ETV Bharat / state

ಸಿಎಂ ಬೊಮ್ಮಾಯಿ ಆಡಳಿತದ ಕೀ ಮೋದಿ ಶಾ ಬಳಿ ಇದೆ: ಮುಖ್ಯಮಂತ್ರಿ ಚಂದ್ರು ಆರೋಪ

author img

By

Published : Mar 4, 2023, 6:02 PM IST

AAP leader mukhyamantri Chandru spoke.
ಆಪ್ ಪಕ್ಷದ ಮುಖಂಡ ಮುಖ್ಯಮಂತ್ರಿ ಚಂದ್ರು ಮಾತನಾಡಿದರು.

ದಾವಣಗೆರೆ ಹೈಸ್ಕೂಲ್ ಮೈದಾನದಲ್ಲಿ ಆಪ್ ಪಕ್ಷದ ಬಹಿರಂಗ ಸಮಾವೇಶ - ಬಿಜೆಪಿಗೆ ರಾಮಮಂದಿರ ಬೇಕಾಗಿದೆ ಆದರೆ ರಾಮರಾಜ್ಯ ಬೇಕಾಗಿಲ್ಲ- ಮುಖ್ಯಮಂತ್ರಿ ಚಂದ್ರು ಆರೋಪ, ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಮನೆಯಲ್ಲಿ ಕಂತೆ ಕಂತೆ ಹಣ ಸಿಕ್ಕಿದೆ. ಅದು ನಾವೆಲ್ಲರೂ ಕಟ್ಟಿದ ಟ್ಯಾಕ್ಸ್ ಹಣ ಆಗಿದೆ‌ - ಪಂಜಾಬ್ ಸಿಎಂ ಭಗವಂತ್ ಮಾನ್ ಅಪಾದನೆ.

ದಾವಣಗೆರೆ: ಬಸವರಾಜ ಬೊಮ್ಮಾಯಿ ಅವರು ಬುದ್ಧಿವಂತ ಸಿಎಂ ಆದರೆ ಅವರ ಆಡಳಿತದ ಕೀ ಮೋದಿ ಅಮಿತ್ ಶಾ, ಬಿಎಲ್ ಸಂತೋಷ್, ಆರ್ ಎಸ್ಎಸ್ ಹಾಗೂ ಬಿಎಸ್ ಯಡಿಯೂರಪ್ಪ ಅವರ ಬಳಿ ಇದೆ. ಹೀಗಾಗಿ ಅವರು ಹೇಳಿದಂತೆ ಬೊಮ್ಮಾಯಿ ಕೇಳ್ತಾರೆ ಎಂದು ಆಪ್ ಪಕ್ಷದ ಮುಖಂಡ ಮುಖ್ಯಮಂತ್ರಿ ಚಂದ್ರು ವಾಗ್ದಾಳಿ ನಡೆಸಿದರು.

ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ನಡೆದ ಆಪ್ ಪಕ್ಷದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಶಾಸಕ ಯತ್ನಾಳ್ ಅವರು 2500 ಕೋಟಿ ಇದ್ರೆ ಬಿಜೆಪಿಯಲ್ಲಿ ಸಿಎಂ ಆಗ್ಬಹುದು ಎಂದು ಹೇಳಿದ್ದರು. ಅವರ ಪಕ್ಷದಲ್ಲಿ ಈಗಾಗಲೇ ಏಳು ಜನ ಹಣ ಇಟ್ಕೊಂಡು ಸಿಎಂ ಆಗಲು ಕಾಯ್ತಿದ್ದಾರೆ. ಅಶ್ವತ್ಧ್ ನಾರಾಯಣ್​, ನಿರಾಣಿ, ಆಶೋಕ, ಈಶ್ವರಪ್ಪ ಕಾಯ್ತಿದ್ದವರು ಎಂದು ಚಂದ್ರು ಆರೋಪಿಸಿದರು. ಇನ್ನು ಜೆಡಿಎಸ್ ಉಸುರವಳ್ಳಿ ಪಕ್ಷ, ಈ ಜೆಡಿಎಸ್ ಪಕ್ಷ ಒಮ್ಮೆ ಕಾಂಗ್ರೆಸ್ ಕಡೆ, ಒಮ್ಮೆ ಬಿಜೆಪಿ ಕಡೆ ಅಧಿಕಾರಕ್ಕಾಗಿ ವಾಲುತ್ತೆ, ಇಡೀ ಕುಟುಂಬ ಅಧಿಕಾರ ನಡೆಸುತ್ತಿದ್ದು, ಇಲ್ಲಿ ಸೂಟ್​ಕೇಸ್​​ ರಾಜಕೀಯ ಕೂಡ ನಡೆಯುತ್ತೇ ಎಂದು ಜೆಡಿಎಸ್ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಭವ್ಯಬಂಗಲ್ಲೆಯಲ್ಲಿ ರಾಮ, ಭಂಟ ಹನುಮಂತ ಬೀದಿಯಲ್ಲಿ: ಬಿಜೆಪಿಗೆ ರಾಮಮಂದಿರ ಬೇಕಾಗಿದೆ ಆದರೆ ರಾಮರಾಜ್ಯ ಬೇಕಾಗಿಲ್ಲ. ಆಪ್ ಪಕ್ಷಕ್ಕೆ ರಾಮ ಮಂದಿರ ಬೇಡ ರಾಮರಾಜ್ಯ ಬೇಕಾಗಿದೆ. ಬಿಜೆಪಿಯವರಿಗೆ ರಾಮ ಮಂದಿರ ನಿರ್ಮಾಣಕ್ಕಾಗಿ ಸಾವಿರಾರು ಕೋಟಿ ಖರ್ಚು ಮಾಡಿದರು, ಆದರೆ, ಅಭಿವೃದ್ಧಿ ಗೆ ಖರ್ಚು ಮಾಡಲಿಲ್ಲ ಎಂದರು.

ರೈತರ ಸಮಸ್ಯೆಗೆ ಆಪ್ ಸ್ಪಂದನೆ: ಪಂಜಾಬ್ ನಂತೆ ಕರ್ನಾಟಕದಲ್ಲೂ ರೈತರ ಸಮಸ್ಯೆಗಳಿವೆ, ಅದನ್ನು‌ ನಾವು ಬಗೆಹರಿಸಲಿದ್ದೇವೆ, ಅಲ್ಲಿಯಂತೆ ಕರ್ನಾಟಕದಲ್ಲೂ ಕಬ್ಬಿನ ಹೊಲಗಳಿವೆ. ಪಂಜಾಬ್​​ ಸಕ್ಕರೆ ಕಾರ್ಖಾನೆಗಳು 300 ಕೋಟಿ ಬಾಕಿಯನ್ನು ಉಳಿಸಿಕೊಂಡಿದ್ದರು. ಅದನ್ನು ರೈತರಿಗೆ ಕೊಡಿಸಿದ್ದೇವೆ ಎಂದು ಪಂಜಾಬ್​ ಸಿಎಂ ಭಗವಂತ್ ಮಾನ್​ ಹೇಳಿದರು. ದೇಶದಲ್ಲಿ ಲಕ್ಷಾಂತರ ಜನ್ರ ನಿರುದ್ಯೋಗಿಗಳ ಕೈ ಖಾಲಿ ಇವೆ. ಆದ್ರೆ ಪಂಜಾಬ್ ನಲ್ಲಿ 70 ಸಾವಿರ ಸರ್ಕಾರಿ ಕೆಲಸ ನೀಡಿದ್ದೇನೆ. ಕೇಂದ್ರದಿಂದ ಯಾವಾಗ ಎಷ್ಟು ಜನರನ್ನು ಕೆಲಸದಿಂದ ಹೊರಗೆ ಕಳಿಸ್ತಾರೆ ಗೊತ್ತಿಲ್ಲ, ಅದ್ರೇ ಪಂಜಾಬ್ ಸರ್ಕಾರ ಸಾಕಷ್ಟು ಜನ್ರ ಕೆಲಸ ಖಾಯಂ ಮಾಡಿದ್ದೇವೆ. ಈಗಾಗಲೇ ಒಪಿಎಸ್ ಸ್ಕೀಮ್ ತೆಗೆಯಲಾಗಿದೆ ಎಂದು ಹೇಳಿದರು.

ಶಾಸಕರ ಮನೆಯಲ್ಲಿ ಸಿಕ್ಕಿರುವ ಹಣ ಟ್ಯಾಕ್ಸ್ ಕಟ್ಟಿದ ಹಣ:ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಮನೆಯಲ್ಲಿ ಕಂತೆ ಕಂತೆ ಹಣ ಸಿಕ್ಕಿದೆ. ಅದು ನಾವು ಕಟ್ಟಿದ ಟ್ಯಾಕ್ಸ್ ಹಣ ಆಗಿದೆ‌. ನಿಮ್ಮಮೇಲೆ ಪ್ರತಿಯೊಂದಕ್ಕೆ ಟ್ಯಾಕ್ಸ್ ಹಾಕಲಾಗುತ್ತದೆ. ನಾವು ಮಲ್ಗಿದ್ರು ತೆರಿಗೆ ಹಾಕಲಾಗುತ್ತೇ, ಅದ್ರೇ ಶಾಸಕನ ಮಗನ ಮನೆಯಲ್ಲಿ ಕೋಟಿ ಕೋಟಿ ಹಣ ಸಿಗುತ್ತೇ, ಇಂತ ಭ್ರಷ್ಟಾಚಾರವನ್ನು ಹೋಗಲಾಡಿಸಿ ಬದಲಾವಣೆ ಮಾಡಲು ಅಪ್ ಪಕ್ಷ ಅವಶ್ಯಕತೆ ಇದೆ ಎಂದು ಭಗವಂತ್​ ಮಾನ್​ ಹೇಳಿದರು.

ಇದನ್ನೂಓದಿ:ಮಾ.10ಕ್ಕೆ ಸಿಸೋಡಿಯಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ದೆಹಲಿ ಕೋರ್ಟ್.. ಮತ್ತೆರಡು ದಿನ ಸಿಬಿಐ ವಶಕ್ಕೆ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.