ETV Bharat / state

ನಾವೆಲ್ಲೂ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿಲ್ಲ: ಮಾಜಿ ಶಾಸಕ ಅನಿಲ್ ಲಾಡ್

author img

By

Published : Apr 20, 2019, 3:03 PM IST

ರಾಹುಲ್ ಗಾಂಧಿ ಅವರು ಪ್ರಧಾನ ಮಂತ್ರಿ ಆಗಬೇಕು ಎಂಬುದು ನಮ್ಮ ಅಪೇಕ್ಷೆ. ಆದರೆ, ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ನಾವು ಎಲ್ಲೂ ಘೋಷಣೆ ಮಾಡಿಲ್ಲ. ಅದನ್ನು ಪಕ್ಷ ಆ ಸಂದರ್ಭದಲ್ಲಿ ತೀರ್ಮಾನ ಮಾಡುತ್ತದೆ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಅನಿಲ್ ಲಾಡ್ ಹೇಳಿದ್ದಾರೆ.

ಅನಿಲ್ ಲಾಡ್

ಕೊಪ್ಪಳ: ನಾವೆಲ್ಲೂ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿಲ್ಲ. ನಮ್ಮ ಪಕ್ಷದ‌‌‌ ಮುಖಂಡರಲ್ಲಿ ಯಾರಾದರೂ ಪ್ರಧಾನಿಯಾಗಬಹುದು ಎಂದು ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಅನಿಲ್ ಲಾಡ್ ಹೇಳಿದ್ದಾರೆ.

ಕೊಪ್ಪಳದಲ್ಲಿ ಮಾಜಿ ಶಾಸಕ ಅನಿಲ್ ಲಾಡ್ ಹೇಳಿಕೆ

ಕೊಪ್ಪಳದಲ್ಲಿ ಮಾತನಾಡಿದ ಅನಿಲ್ ಲಾಡ್, ರಾಹುಲ್ ಗಾಂಧಿ ಅವರು ಪ್ರಧಾನ ಮಂತ್ರಿ ಆಗಬೇಕು ಎಂಬುದು ನಮ್ಮ ಅಪೇಕ್ಷೆ. ಆದರೆ, ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ನಾವು ಎಲ್ಲೂ ಘೋಷಣೆ ಮಾಡಿಲ್ಲ. ಅದನ್ನು ಪಕ್ಷ ಆ ಸಂದರ್ಭದಲ್ಲಿ ತೀರ್ಮಾನ ಮಾಡುತ್ತದೆ. ಸಮಯ ಬಂದರೆ ಸಿದ್ದರಾಮಯ್ಯ, ಮನಮೋಹನ್ ಸಿಂಗ್, ಮಲ್ಲಿಕಾರ್ಜುನ್ ಖರ್ಗೆ, ಎ.ಕೆ.ಆ್ಯಂಟನಿ ಸೇರಿದಂತೆ ಯಾರಾದರೂ ಪ್ರಧಾನಿಯಾಗಬಹುದು. ರಾಹುಲ್ ಗಾಂಧಿ ಅವರ ಅಜ್ಜಿ, ಅವರ ತಂದೆ ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ರಾಹುಲ್ ಗಾಂಧಿ ಅವರು ಕಿರಿಯ ವಯಸ್ಸಿನಲ್ಲಿ ರಾಜಕಾರಣಕ್ಕೆ ಬಂದಿದ್ದಾರೆ. ಮೋದಿ ಅವರು 15 ವರ್ಷ ಸಿಎಂ ಆಗಿ ಆಡಳಿತ ಮಾಡಿದ್ದಾರೆ. ಅವರಂತೆ ಮಾತನಾಡುವ ಹಾಗೂ ಸುಳ್ಳು ಹೇಳುವ ಕಲೆಯನ್ನು, ಅನುಭವವನ್ನು ರಾಹುಲ್ ಗಾಂಧಿ ಹೊಂದಿಲ್ಲ. ಕಳೆದ ಬಾರಿ ಮೋದಿ ಜನರಿಗೆ ಸಾಕಷ್ಟು ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದರು. ಕಪ್ಪು ಹಣವನ್ನು ತರುತ್ತೇನೆ. ಪ್ರತಿಯೊಬ್ಬರಿಗೂ 15 ಲಕ್ಷ ರೂಪಾಯಿ ಜನ್​ಧನ್ ಅಕೌಂಟ್​ಗೆ ಹಾಕುತ್ತೇನೆ ಎಂದು ಹೇಳಿದ್ದರು. ಹಣ ಹಾಕಲಿಲ್ಲ. ಈ ಬಾರಿ ಒಂದು ವೇಳೆ ಪುಲ್ವಾಮಾ ಘಟನೆ ನಡೆಯದಿದ್ದರೆ ಮೋದಿ ಯಾವ ವಿಷಯವನ್ನಿಟ್ಟುಕೊಂಡು ಚುನಾವಣೆಗೆ ಹೋಗುತ್ತಿದ್ದರು ಎಂದು ಅನಿಲ್ ಲಾಡ್ ಪ್ರಶ್ನೆ ಮಾಡಿದರು.

ನಾನು ಕೊಪ್ಪಳಕ್ಕೆ ಸಮುದಾಯದ ಜನರನ್ನು ಭೇಟಿ ಮಾಡಿ ತುಳಜಾ ಭವಾನಿ ದೇವಸ್ಥಾನ ದರ್ಶನಕ್ಕೆ ಬಂದಿದ್ದೇನೆ. ಹಾಗೆಯೇ ನಮ್ಮ ಮೈತ್ರಿ ಅಭ್ಯರ್ಥಿಯ ಪರ ಮತಯಾಚಿಸಿದೆ ಎಂದರು. ಒಂದು ವೇಳೆ ಮಹಾಘಟ್‌ಬಂಧನ್​ ಅಧಿಕಾರಕ್ಕೆ ಬಂದರೆ ಮಹಾಘಟ್‌ಬಂಧನ್​ದ ಯಾವುದೇ ನಾಯಕರಾದರೂ ಪ್ರಧಾನಮಂತ್ರಿ ಆಗಬಹುದು ಎಂದು ತಿಳಿಸಿದರು.

Intro:


Body:ಕೊಪ್ಪಳ:- ನಾವೆಲ್ಲೂ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿಲ್ಲ. ನಮ್ಮ ಪಕ್ಷದ‌‌‌ ಮುಖಂಡರಲ್ಲಿ ಯಾರಾದರೂ ಪ್ರಧಾನಿಯಾಗಬಹುದು ಎಂದು ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಅನೀಲ್ ಲಾಡ್ ಹೇಳಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿರುವ ಅನಿಲ್ ಲಾಡ್, ರಾಹುಲ್ ಗಾಂಧಿ ಅವರು ಪ್ರಧಾನಮಂತ್ರಿ ಆಗಬೇಕು ಎಂಬುದು ನಮ್ಮ ಅಪೇಕ್ಷೆ. ಆದರೆ ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ನಾವು ಎಲ್ಲೂ ಘೋಷಣೆ ಮಾಡಿಲ್ಲ. ಅದನ್ನು ಪಕ್ಷ ಆ ಸಂದರ್ಭದಲ್ಲಿ ತೀರ್ಮಾನ ಮಾಡುತ್ತದೆ. ಸಮಯ ಬಂದರೆ ಸಿದ್ದರಾಮಯ್ಯ, ಮನಮೋಹನ್ ಸಿಂಗ್, ಮಲ್ಲಿಕಾರ್ಜುನ್ ಖರ್ಗೆ, ಎ.ಕೆ. ಆ್ಯಂಟನಿ ಸೇರಿದಂತೆ ಯಾರಾದರೂ ಪ್ರಧಾನಿಯಾಗಬಹುದು. ರಾಹುಲ್ ಗಾಂಧಿ ಅವರ ಅಜ್ಜಿ, ಅವರ ತಂದೆ ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ರಾಹುಲ್ ಗಾಂಧಿ ಅವರು ಕಿರಿಯ ವಯಸ್ಸಿನಲ್ಲಿ ರಾಜಕಾರಣಕ್ಕೆ ಬಂದಿದ್ದಾರೆ. ಮೋದಿ ಅವರು ೧೫ ವರ್ಷ ಸಿಎಂ ಆಗಿ ಆಡಳಿತ ಮಾಡಿದ್ದಾರೆ. ಅವರಂತೆ ಮಾತನಾಡುವ ಹಾಗೂ ಸುಳ್ಳು ಹೇಳುವ ಕಲೆಯನ್ನು, ಅನುಭವವನ್ನು ರಾಹುಲ್ ಗಾಂಧಿ ಹೊಂದಿಲ್ಲ. ಕಳೆದ ಬಾರಿ ಮೋದಿ ಜನರಿಗೆ ಸಾಕಷ್ಟು ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದರು. ಕಪ್ಪು ಹಣವನ್ನು ತರುತ್ತೇನೆ. ಪ್ರತಿಯೊಬ್ಬರಿಗೂ ೧೫ ಲಕ್ಷ ರುಪಾಯಿ ಜನ್ ಧನ್ ಅಕೌಂಟ್ ಗೆ ಹಾಕುತ್ತೇನೆ ಎಂದು ಹೇಳಿದ್ದರು. ಹಣ ಹಾಕಲಿಲ್ಲ. ಈ ಬಾರಿ ಒಂದು ವೇಳೆ ಪುಲ್ವಾಮಾ ಘಟನೆ ನಡೆಯದಿದ್ದರೆ ಮೋದಿ ಯಾವ ವಿಷಯವನ್ನಿಟ್ಟುಕೊಂಡು ಚುನಾವಣೆಗೆ ಹೋಗುತ್ತಿದ್ದರು ಎಂದು ಅನೀಲ್ ಲಾಡ್ ಪ್ರಶ್ನೆ ಮಾಡಿದರು. ನಾನು ಕೊಪ್ಪಳಕ್ಕೆ ಸಮುದಾಯದ ಜನರನ್ನು ಭೇಟಿ ಮಾಡಿ ತುಳಜಾಭವಾನಿ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದೇನೆ. ಹಾಗೆಯೇ ನಮ್ಮ ಮೈತ್ರಿ ಅಭ್ಯರ್ಥಿಯ ಪರ ಮತ ಯಾಚಿಸಿದೆ ಎಂದರು. ಇನ್ನು ಒಂದು ವೇಳೆ ಮಹಾಘಟಬಂಧನ ಅಧಿಕಾರಕ್ಕೆ ಬಂದರೆ ಮಹಾಘಟಬಂಧನದ ಯಾವುದೇ ನಾಯಕರಾದರು ಪ್ರಧಾನಮಂತ್ರಿ ಆಗಬಹುದು ಎಂದರು. ನಮಗೆ ರಾಹುಲ್ ಗಾಂಧಿ ಪ್ರಧಾನಿಯಾಗಬೇಕು ಎಂಬ ಆಸೆಯಾದರೆ, ಜೆಡಿಎಸ್ ಕಾರ್ಯಕರ್ತರಿಗೆ ಎಚ್ಡಿ ದೇವೇಗೌಡರು ಪ್ರಧಾನಿಯಾಗಬೇಕು ಎಂಬ ಆಸೆ ಇರುತ್ತೆ. ಆದರೆ, ಅಂದಿನ ಸಂದರ್ಭಕ್ಕೆ ಪಕ್ಷದ ವರಿಷ್ಠರು ಸೂಕ್ತ ನಿರ್ಧಾರ ತೆಗೆದುಕೊಳ್ತಾರೆ ಎಂದು ಅನೀಲ್ ಲಾಡ್ ಹೇಳಿದರು. ಇನ್ನು ಬಳ್ಳಾರಿಯಲ್ಲಿ ವಿ.ಎಸ್. ಉಗ್ರಪ್ಪ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.


Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.