ETV Bharat / state

ವಿನಯ್​ ಕುಲಕರ್ಣಿ ಭೇಟಿ ಮಾಡಲು ಹೊರಟಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು

author img

By

Published : Sep 27, 2021, 6:55 AM IST

ವಿನಯ್​ ಕುಲಕರ್ಣಿ
ವಿನಯ್​ ಕುಲಕರ್ಣಿ

ವಿನಯ್​ ಕುಲಕರ್ಣಿ ಭೇಟಿ ಮಾಡಲು ಬೆಂಗಳೂರಿಗೆ ಹೊರಟಿದ್ದ ಬೆಂಬಲಿಗನೊಬ್ಬ ತುಮಕೂರ ಬಳಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.

ಧಾರವಾಡ : ಮಾಜಿ‌ ಸಚಿವ ವಿನಯ್​ ಕುಲಕರ್ಣಿ ಭೇಟಿ ಮಾಡಲು ಬೆಂಗಳೂರಿಗೆ ಹೊರಟಿದ್ದ ವ್ಯಕ್ತಿಯೊಬ್ಬ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.

ಧಾರವಾಡದ ಮರೇವಾಡ ಗ್ರಾಮದ ಪರಮೇಶ್ವರ ಗಾಣಿಗೇರ ಮೃತ ವ್ಯಕ್ತಿ. ಇವರು ಬೆಂಗಳೂರಿಗೆ ವಿನಯ್​ ಕುಲಕರ್ಣಿ ನೋಡಲು ಹೊರಟಾಗ ತುಮಕೂರ ಬಳಿ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ.

ಬೆಂಬಲಿಗನ ಸಾವಿನ ಸುದ್ದಿ ತಿಳಿದು ತುಮಕೂರಿಗೆ ಆಗಮಿಸಿದ ವಿನಯ್​ ಕುಲಕರ್ಣಿ

ಪರಮೇಶ್ವರ ಅವರು ವಿನಯ್​ ಕಟ್ಟಾ ಬೆಂಬಲಿಗರಾಗಿದ್ದರು.‌ ನ್ಯಾಯಾಲಯ ವಿನಯ್​ ಕುಲಕರ್ಣಿಗೆ ಧಾರವಾಡ ಜಿಲ್ಲೆಗೆ ಬರುವುದಕ್ಕೆ ಅವಕಾಶ ನೀಡದ ಹಿನ್ನೆಲೆ, ವಿನಯ್​ ಭೇಟಿಗೆ ಬೆಂಗಳೂರಿಗೆ ಹೊರಟ್ಟಿದ್ದರು ಎನ್ನಲಾಗಿದೆ.

ಇನ್ನು ಬೆಂಬಲಿಗನ ಸಾವಿನ ಸುದ್ದಿ ತಿಳಿದು ತುಮಕೂರಿಗೆ ಆಗಮಿಸಿದ ವಿನಯ್​ ಕುಲಕರ್ಣಿ, ಮೃತ ಶರೀರವನ್ನು ಧಾರವಾಡಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.