ETV Bharat / state

ಪ್ರಚಾರಕ್ಕೆ ತೆರಳಿದ್ದ ಶಾಸಕ ಹಿಟ್ನಾಳ್​​ರಿಗೆ ಜನರ ತರಾಟೆ : ವಿಡಿಯೋ ವೈರಲ್​​

author img

By

Published : Dec 24, 2021, 9:15 AM IST

mla-raghavendra-hitnal
ಶಾಸಕ ಹಿಟ್ನಾಳ್

ಅಭ್ಯರ್ಥಿ ಪರ ಮತಯಾಚನೆಗೆ ತೆರಳಿದ್ದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್​​ ಅವರನ್ನು ಮತದಾರರು ತರಾಟೆಗೆ ತೆಗೆದುಕೊಂಡ ಘಟನೆ ಕೊಪ್ಪಳದ ಭಾಗ್ಯನಗರದಲ್ಲಿ ಜರುಗಿದೆ. ಘಟನೆಯ ದೃಶ್ಯ ವೈರಲ್​ ಆಗಿದೆ..

ಕೊಪ್ಪಳ : ಪಟ್ಟಣ ಪಂಚಾಯತ್​ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಮತ ಕೇಳಲು ಹೋದ ಶಾಸಕ ಕೆ ರಾಘವೇಂದ್ರ ಹಿಟ್ನಾಳ್ ಅವರನ್ನು ಮತದಾರರು ತರಾಟೆಗೆ ತೆಗೆದುಕೊಂಡ ಘಟನೆ ನಗರದ ಭಾಗ್ಯನಗರದಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಪ್ರಚಾರಕ್ಕೆ ತೆರಳಿದ್ದ ಶಾಸಕ ಹಿಟ್ನಾಳ್​​ಗೆ ನಾಗರಿಕರಿಂದ ತರಾಟೆ..

ಪಟ್ಟಣ ಪಂಚಾಯತ್​ ಚುನಾವಣೆ ಹಿನ್ನೆಲೆ ತಮ್ಮ ಅಭ್ಯರ್ಥಿಯ ಪರ ಮತಯಾಚನೆಗಾಗಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಭಾಗ್ಯನಗರದ ನವನಗರದಲ್ಲಿ ನಿನ್ನೆ ರಾತ್ರಿ ತೆರಳಿದ್ದರು.

ಈವರೆಗೂ ಇತ್ತ ಕಣ್ಣು ಹಾಯಿಸದ ನೀವು, ಈಗ ಚುನಾವಣೆ ಇದೆ ಎಂದು ಬಂದಿದ್ದೀರಿ‌ ಎಂದು ತರಾಟೆಗೆ ತೆಗೆದುಕೊಂಡರು. ಆಗ ಅವರನ್ನು ಸಮಾಧಾನಪಡಿಸಿದ ಶಾಸಕರು, ಈಗ ಭರವಸೆ ನೀಡಲು ಬರುವುದಿಲ್ಲ. ಚುನಾವಣೆ ಮುಗಿದ ಬಳಿಕ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.