ETV Bharat / state

ಪಿಎಫ್​​ಐ ದೇಶದ್ರೋಹಿ ಸಂಘಟನೆ: ಕೇಂದ್ರ ಸಚಿವ ಜೋಶಿ ಕಿಡಿ

author img

By

Published : Feb 19, 2021, 6:58 PM IST

Joshi
ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹೇಳಿಕೆ

ಪಿಎಫ್​​ಐ ಸಂಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ, ಅದೊಂದು ದೇಶದ್ರೋಹಿ ಸಂಘಟನೆ. ಅಲ್ಲದೆ ಅಂತಹ ಸಂಘಟನೆಗಳು ಆರ್​ಎಸ್​ಎಸ್​ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

ಧಾರವಾಡ: ಪಿಎಫ್​​ಐ ಒಂದು ದೇಶದ್ರೋಹಿ ಸಂಘಟನೆ. ಅದರ ಬಗ್ಗೆ ಹೆಚ್ಚು ಹೇಳಬೇಕಾದ ಅವಶ್ಯಕತೆ ಇಲ್ಲ. ಸುಪ್ರೀಂ ಕೋರ್ಟಿನ ತಿರ್ಮಾನದ ನಂತರವೇ ಟ್ರಸ್ಟ್​​ ರಚಿಸಿ ರಾಮ‌ ಮಂದಿರ ನಿರ್ಮಾಣ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ದೇಶಕ್ಕೆ ಸೇರಿದ ಮಂದಿರ ಅದು. ಶ್ರೀರಾಮ ಎಲ್ಲರಿಗೂ ಸೇರಿದವನು. ಆತನ ಆದರ್ಶ ಜಾತಿ ಮತ ಪಂಥ ಎಲ್ಲವನ್ನೂ ಮೀರಿರುವಂಥದ್ದು. ಆದ್ದರಿಂದಲೇ ರಾಮನಿಗೆ ಮರ್ಯಾದಾ ಪುರುಷೋತ್ತಮ ಎಂಬ ಹೆಸರು ಬಂದಿರುವುದು. ಪಿಎಫ್​​ಐ ಸಂಘಟನೆಗಳು ಹೇಳುವುದೆಲ್ಲಾ ಸತ್ಯವಲ್ಲ ಎಂದು ಕಿಡಿಕಾರಿದರು.

ಬೇರೆ ದೇಶಗಳಲ್ಲಿ ನೂರರಷ್ಟು ಇಸ್ಲಾಮ್​​ ಇದೆ, ಅಲ್ಲಿ ಕೂಡ ಅವರು ಶಾಂತವಾಗಿಲ್ಲ. ಆದರೆ ಭಾರತದಲ್ಲಿ ಮುಸ್ಲಿಂರು ಶಾಂತತೆಯಿಂದ ಬಾಳುತ್ತಿರುವುದಕ್ಕೆ ಕಾರಣ ಭಾರತದ ಮಣ್ಣಿನಲ್ಲಿ ಹಾಗೂ ರಕ್ತದಲ್ಲಿ ಇರುವ ಧರ್ಮ ಐಕ್ಯತೆ ಗುಣ ಎಂದರು.

ಇನ್ನು ಇದೇ ವೇಳೆ ಪಿಎಫ್​​ಐ ಸಂಘಟನೆ ಆರ್​​ಎಸ್​​ಎಸ್ ಬಗ್ಗೆ ಸರ್ಟಿಫಿಕೇಟ್ ಕೊಡುವ ಅಗತ್ಯತೆ ಇಲ್ಲ ಎಂದು ಹರಿಹಾಯ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.