ETV Bharat / state

'ಕುಲದಲ್ಲಿ ಕೀಳ್ಯಾವುದೋ' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ತಹಶೀಲ್ದಾರ್​ .. ಕಾರಣ?

author img

By

Published : Sep 13, 2021, 10:31 AM IST

ತಹಶೀಲ್ದಾರ್ ಗಿರೀಶ್
ತಹಶೀಲ್ದಾರ್ ಗಿರೀಶ್

ಅಧಿಕಾರಿಗಳೆಂದರೆ ಕೆಲಸಕ್ಕೆ ಮಾತ್ರ ಸೀಮಿತ. ಸಾಮಾನ್ಯವಾಗಿ ಅಧಿಕಾರಿಗಳಿಗೆ ಅವರ ಕೆಲಸ ಬಿಟ್ಟರೆ, ಬೇರ್ಯಾವ ಸಮಾರಂಭಗಳಲ್ಲೂ ಭಾಗಿಯಾಗುವುದು ತೀರಾ ಕಡಿಮೆ. ಆದರೆ, ಇಲ್ಲೊಬ್ಬ ಅಧಿಕಾರಿ ಕೊಂಚ ಡಿಫ್ರೆಂಟ್​​.

ದಾವಣಗೆರೆ: ದಾವಣಗೆರೆಯ ತಹಶೀಲ್ದಾರ್ ಗಿರೀಶ್​,​​​ ತಾವು ಅಧಿಕಾರಿ ಎಂಬ ಅಹಂ ಬಿಟ್ಟು ನಿರಾಶ್ರಿತರೊಂದಿಗೆ ಕುಣಿದು ಕುಪ್ಪಳಿಸಿದ್ದಾರೆ. ಕುಲದಲ್ಲಿ ಕೀಳ್ಯಾವುದೋ, ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೋ, ಹುಟ್ಟಿದರೆ ಕನ್ನಡ ನಾಡಲ್ಲಿ​ ಹುಟ್ಟಬೇಕು ಎಂಬ ಹಾಡುಗಳಿಗೆ ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ.

ಕುಲದಲ್ಲಿ ಕೀಳ್ಯಾವುದೋ.. ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ತಹಶೀಲ್ದಾರ್​ ..

ತಾಲೂಕಿನ ತುರ್ಚಘಟ್ಟ ಗ್ರಾಮದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಕೇಂದ್ರದಲ್ಲಿ ಕಳೆದ ದಿನ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಊರು, ಮನೆ, ಕುಟುಂಬ ಬಿಟ್ಟು ಬಂದಿದ್ದ ನಿರಾಶ್ರಿತರು ಹಬ್ಬ ಆಚರಿಸಿರಲಿಲ್ಲ. ಈ ಹಿನ್ನೆಲೆ ತಹಶೀಲ್ದಾರ್​ ಹಾಗೂ ನಿರಾಶ್ರಿತರ ಕೇಂದ್ರದ ಪ್ರಭಾರ ಅಧೀಕ್ಷಕರಾದ ನಳಿನಿ ಗಣೇಶನನ್ನು ಪ್ರತಿಷ್ಠಾಪಿಸಿ ಗಣೇಶೋತ್ಸವ ಮಾಡಿ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ನಿರಾಶ್ರಿತರಿಗೆ ರಂಜಿಸಿದರು.

ಇದನ್ನೂ ಓದಿ: ನಡುರಸ್ತೆಯಲ್ಲಿ ಮಹಿಳೆ ಕೈಹಿಡಿದು ಎಳೆದಾಡಿದ ಪ್ರಕರಣ: ಜೆಡಿಎಸ್ ಮುಖಂಡನ ಬಂಧನ

ಮೂರು ದಿನಗಳ ಬಳಿಕ ಗಣೇಶನ ನಿಮಜ್ಜನ ಮಾಡಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.