ETV Bharat / state

ಹನುಮನ ಜನ್ಮಸ್ಥಳ ವಿವಾದ.. 1 ವಾರದಲ್ಲಿ ಸಾಕ್ಷ್ಯ ಬಹಿರಂಗಕ್ಕೆ ಟಿಟಿಡಿಗೆ ಗೋವಿಂದಾನಂದ ಸ್ವಾಮೀಜಿ ಸವಾಲು!

author img

By

Published : Apr 27, 2021, 7:40 PM IST

Updated : Apr 27, 2021, 8:44 PM IST

pressmeet
pressmeet

ಹನುಮ ಜನ್ಮ ಭೂಮಿ ಸಂಬಂಧ ಕರ್ನಾಟಕ ಹಾಗೂ ಆಂಧ್ರಪ್ರದೇಶದ ನಡುವೆ ವಿವಾದ ಹುಟ್ಟುಹಾಕಿರುವ ಟಿಟಿಡಿಗೆ ಹನುಮಾನ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಸ್ವಾಮಿ ಗೋವಿಂದಾನಂದ ಸರಸ್ವತಿ ಒಂದು ವಾರಗಳ ಗಡುವು ನೀಡಿದ್ದಾರೆ. ಈ ಅವಧಿಯಲ್ಲಿ ಸೂಕ್ತ ಸಾಕ್ಷ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಗಂಗಾವತಿ(ಕೊಪ್ಪಳ): ಹನುಮನ ಜನ್ಮ ಭೂಮಿ ಹಾಗೂ ಅಂಜನಾದ್ರಿಯ ಬಗ್ಗೆ ಅನಗತ್ಯ ವಿವಾದ ಹುಟ್ಟುಹಾಕಲಾಗಿದೆ ಎಂದು ತಿರುಮಲ ತಿರುಪತಿ ದೇಗುಲದ ಆಡಳಿತ ಮಂಡಳಿಯ ವಿರುದ್ಧ ಹನುಮಾನ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಸ್ವಾಮಿ ಗೋವಿಂದಾನಂದ ಸರಸ್ವತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅತಿ ಶೀಘ್ರ ಬೆಂಗಳೂರಿನಲ್ಲಿ ಈ ಬಗ್ಗೆ ಮಾಧ್ಯಮಗೋಷ್ಟಿ ನಡೆಸಲಾಗುವುದು. ಬಳಿಕ ತಿರುಪತಿಗೆ ತೆರಳಿ ಅಲ್ಲಿಯೂ ಮಾಧ್ಯಮದ ಮೂಲಕ ಅಂಜನಾದ್ರಿಯ ಮೂಲದ ಬಗ್ಗೆ ಪೌರಾಣಿಕೆ ಹಿನ್ನೆಲೆ ಕುರಿತ ಸಾಕ್ಷಿ ನೀಡಲಾಗುವುದು ಎಂದರು.

1 ವಾರದಲ್ಲಿ ಸಾಕ್ಷ್ಯ ಬಹಿರಂಗಕ್ಕೆ ಟಿಟಿಡಿಗೆ ಗೋವಿಂದಾನಂದ ಸ್ವಾಮೀಜಿ ಸವಾಲು
ಬಳಿಕ ಒಂದು ವಾರ ತಿರುಪತಿಯಲ್ಲಿಯೇ ಉಳಿಯಲಿದ್ದು, ಟಿಟಿಡಿಗೆ ವಾರದ ಗಡುವು ನೀಡಿ ಅಂಜನಾದ್ರಿ ದೇಗುಲದ ಬಗ್ಗೆ ವಿನಾಃಕಾರಣ ಗೊಂದಲ ನಿರ್ಮಾಣ ಮಾಡಿರುವ ಬಗ್ಗೆ ಸಾಕ್ಷಿ ನೀಡಲು ಪಂಥಾಹ್ವಾನ ನೀಡಲಾಗುವುದು. ಅವರು ಸವಾಲು ಸ್ವೀಕರಿಸಿದರೆ ಸೂಕ್ತ ಸಾಕ್ಷ್ಯಗಳನ್ನು ನೀಡಬೇಕು, ನಮ್ಮಲ್ಲಿರುವ ಸಾಕ್ಷ್ಯಗಳನ್ನು ಒದಗಿಸಿ ನಾವೂ ಚರ್ಚೆಗೆ ಸಿದ್ಧರಿದ್ದೇವೆ ಎಂದು ಸ್ವಾಮೀಜಿ ಸವಾಲು ಹಾಕಿದರು.

ಹನುಮನ ಮೂಲದ ಸ್ಥಳದ ಬಗ್ಗೆ ವಿವಾದ ಸೃಷ್ಟಿಸಿರುವುದು ಒಂದು ಷಡ್ಯಂತ್ರ. ಹಿಂದು ಧರ್ಮದ ಗ್ರಂಥಗಳನ್ನು, ಪೌರಾಣಿಕ ಹಿನ್ನೆಲೆಗಳನ್ನು ವಿರೂಪಗೊಳಿಸುವ ಷಡ್ಯಂತ್ರ ನಡೆದಿದೆ ಎಂದು ಸ್ವಾಮೀಜಿ ಆರೋಪಿಸಿದರು.

ಕಳೆದ ವಾರ ಹನುಮನ ಜನ್ಮಸ್ಥಳ ತಿರುಪತಿ ಬಳಿಯಿರುವ ಅಂಜನಾದ್ರೀಯೇ ಹನುಮನ ಜನ್ಮಸ್ಥಳ ಎಂದು ಟಿಟಿಡಿ ಪ್ರಕಟಣೆ ಹೊರಡಿಸಿತ್ತು. ಎಪ್ರಿಲ್​ 21ರಂದು ಆಂಜನೇಯನ ಜನ್ಮಸ್ಥಳದ ಬಗ್ಗೆ ಅಧಿಕೃತ ಮಾಹಿತಿ ರಿಲೀಸ್ ಮಾಡಿದ್ದ ಟಿಟಿಡಿ, ಆಕಾಶ ಗಂಗಾ ಬಳಿಯ ಏಳು ಬೆಟ್ಟಗಳಲ್ಲಿ ಒಂದಾದ ಅಂಜನಾದ್ರಿ ಬೆಟ್ಟದಲ್ಲಿ ಜನ್ಮಸ್ಥಳ ಎಂದು ಹೇಳಿಕೊಂಡಿತ್ತು. ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿ ಆಚಾರ್ಯ ಮುರುಳೀಧರ ಶರ್ಮಾ ಇದಕ್ಕೆ ಸಂಬಂಧಿಸಿದಂತೆ ಪ್ರಕಟಣೆ ಹೊರಡಿಸಿದ್ದರು.

Last Updated :Apr 27, 2021, 8:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.