ETV Bharat / state

'ಒಮ್ಮೆ ಕಿಡಿ ಹೊತ್ತಿದರೆ ಶಾಂತಿ ಬೇಗ ಸಿಗುವುದಿಲ್ಲ, ಮಣಿಪುರವೇ ಇದಕ್ಕೆ ಸಾಕ್ಷಿ': ಪೇಜಾವರ ಸ್ವಾಮೀಜಿ

author img

By ETV Bharat Karnataka Team

Published : Oct 6, 2023, 12:02 PM IST

Updated : Oct 6, 2023, 1:15 PM IST

ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಶಿವಮೊಗ್ಗದ ರಾಗಿಗುಡ್ಡೆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಧಾರವಾಡ: 'ಧರ್ಮ ಎಂದರೆ ಸಮಾಜವನ್ನು ನಿರಂತರ ಮುನ್ನಡೆಸುವ ಬದುಕಿನ ಸೂತ್ರ. ಎಲ್ಲರೂ ಸುಖ ಸಂತೋಷದಿಂದ ಇರಬೇಕು. ಅದಕ್ಕಾಗಿ ಅಳವಡಿಸಿಕೊಳ್ಳವೇಕಾದ ನೀತಿ ನಿಯಮವೇ ಸನಾತನ ಧರ್ಮ' ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಖಾಸಗಿ ಸಂಸ್ಥೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಸಂತೋಷದ ಪ್ರಯತ್ನ ಮತ್ತೊಬ್ಬರ ದುಃಖಕ್ಕೆ ಕಾರಣವಾಗಬಾರದು. ನನ್ನ ಪ್ರಯತ್ನದಿಂದ ಅಕ್ಕಪಕ್ಕದವರಿಗೆ ದುಃಖ ಆಗಬಾರದು. ನನ್ನ ಪ್ರಯತ್ನದಿಂದ ನನ್ನ ಜೊತೆಗೆ ಅಕ್ಕಪಕ್ಕದವರಿಗೂ ಸುಖ ಸಿಗುವಂತಾಗಬೇಕು ಎಂದರು.

ಶಿವಮೊಗ್ಗದ ರಾಗಿಗುಡ್ಡದಲ್ಲಿ ಗಲಭೆ ವಿಚಾರಕ್ಕೆ ಮಾತನಾಡಿದ ಅವರು, ಮಳೆ ಬಂದಾಗ ಇಡೀ ಊರಿಗೆ ಬರುತ್ತದೆ. ಹೀಗಾಗಿ ಮತ್ತೊಬ್ಬರಿಗೆ ದುಃಖ ಆಗದಂತೆ ಎಲ್ಲರಿಗೂ ಸುಖ ಸಿಗುವಂತೆ ನಮ್ಮ ಪ್ರಯತ್ನಗಳು ಇರಬೇಕು. ಆಗ ಮಾತ್ರ ಎಲ್ಲರೂ ನೆಮ್ಮದಿಯಿಂದ ಬದುಕಲು ಸಾಧ್ಯ. ಇದುವೆ ಸನಾತನ ಧರ್ಮವಾಗಿದೆ. ಇದನ್ನು ವಿರೋಧಿಸುವ ಮಟ್ಟಕ್ಕೆ ಕೈ ಹಾಕಬಾರದು. ಒಮ್ಮೆ ಕಿಡಿ ಹೊತ್ತಿದರೆ ಶಾಂತಿ ಬೇಗ ಸಿಗುವುದಿಲ್ಲ. ಮಣಿಪುರವೇ ಇದಕ್ಕೆ ಉದಾಹರಣೆಯಾಗಿದೆ. ರಾಜಕಾರಣಿಗಳು ಒಂದು ಪಕ್ಷಕ್ಕೆ ಸಿಮೀತವಲ್ಲ ಸಮಾಜದ ಎಲ್ಲರ ಸುಖ ಶಾಂತಿಗೆ ಬೇಕಾದ ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಮುಂದುವರೆದು, ಇಂತಹ ಘಟನೆಗಳನ್ನು ಸಣ್ಣ ವಿಚಾರ ಅಂತಾ ಭಾವಿಸಬಾರದು. ಇಂತಹ ಗಲಭೆಗಳನ್ನು ಮೂಲದಲ್ಲಿಯೇ ಹತ್ತಿಕ್ಕಬೇಕು. ಇದನ್ನೆಲ್ಲ ಹತ್ತಿಕ್ಕುವ ಕೆಲಸ ಸರ್ಕಾರದಿಂದ ಆಗಬೇಕು ಎಂದು ಒತ್ತಾಯಿಸಿದರು. ಅಭಿಯಾನ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸ್ವತಂತ್ರ ಭಾರತದಲ್ಲಿ ಅವರವರ ಹಿತದ ಕಾರ್ಯ ಮಾಡಲು ಅವಕಾಶವಿದೆ. ಎಲ್ಲರಿಗೂ ಅವಕಾಶವಿದೆ. ಸಂವಿಧಾನದಡಿಯಲ್ಲಿ ಏನೆಲ್ಲ ಕಾರ್ಯ ಮಾಡುತ್ತಾರೋ ಮಾಡಲಿ ಎಂದರು.

ರಾಮಲಿಂಗಾರೆಡ್ಡಿ ಹಿಂದೂಗಳ ಬಳಿ ಕ್ಷಮೆ ಕೇಳಲಿ: ಮಾಜಿ ಸಚಿವ ಕೆಎಸ್​ ಈಶ್ವರಪ್ಪ ರಾಗಿಗುಡ್ಡ ವಿಚಾರವಾಗಿ ಸಾರಿಗೆ ಸಚಿವರ ವಿರುದ್ಧ ಕಿಡಿಕಾರಿದ್ದಾರೆ. ರಾಗಿಗುಡ್ಡ ವಿಚಾರದಲ್ಲಿ ಸಚಿವರು ವಾಸ್ತವ ಅರಿತು ಮಾತನಾಡಲಿ. ರಾಗಿಗುಡ್ಡದಲ್ಲಿ ಪೂರ್ವ ಯೋಜಿತ ಗಲಾಟೆ ಮಾಡಿದ್ದಾರೆ. ಗಲಾಟೆ ಕುರಿತು ರಾಮಲಿಂಗರೆಡ್ಡಿ ಅವರು ವಾಸ್ತವ ತಿಳಿಯದೇ ಸುಳ್ಳು ಹೇಳಿಕೆ ನೀಡಬಾರದು. ಸಚಿವರು ತಪ್ಪಾಗಿದೆ ಎಂದು ಹಿಂದೂಗಳ ಬಳಿ ಕ್ಷಮೆ ಕೇಳಲಿ ಎಂದಿದ್ದಾರೆ.

ರಾಗಿಗುಡ್ಡ ಕಲ್ಲು ತೂರಾಟ ವಿಚಾರ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಇತ್ತ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದು, ಖುದ್ದು ಕಟೀಲ್​ ನೇತೃತ್ವದಲ್ಲಿ ತಾವಾಗಿಯೇ ರಾಗಿಗುಡ್ಡಕ್ಕೆ ಸತ್ಯ ಶೋಧನೆಗೆ ಇಳಿದಿದ್ದಾರೆ. ಜಿಲ್ಲಾ ಎಸ್​ಪಿ ರಾಗಿಗುಡ್ಡ ಸಹಜ ಸ್ಥಿತಿಯಲ್ಲಿದೆ, ಸುಳ್ಳು ಸುದ್ದಿ ಹರಡಲಾಗುತ್ತಿದೆ. ಇಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ: ರಾಗಿಗುಡ್ಡಕ್ಕೆ ಭೇಟಿ ನೀಡಿದ ಕಟೀಲ್​ ನೇತೃತ್ವದ ಸತ್ಯ ಶೋಧನಾ ಸಮಿತಿ

Last Updated :Oct 6, 2023, 1:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.