ETV Bharat / state

ಭತ್ತದ ಬೆಳೆಗೆ ಕಣಿ ಹುಳುವಿನ ಬಾಧೆ: ಗಂಗಾವತಿ ತಾಲೂಕಿನ ವಿವಿಧ ಗ್ರಾಮಗಳಿಗೆ ವಿಜ್ಞಾ‌ನಿಗಳ ತಂಡ ಭೇಟಿ

author img

By

Published : Dec 29, 2020, 3:39 PM IST

Gangavathi
ಗಂಗಾವತಿ ತಾಲೂಕಿನ ವಿವಿಧ ಗ್ರಾಮಗಳಿಗೆ ವಿಜ್ಞಾ‌ನಿಗಳ ತಂಡ ಭೇಟಿ

ಕೃಷಿ ವಿಜ್ಞಾನ ಹಾಗೂ ಸಂಶೋಧನಾ ಕೇಂದ್ರ ತಂಡದಲ್ಲಿನ ವಿಜ್ಞಾನಿಗಳು ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿ, ವಿದ್ಯಾನಗರ, ಮರಳಿ ಮತ್ತಿತರ ಗ್ರಾಮಗಳ ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗಂಗಾವತಿ: ನೀರಾವರಿ ಪ್ರದೇಶದಲ್ಲಿ ನಾಟಿ ‌ಮಾಡಿರುವ ಭತ್ತದ ಬೆಳೆಗೆ ಕಣಿ ಹುಳುವಿನ ಬಾಧೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಹಾಗೂ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಭತ್ತದ ಬೆಳೆಗೆ ಕಣಿ ಹುಳುವಿನ ಬಾಧೆ: ಗಂಗಾವತಿ ತಾಲೂಕಿನ ವಿವಿಧ ಗ್ರಾಮಗಳಿಗೆ ವಿಜ್ಞಾ‌ನಿಗಳ ತಂಡ ಭೇಟಿ

ಕೃಷಿ ವಿಜ್ಞಾನ ಹಾಗೂ ಸಂಶೋಧನಾ ಕೇಂದ್ರ ತಂಡದಲ್ಲಿನ ವಿಜ್ಞಾನಿಗಳು ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿ, ವಿದ್ಯಾನಗರ, ಮರಳಿ ಮತ್ತಿತರ ಗ್ರಾಮಗಳ ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಹಿಂದೆ ನಾಟಿ ‌ಮಾಡಲಾಗಿದ್ದ ಬೆಳೆಗೂ ಈ ಸಮಸ್ಯೆ ಕಾಣಿಸಿಕೊಂಡಿತ್ತು. ಇದೀಗ 2ನೇ ಬೆಳೆಗೂ ಈ ಸಮಸ್ಯೆ ಕಾಣಿಸಿಕೊಂಡಿದೆ. ಈ ಬಾಧೆಯಿಂದ ಭತ್ತದ ಪೈರಿನಲ್ಲಿ ಕೊಳವೆ ಆಕಾರದ ಹುಲ್ಲು ಬೆಳೆಯುತ್ತದೆ. ತೆನೆ ಕಟ್ಟದಿರುವುದರಿಂದ ಇಳುವರಿ ಕಡಿಮೆಯಾಗಿದೆ. ಕೇವಲ 20 ದಿನದ ಭತ್ತದ ನಾಟಿಯಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ ಎಂದು ರೈತರು ಅಧಿಕಾರಿಗಳೊಂದಿಗೆ ತಮ್ಮ ಅಳಲು ತೋಡಿಕೊಂಡರು.

ಹವಾಮಾನ ಸಮಸ್ಯೆಯೋ, ಬೀಜ, ನೀರು, ಗೊಬ್ಬರದ ಸಮಸ್ಯೆಯೋ ಎಂಬುವುದರ ಬಗ್ಗೆ ಪ್ರಯೋಗಾಲಯಕ್ಕೆ ಸ್ಯಾಂಪಲ್‌ ಕಳುಹಿಸಿ ಪರಿಶೀಲಿಸಲಾಗುವುದು ಎಂದು ಕೃಷಿ ಇಲಾಖೆ ಹಾಗೂ ವಿಜ್ಞಾನಿಗಳು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.