ಸಿಂಹ ಚುನಾವಣೆ ಗಿಮಿಕ್​ಗಾಗಿ ಇಂತಹ ಕೆಲಸ ಮಾಡುತ್ತಿದ್ದಾರೆ. ಇವರಿಂದ ಪ್ರಧಾನಿ ಮೋದಿ ಹಾಗೂ ಬಿಜೆಪಿಗೆ ಕೆಟ್ಟ ಹೆಸರು ಎಂದು ಹೇಳಿದರು.

ಮಂಜೇಗೌಡ ಪ್ರತಿಕ್ರಿಯೆ

ಚಾಮುಂಡೇಶ್ವರಿ ಬೆಟ್ಟದಲ್ಲಿ ನಾಳೆ ಎಚ್​ಡಿಕೆ ಅವರಿಂದ ಪೂಜೆ: ಮುಳಬಾಗಿಲಿನಲ್ಲಿ ಪಂಚರತ್ನ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿರುವ ಹಿನ್ನೆಲೆಯಲ್ಲಿ, ಮಾಜಿ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರು ಇಂದು ಸಂಜೆ, ಮೈಸೂರಿಗೆ ಆಗಮಿಸಿ, ನಾಳೆ ಬೆಳಗ್ಗೆ ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ತೆರಳಲಿದ್ದಾರೆ. ಶಾಸಕ ಜಿ.ಟಿ.ದೇವೇಗೌಡ ಅವರು ಪಕ್ಷದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಮುಂದಿನ ದಿನಗಳಲ್ಲಿ ಭಾಗಿಯಾಗಲಿದ್ದಾರೆ. ಅವರ ಮನೆ ಮೇಲೆ ಕೂಡ ಪಕ್ಷದ ಬಾವುಟ ಹಾರಾಡುತ್ತಿದೆ ಎಂದು ಹೇಳಿದರು.

ಮೂಲೆ ಹಾಗೂ ಸಿಎ ನಿವೇಶನವನ್ನು ಹರಾಜು ಹಾಕಲು ಮುಂದಾಗಿದ್ದು, ಮುಡಾ ಹರಾಜು ಪ್ರಕ್ರಿಯೆ ನಿಲ್ಲಿಸಬೇಕು. ಮುಡಾ ಹೊಸ ಬಡಾವಣೆ ಮಾಡುತ್ತಿಲ್ಲ, ಇರುವ ನಿವೇಶನಗಳನ್ನೇ ಹರಾಜು ಹಾಕಿ, ಖಾಲಿ ಮಾಡಿದ್ದಾರೆ. ಇದು ಹೀಗೆ ಮುಂದುವರಿದರೆ ನೌಕರರಿಗೆ ಸಂಬಳ ಕೊಡಲು ಹಣ ಇರುವುದಿಲ್ಲ ಎಂದು ಮಂಜೇಗೌಡ ತಿಳಿಸಿದರು.

ಇದನ್ನೂ ಓದಿ: ಮತದಾರರ ಸಮೀಕ್ಷೆ ಹೆಸರಿನಲ್ಲಿ ಖಾಸಗಿತನಕ್ಕೆ ಕನ್ನ ಆರೋಪ.. ನಗರ ಪೊಲೀಸ್ ಆಯುಕ್ತರಿಗೆ ಕಾಂಗ್ರೆಸ್ ದೂರು

Last Updated :Nov 17, 2022, 10:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.