ETV Bharat / state

ಶಾಲೆಗಳಲ್ಲಿ ಮಕ್ಕಳಿಗೆ ಧ್ಯಾನ ಮಾಡಿಸುವುದು ಒಳ್ಳೆಯದು: ಗಂಗಾಧರೇಂದ್ರ ಸರಸ್ವತಿ ಶ್ರೀ

author img

By

Published : Nov 29, 2022, 7:41 PM IST

ದಾವಣಗೆರೆ ತಾಲೂಕಿನ ಕಡ್ಲೆಬಾಳು ಗ್ರಾಮದಲ್ಲಿ ಮಾತನಾಡಿದ ಸೋಂದಾ ಸ್ವರ್ಣವಲ್ಲಿ ಶಿರಸಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರು ಸರ್ಕಾರಿ ಶಾಲೆಗಳಲ್ಲಿ ಧ್ಯಾನ ಅಳವಡಿಕೆಯ ಬಗ್ಗೆ ಕೇಳಿ ಬರುತ್ತಿರುವ ಅಪಸ್ವರದ ಬಗ್ಗೆ ನನಗೆ ಗೊತ್ತಿಲ್ಲ,‌ ಆದರೆ ಶಾಲೆಗಳಲ್ಲಿ ಮಕ್ಕಳಿಗೆ ಧ್ಯಾನ ಮಾಡಿಸುವುದು ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
Shri Gangadharendra Saraswati Swamiji
ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ

ದಾವಣಗೆರೆ: ಸರ್ಕಾರಿ ಶಾಲೆಗಳಲ್ಲಿ ಧ್ಯಾನ ಅಳವಡಿಕೆಯ ಬಗ್ಗೆ ಕೇಳಿ ಬರುತ್ತಿರುವ ಅಪಸ್ವರದ ಬಗ್ಗೆ ನನಗೆ ಗೊತ್ತಿಲ್ಲ,‌ ಆದರೆ ಶಾಲೆಗಳಲ್ಲಿ ಮಕ್ಕಳಿಗೆ ಧ್ಯಾನ ಮಾಡಿಸುವುದು ಒಳ್ಳೆಯದು ಎಂದು ಸೋಂದಾ ಸ್ವರ್ಣವಲ್ಲಿ ಶಿರಸಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರು ಅಭಿಪ್ರಾಯ ವ್ಯಕ್ತಪಡಿಸಿದರು.

ದಾವಣಗೆರೆ ತಾಲೂಕಿನ ಕಡ್ಲೆಬಾಳು ಗ್ರಾಮದಲ್ಲಿ ಮಾತನಾಡಿದ ಅವರು ಧ್ಯಾನದ ಬಗ್ಗೆ ವಿಶ್ವಮಟ್ಟದಲ್ಲಿ ಸಂಶೋಧನೆಗಳಾಗಿವೆ. ಹಾಗಾಗಿ ಶಾಲೆಗಳಲ್ಲಿ ಧ್ಯಾನ ಮಾಡುವುದು ಯೋಗ್ಯ ಎಂದರು. ಶಾಲೆಗಳಲ್ಲಿ ವಿವಿಧ ಧರ್ಮದ ವಿದ್ಯಾರ್ಥಿಗಳಿದ್ದರೆ ಅವರು ಕೂಡ ಧಾನ್ಯದಲ್ಲಿ ಭಾಗವಹಿಸಬಹದು, ಆದರೆ ಧ್ಯಾನ ಮಾಡಿ ಎಂದು ಅನ್ಯಧರ್ಮೀಯರಿಗೆ ಒತ್ತಡ ಹೇರುವುದಿಲ್ಲ ಎಂದರು.

ಇನ್ನು ಸೂರ್ಯ ನಮಸ್ಕಾರ ಮಾಡುವುದ್ದರಿಂದ ಪ್ರತಿಯೊಬ್ಬರಿಗೂ ಒಳ್ಳೆದಾಗುತ್ತದೆ. ಸೂರ್ಯ ನಮಸ್ಕಾರ ಶರೀರಕ್ಕೆ ವ್ಯಾಯಾಮ, ಶರೀರಕ್ಕೆ ಹಿತ, ಮಾನಸಿಕ ಸಮಸ್ಯೆಗಳು ಪ್ರತಿಯೊಬ್ಬರಿಗಿವೆ ಅಲ್ವಾ ಎಂದು ಪ್ರಶ್ನಿಸಿದರು. ಇನ್ನು ಶಿಕ್ಷಣದಲ್ಲಿ ಭಗವದ್ಗೀತೆ ಅಳವಡಿಸುವುದರ ಬಗ್ಗೆ ಚಿಂತನೆ ನಡೆಸಿದ್ದೇವೆ, ಇದರ ಬಗ್ಗೆ ಶಿಕ್ಷಣ ಸಚಿವರಾದ ನಾಗೇಶ್ ಅವರಿಗೂ ಕಾರ್ಯಕ್ರಮಕ್ಕೆ ಕರೆದಿದ್ದೇವೆ ಅವರು ಡಿ.4ಕ್ಕೆ ಬರಲಿದ್ದು ಆಗಾಗ ಅವರೊಂದಿಗೆ ಮಾತನಾಡಲಿದ್ದೇವೆ ಎಂದರು.

ದೇವಸ್ಥಾನಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದು ಒಳ್ಳೆಯದಲ್ಲ: ಇನ್ನು ದೇವಸ್ಥಾನಗಳಲ್ಲಿ ಸರ್ಕಾರದ ಹಸ್ತಕ್ಷೇಪದ ಬಗ್ಗೆ ಪ್ರತಿಕ್ರಿಯಿಸಿದ ಅವರು ಧಾರ್ಮಿಕ ದತ್ತಿ ಇಲಾಖೆಯಡಿ ಸರ್ಕಾರ ದೇವಾಲಯಗಳಲ್ಲಿ‌ ಹಸ್ತಕ್ಷೇಪ ಮಾಡುವ ನಿರ್ಧಾರದ ವಿರುದ್ಧ 40‌ ವರ್ಷಗಳಿಂದ‌ ಹೋರಾಟ ನಡೆಯುತ್ತಿದೆ. ನಾವು 30 ವರ್ಷಗಳಿಂದ‌ ಈ ಹೋರಾಟದಲ್ಲಿದ್ದೇವೆ. ದೇವಸ್ಥಾನಗಳಿಗೆ‌ ಸ್ವಾಯತ್ತತೆ ಬರಬೇಕೆಂಬುದು ನಮ್ಮ ಹೋರಾಟದ ಮುಖ್ಯವಾದ ಆಶಯ ಎಂದರು.

ದೇವಾಲಯದ ಆಡಳಿತ ನೋಡಿಕೊಳ್ಳುವುದು ಮತ್ತು ಪೂಜೆ‌ ಮಾಡುವ ಹಕ್ಕು ಸ್ಥಳೀಯರಿಗೆ ಇಲ್ಲ, ಅಲ್ಲಿನ ಜನರಿಗೆ ಕೊಡಬೇಕು. ದೇವಸ್ಥಾನ ನೋಡಿಕೊಳ್ಳಲು ಭಕ್ತರಿಗೆ ಕೊಡಲು ತಯಾರಿದ್ದೇವೆ ಎಂದು ಮುಖ್ಯಮಂತ್ರಿ ಅವರು ಹೇಳಿದ್ದಾರೆ ವಿನಃ ಇನ್ನು ಅದು ಆಚರಣೆಗೆ ಬಂದಿಲ್ಲ, ಬದಲಾಗಿ ಅನೇಕ ಕಡೆ ದೇವಾಲಯಗಳಿಗೆ ಅಧಿಕಾರಿಗಳು ನೇಮಕವಾಗುತ್ತಿದ್ದಾರೆ ಎಂದು ದೇವಾಲಯದ ಹಕ್ಕುಪತ್ರ, ಆಸ್ತಿ ವಿವರ ಕೇಳಿ ಅನಗತ್ಯವಾಗಿ ಹಸ್ತಕ್ಷೇಪ ಮಾಡ್ತಿದ್ದಾರೆ ಎಂದು ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.

ಇನ್ನು ದೇವಾಲಯಗಳು ಸರ್ಕಾರೀಕರಣ ಆಗಬಾರದು, ಭಕ್ತರಿಂದ ಕೂಡಿರಬೇಕು ಶತಮಾನಗಳಿಂದ ಕೆಲ ದೇವಾಲಯಗಳು ಸರ್ಕಾರದ ಅಧೀನದಲ್ಲಿವೆ ಅದಕ್ಕೆ‌ ನಮ್ಮ ಆಕ್ಷೇಪ ಇಲ್ಲ, ಇನ್ನು ಸ್ವಾತಂತ್ರ್ಯವಾಗಿರುವ ಅನೇಕ ದೇವಸ್ಥಾನಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು, ಸ್ವಾತಂತ್ರ್ಯವಾಗಿಯೇ ಇರಲು ಕಾನೂನು ತರಬೇಕು ಎಂದರು.

ಇದನ್ನೂ ಓದಿ:ದಾವಣಗೆರೆ: ಸೇತುವೆಗೆ ಡಿಕ್ಕಿ ಹೊಡೆದು ಹಳ್ಳಕ್ಕೆ ಬಿದ್ದ ಕಾರು; ಎಎಸ್‌ಐ ಪುತ್ರ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.