ETV Bharat / state

ರೈತರ ಜಮೀನಿಗೆ ನುಗ್ಗಿದ ಹೇಮಾವತಿ ನಾಲೆ ನೀರು.. ಲಕ್ಷಾಂತರ ಮೌಲ್ಯದ ಬೆಳೆ ಹಾನಿ

author img

By

Published : Aug 4, 2021, 12:34 PM IST

hemavathi-canal-water-overflowed-into-agriculture-land
ಲಕ್ಷಾಂತರ ಮೌಲ್ಯದ ಬೆಳೆ ಹಾನಿ

ಮಳೆಯಾರ್ಭಟ ಕಡಿಮೆಯಾಗಿ ರೈತರು ನಿಟ್ಟುಸಿರು ಬಿಡುವ ಮೊದಲೇ ನಾಲೆ ನೀರು ಜಮೀನಿಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಅಧಿಕ ಪ್ರಮಾಣದ ನೀರು ನಾಲೆಗೆ ಬಂದ ಪರಿಣಾಮ ನಾಲೆಯ ಒಂದು ಭಾಗದಲ್ಲಿ ಮಣ್ಣು ಕುಸಿತ ಉಂಟಾಗಿ ನೀರು ಜಮೀನಿಗೆ ನುಗ್ಗಿದೆ.

ಮಂಡ್ಯ: ಹೇಮಗಿರಿ ನಾಲೆಗೆ ನೀರು ಹರಿಯಬಿಟ್ಟ ಪರಿಣಾಮ ಏರಿಯ ಒಂದು ಭಾಗ ಕುಸಿದು ಅಪಾರ ಪ್ರಮಾಣದ ನೀರು ರೈತರ ಜಮೀನಿಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಾಶವಾಗಿದೆ. ಕೆ.ಆರ್. ಪೇಟೆ ತಾಲೂಕಿನ ಪಿ.ಡಿ. ಜಿ ಕೊಪ್ಪಲು ಗ್ರಾಮದ ಬಳಿಕ ನಾಲೆಯ ಒಂದು ಭಾಗದಲ್ಲಿ ಮಣ್ಣು ಕುಸಿತ ಉಂಟಾಗಿ ರೈತರ ಜಮೀನಿಗೆ ನೀರು ನುಗ್ಗಿದೆ.

ರೈತರ ಜಮೀನಿಗೆ ನುಗ್ಗಿದ ಹೇಮಾವತಿ ನಾಲೆ ನೀರು

ನಾಲೆಗೆ ನಿಗದಿತ ಪ್ರಮಾಣಕ್ಕಿಂತಲೂ ಅಧಿಕ ಪ್ರಮಾಣದ ನೀರು ಹರಿಬಿಟ್ಟ ಪರಿಣಾಮ ನಾಲೆಯ ಒಂದು ಭಾಗ ಕುಸಿತಕ್ಕೊಳಗಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ನಾಲಾ ವ್ಯಾಪ್ತಿಯಲ್ಲಿ ಬೆಳೆದಿದ್ದ ಸೇವಂತಿಗೆ, ಗುಲಾಬಿ, ಸೌತೆಕಾಯಿ, ಭತ್ತದ ಮಡಿ ಸಸಿಗಳು ಜಲಾವೃತಗೊಂಡಿವೆ. ಕೆಲವು ಕಡೆ ಕೃಷಿ ಭೂಮಿಯ ಮಣ್ಣು ಕೊಚ್ಚಿಹೋಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಕಾಲುವೆ ಏರಿಯ ಮೇಲಿನ ವಿದ್ಯುತ್ ಕಂಬಗಳೂ ಕುಸಿದು ಬಿದ್ದಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಕಳಪೆ ಕಾಮಗಾರಿ ಆರೋಪ

ಕಾಲುವೆಯ ಮೂಲಕ ಕೃಷಿ ಚಟುವಟಿಕೆಗಳಿಗೆ ನೀರು ಹರಿಸಬೇಕಾದ ಸಂದರ್ಭದಲ್ಲಿ ಇಂಜಿನಿಯರ್‌ಗಳು ಹೂಳೆತ್ತುವ ಕಾಮಗಾರಿ ಆರಂಭಿಸಿದ್ದರು. ಗುತ್ತಿಗೆದಾರ ಸರಿಯಾದ ರೀತಿಯಲ್ಲಿ ಹೂಳೆತ್ತದೆ ಸಡಿಲಗೊಂಡ ಹೂಳುಮಣ್ಣು ಮತ್ತು ಗಿಡಗಂಟೆಗಳು ಕಾಲುವೆಯಲ್ಲಿಯೇ ಉಳಿದಿದ್ದವು. ಈ ವೇಳೆ ನಾಲೆಗೆ ನೀರು ಹರಿಸಿದ್ದು, ನಾಲೆಯ ಮೇಲೆ ಉಕ್ಕಿ ಬಂದಿದೆ. ಇದರಿಂದ ನೀರು ರೈತರ ಜಮೀನಿಗೆ ನುಗ್ಗಿದೆ ಎಂದು ಆರೋಪಿಸಿದ್ದಾರೆ.

ಓದಿ: ಇಂದಿನಿಂದ ಮಂಡ್ಯ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.