ETV Bharat / state

ರಾಷ್ಟ್ರದ ಒಳ್ಳೆಯ ಯೋಜನೆಗಳನ್ನು ವಿರೋಧಿಸುವುದೇ ಕಾಂಗ್ರೆಸ್ಸಿಗರ ಮಾನಸಿಕತೆ: ಕಟೀಲ್

author img

By

Published : Jun 25, 2022, 4:56 PM IST

the-mentality-of-congress-is-to-oppose-the-good-schemes-says-nalin-kumar-kateel
ರಾಷ್ಟ್ರದ ಒಳ್ಳೆಯ ಯೋಜನೆಗಳನ್ನು ವಿರೋಧಿಸುವುದೇ ಕಾಂಗ್ರೆಸ್ಸಿಗರ ಮಾನಸಿಕತೆ: ಕಟೀಲ್ ಟೀಕೆ

ಕಾಂಗ್ರೆಸ್​ ಅಧಿಕಾರ ಕೈತಪ್ಪಿದ ಬಳಿಕ ನಿರಂತರವಾಗಿ ಗಲಭೆಗೆ ಪ್ರಚೋದನೆ ನೀಡುತ್ತಿದೆ. ಕಾನೂನು ಕೈಗೆತ್ತಿಕೊಳ್ಳುವ ಎಲ್ಲ ಘಟನೆಗಳಲ್ಲಿ ಸೂತ್ರಧಾರರಂತೆ ವರ್ತಿಸುತ್ತಿದೆ ಎಂದೂ ಕಟೀಲ್ ಆರೋಪಿಸಿದರು.

ಮಂಗಳೂರು: ರಾಷ್ಟ್ರದಲ್ಲಿ ಯಾವುದೆಲ್ಲ ಒಳ್ಳೆಯದಾಗುತ್ತದೋ ಅದನ್ನೆಲ್ಲ, ವಿರೋಧಿಸುವುದೇ ಕಾಂಗ್ರೆಸ್ಸಿಗರ ಮಾನಸಿಕತೆ. ಅದರಲ್ಲಿ 'ಅಗ್ನಿಪಥ್' ಯೋಜನೆ ವಿರೋಧಿಸುವುದು ಕೂಡಾ ಒಂದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್​ ಟೀಕಿಸಿದ್ದಾರೆ.

ನಗರದ ವೈಶ್ಯ ಎಜುಕೇಶನ್ ಸೊಸೈಟಿ ಸಭಾಂಗಣದಲ್ಲಿ ತುರ್ತುಪರಿಸ್ಥಿತಿಯ ಕರಾಳದಿನ 45ನೇ ವರ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯುವಕರು ಸೇನೆಗೆ ಸೇರ್ಪಡೆಯಾಗಬೇಕು. ಎಲ್ಲರಿಗೂ ಸೈನಿಕ ಸಂಸ್ಕಾರ, ಶಿಕ್ಷಣ ದೊರೆಯಬೇಕು. ರಾಷ್ಟ್ರಭಕ್ತಿ ಜಾಗೃತಿಯಾಗಬೇಕು ಎಂಬ ನೆಲೆಯಲ್ಲಿ 17ರಿಂದ 23 ವರ್ಷದ ಯುವಕರಿಗೆ 'ಅಗ್ನಿಪಥ್' ಯೋಜನೆ ಜಾರಿಗೊಳಿಸಲಾಗಿದೆ. ಈ 'ಅಗ್ನಿಪಥ್' ಯೋಜನೆಯಡಿ ಸೇನೆ ಸೇರಲು ನಾವು ಕಾಂಗ್ರೆಸ್​ನವರ ಮಕ್ಕಳನ್ನು ಕೇಳಿಲ್ಲ. ಸೇನೆಗೆ ಸೇರುವ ಮತ್ತು ದುಡಿಯಲು ಬಯಸುವವರಿಗೆ ಶಿಕ್ಷಣದ ಜೊತೆಗೆ ಉದ್ಯೋಗ ಕೊಡುವ ರೀತಿಯಲ್ಲಿ ಈ ಯೋಜನೆಯಿದೆ ಎಂದರು.

ರಾಷ್ಟ್ರದ ಒಳ್ಳೆಯ ಯೋಜನೆಗಳನ್ನು ವಿರೋಧಿಸುವುದೇ ಕಾಂಗ್ರೆಸ್ಸಿಗರ ಮಾನಸಿಕತೆ: ಕಟೀಲ್ ಟೀಕೆ

ಕಾಂಗ್ರೆಸ್​ ಅಧಿಕಾರ ಕೈತಪ್ಪಿದ ಬಳಿಕ ನಿರಂತರವಾಗಿ ಗಲಭೆಗೆ ಪ್ರಚೋದನೆ ನೀಡುತ್ತಿದೆ. ಕಾನೂನು ಕೈಗೆತ್ತಿಕೊಳ್ಳುವ ಎಲ್ಲ ಘಟನೆಗಳಲ್ಲಿ ಸೂತ್ರಧಾರರಂತೆ ವರ್ತಿಸುತ್ತಿದೆ. ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆ, ಶಿವಮೊಗ್ಗ, ಹುಬ್ಬಳ್ಳಿ ಗಲಭೆಗಳ ಹಿಂದೆ ಕಾಂಗ್ರೆಸ್ ಇದೆ ಹಾಗೂ ದ್ವೇಷದ ರಾಜಕಾರಣವನ್ನು ಮಾಡುತ್ತಿದೆ ಎಂದು ಆರೋಪಿಸಿದರು.

ಪಠ್ಯಪುಸ್ತಕ ವಿಚಾರದಲ್ಲಿ ರೋಹಿತ್ ಚಕ್ರತೀರ್ಥ ಏನು ಹೇಳಿದ್ದಾರೆ. ಪಠ್ಯದಲ್ಲಿ ಏನಿದೆ ಎಂಬುದನ್ನು ತಿಳಿಯದೆ ಇವರು ಮೂರ್ಖತನದ ಪರಮಾವಧಿಯಲ್ಲಿ ಮೆರೆಯುತ್ತಿದ್ದಾರೆ. ಪ್ರತಿಪಕ್ಷದವರು ಕೇಳುತ್ತಾರೆಂದು ಎಲ್ಲದಕ್ಕೂ ಕ್ಷಮೆ ಕೇಳಲು ಸಾಧ್ಯವಿಲ್ಲ. ನಾವು ಆಡಳಿತ ನಡೆಸುವವರು, ಹೇಗೆ ನಡೆಸಬೇಕೆಂಬುದು ನಮಗೆ ಗೊತ್ತಿದೆ. ನಿರ್ದಿಷ್ಟ ಸಿದ್ಧಾಂತವನ್ನು ಈ ರಾಷ್ಟ್ರದಲ್ಲಿ ಜಾರಿಗೆ ತಂದಿರುವುದು ಕಾಂಗ್ರೆಸ್. ಸಾಹಿತಿಗಳು ಈ ಬಗ್ಗೆ ಯೋಚನೆ ಮಾಡಬೇಕಿದೆ. ಮೊದಲಿಗೆ ಪುಸ್ತಕದ ಒಳಗೆ ಏನಿದೆ ಎಂಬುದನ್ನು ತಿಳಿದುಕೊಳ್ಳಲಿ ಎಂದು ಕಟೀಲ್​ ಹೇಳಿದರು.

ಇದೇ ವೇಳೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ತಮ್ಮನ್ನು ಪ್ರಶ್ನಿಸಿದರೆಂಬ ಕಾರಣಕ್ಕೆ ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿದ್ದರು‌. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿ, ಸಂವಿಧಾನವನ್ನು ಕತ್ತಲೆಯಲ್ಲಿಟ್ಟು, ದೇಶವನ್ನು ಮತ್ತೊಮ್ಮೆ ಗುಲಾಮಗಿರಿಗೆ ತಳ್ಳಿ ಜನರಿಗೆ ಸರ್ವಾಧಿಕಾರಿ ಧೋರಣೆ ತೋರಿಸಿದ್ದರು. ಬ್ರಿಟಿಷ್ ಕಾಲಘಟ್ಟದಲ್ಲಿ ಆಗಿರುವ ದಬ್ಬಾಳಿಕೆಗಿಂತ ಎರಡು ಪಟ್ಟು ಅಧಿಕ ಕಾಂಗ್ರೆಸ್ ಕಾಲಘಟ್ಟದ ತುರ್ತುಪರಿಸ್ಥಿತಿಯಲ್ಲಿ ದಬ್ಬಾಳಿಕೆ ಆಗಿದೆ ಎಂದರು.

ಇದನ್ನೂ ಓದಿ: ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಪಾತ್ರವಿಲ್ಲ: ಸಚಿವ ಶ್ರೀರಾಮುಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.