ಗಂಗಾವತಿ: ಕಳೆದ ಐದು ದಶಕದಿಂದ ಸತತವಾಗಿ ಸ್ಥಳೀಯ ಪಂಚಾಯಿತಿಯ ಚುನಾವಣೆಗಳಲ್ಲಿ ಸ್ಪರ್ಧಿಸಿ, ಗೆಲುವು ಸಾಧಿಸುವ ಮೂಲಕ ತಾಲೂಕಿನ ಶ್ರೀರಾಮನಗರದ ಸದಸ್ಯರೊಬ್ಬರು ಕಲ್ಯಾಣ ಕರ್ನಾಟಕದ ಭಾಗದಲ್ಲಿ ಸಾಧನೆ ಮಾಡಿದ್ದಾರೆ.
ತಾಲೂಕಿನ ಶ್ರೀರಾಮನಗರದ 6ನೇ ವಾರ್ಡ್ನ ಸದಸ್ಯ ರೆಡ್ಡಿ ವೀರರಾಜು ಕಳೆದ ಐದು ದಶಕದಿಂದ ನಿರಂತರವಾಗಿ ಸ್ಥಳೀಯ ಪಂಚಾಯಿತಿಯಲ್ಲಿ ಚುನಾವಣೆಗೆ ಸ್ಫರ್ಧಿಸುತ್ತಿದ್ದಾರೆ. ಇದೀಗ ಅವರ ಹತ್ತನೇ ಚುನಾವಣೆಯಾಗಿದೆ.
ಈ ಮೊದಲು ತಾಲೂಕಿನ ಢಣಾಪುರ ಗ್ರಾಮ ಪಂಚಾಯಿತಿಯಲ್ಲಿ ಲೀನವಾಗಿದ್ದ ಶ್ರೀರಾಮನಗರ ಬಳಿಕ, ಮಂಡಲ ಪಂಚಾಯಿತಿಯಾಗಿ ಸ್ವತಂತ್ರವಾಯಿತು. ಇದೀಗ ಕಳೆದ ಎರೆಡು ದಶಕದಿಂದ ಗ್ರಾಮ ಪಂಚಾಯಿತಿಯಾಗಿದ್ದು, 1972ರಿಂದಲೂ ರೆಡ್ಡಿ ವೀರರಾಜು ಸತತವಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.