ETV Bharat / state

ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಡಿ.10 ರಿಂದ 24ರ ವರೆಗೆ ಚಂಪಾಷಷ್ಠಿ ಮಹೋತ್ಸವ

author img

By ETV Bharat Karnataka Team

Published : Nov 20, 2023, 12:01 PM IST

Champashashti Mahotsava
ಚಂಪಾಷಷ್ಠಿ ಮಹೋತ್ಸವ

ಕರ್ನಾಟಕದ ಶ್ರೀಮಂತ ದೇವಾಲಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಈ ಬಾರಿಯ ಚಂಪಾಷಷ್ಠಿ ಮಹೋತ್ಸವ ಡಿಸೆಂಬರ್​ 10 ರಿಂದ ಆರಂಭವಾಗಲಿದೆ.

ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂರ್ವಶಿಷ್ಟ ಸಂಪ್ರದಾಯ ಪ್ರಕಾರ ಈ ವರ್ಷದ ಚಂಪಾಷಷ್ಠಿ ಮಹೋತ್ಸವವು ಅದ್ಧೂರಿಯಾಗಿ ನಡೆಯಲಿದೆ.

ಇದೇ ಶೋಭಕೃತ್ ನಾಮ ಸಂವತ್ಸರದ ಕಾರ್ತಿಕ ಬಹುಳ ದ್ವಾದಶಿ ಆದಿತ್ಯವಾರ 10-12-2023 ರಿಂದ ಲಾಗ್ಯಾತು ಮಾರ್ಗಶಿರ ಶುದ್ಧ ದ್ವಾದಶಿ ಆದಿತ್ಯವಾರ 24-12-2023ರ ವರೆಗೆ ಈ ಕೆಳಗಿನ ವಿವರದಂತೆ ವಾರ್ಷಿಕ ಜಾತ್ರಾ ಉತ್ಸವಾದಿಗಳು ಜರುಗಲಿವೆ. ಭಗವತ್ಸಂಕಲ್ಪ ಪ್ರಕಾರ ನಡೆಯುವ ಈ ಮಹೋತ್ಸವಗಳಿಗೆ ಭಕ್ತರು ಇಷ್ಟ ಮಿತ್ರರೊಡಗೂಡಿ ಆಗಮಿಸಿ ದೇವರ ಮೂಲ ಮೃತ್ತಿಕಾ ಗಂಧ-ಪ್ರಸಾದವನ್ನು ಸ್ವೀಕರಿಸಿ, ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆ ನೀಡಿದೆ.

Invitation letter for Champashashti Mahotsava
ಚಂಪಾಷಷ್ಠಿ ಮಹೋತ್ಸವದ ಆಮಂತ್ರಣ ಪತ್ರ

ಕಾರ್ಯಗಳ ವಿವರಗಳು ಈ ಕೆಳಗಿನಂತಿವೆ:

10-12-2023ರ ಭಾನುವಾರ: ಕೊಪ್ಪರಿಗೆ ಏರುವುದು, ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ.

11-12-2023ರ ಸೋಮವಾರ: ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ.

12-12-2023ರ ಮಂಗಳವಾರ: ಲಕ್ಷದೀಪೋತ್ಸವ.

13-12-2023 ಕ್ಕೆ ಶೇಷವಾಹನೋತ್ಸವ.

14-12-2023 ರಂದು ಅಶ್ವವಾಹನೋತ್ಸವ.

15-12-2023 ರಂದು ಮಯೂರ ವಾಹನೋತ್ಸವ.

16-12-2023 ರಂದು ರಾತ್ರಿ ಹೂವಿನ ತೇರಿನ ಉತ್ಸವ.

17-12-2023ರ ಆದಿತ್ಯವಾರ ರಾತ್ರಿ ದೇವರ ಪಂಚಮಿ ರಥೋತ್ಸವ, ತೈಲಾಭ್ಯಂಜನ.

18-12-2023 ರಂದು ಪ್ರಾತಃ ಕಾಲ ಪ್ರಸಿದ್ಧ ಚಂಪಾಷಷ್ಠಿ ಮಹಾರಥೋತ್ಸವ.

19-12-2023 ಮಂಗಳವಾರದಂದು ಶ್ರೀ ದೇವರ ಅವಕೃತೋತ್ಸವ, ನೌಕಾವಿಹಾರ.

24-12-2023 ಆದಿತ್ಯವಾರದಂದು ಕೊಪ್ಪರಿಗೆ ಇಳಿಯುವುದು, ರಾತ್ರಿ ನೀರುಬಂಡಿ ಉತ್ಸವ, ದೈವಗಳ ನಡಾವಳಿ ಕಾರ್ಯಗಳು ನಡೆಯಲಿವೆ.

09-12-2023ರ ಶನಿವಾರ “ಮೂಲಮೃತ್ತಿಕಾ" ಪ್ರಸಾದ ವಿತರಣೆ ಮತ್ತು ಕಿರುಷಷ್ಠಿ ಮಹೋತ್ಸವವು 16-01-2024 ರಂದು ಜರುಗಲಿದೆ.

ಇನ್ನು, ದಿನಾಂಕ 10-12-2023 ರಿಂದ 12-12-2023ರ ವರೆಗೆ ಭಕ್ತರು ಸಲ್ಲಿಸುವ ಹಸಿರು ಕಾಣಿಕೆಗಳನ್ನು ಸ್ವೀಕರಿಸಲಾಗುತ್ತದೆ ಎಂದು ದೇವಸ್ಥಾನದಿಂದ ಹೊರಡಿಸಲಾದ ಆಮಂತ್ರಣ ಪತ್ರಿಕೆಯಲ್ಲಿ ಉಲ್ಲೇಖಿಸಲಾಗಿದೆ.

Invitation letter for Champashashti Mahotsava
ಚಂಪಾಷಷ್ಠಿ ಮಹೋತ್ಸವದ ಆಮಂತ್ರಣ ಪತ್ರ

ಸೇವೆಗಳ ವಿವರ:

1. ಮಹಾರಥೋತ್ಸವ-25,000-00
2. ಚಿಕ್ಕ ರಥೋತ್ಸವ-8,000-00
3. ಚಂದ್ರಮಂಡಲ ಉತ್ಸವ-6,000-00
4. ಹೂವಿನ ತೇರಿನ ಉತ್ಸವ-5,000-00
5. ಬಂಡಿ ಉತ್ಸವ-3,000-00
6. ಮಹಾಭಿಷೇಕ-6,000-00
7. ದೀಪಾರಾಧನೆ, ಪಾಲಕಿ ಉತ್ಸವ-2,500-00
8. ಮಹಾಪೂಜೆ, ಪಾಲಕಿ ಉತ್ಸವ-1,500-00
9. ಸಪರಿವಾರ ಸೇವಾ-2,000-00
10. ನಾಗಪ್ರತಿಷ್ಠೆ-400-00
11. ಆಶ್ಲೇಷ ಬಲಿ-400-00
12. ಮಹಾಪೂಜೆ (ಇಡೀ ದಿನದ್ದು)- 400-00
13. ಮಹಾಪೂಜೆ (ಮಧ್ಯಾಹ್ನ)-250-00
14. ಪಂಚಾಮೃತ ಅಭಿಷೇಕ-75-00
15. ರುದ್ರಾಭಿಷೇಕ-75-00
16. ಕ್ಷೀರಾಭಿಷೇಕ-50-00
17. ಶೇಷ ಸೇವೆ-100-00
18. ಹರಿವಾಣ ನೈವೇದ್ಯ-100-00
19. ಕಾರ್ತಿಕ ಪೂಜೆ-50-00
20. ಪಂಚಕಜ್ಜಾಯ-20-00
21. ಲಾಡು ಪ್ರಸಾದ-20-00
22. ತೀರ್ಥ ಬಾಟ್ಲಿ-10-00

ಮನಿಯಾರ್ಡರ್, ಡಿ. ಡಿ., ಚೆಕ್ಕು ಮೂಲಕ ಕಾಣಿಕೆ ರೂ. 50.00 ಅಥವಾ ಅದಕ್ಕಿಂತ ಅಧಿಕ ಹಣ ಕಳುಹಿಸುವ ಭಕ್ತಾದಿಗಳಿಗೆ ಅಂಚೆ ಮೂಲಕ ಪ್ರಸಾದವನ್ನು ಕಳುಹಿಸಲಾಗುವುದು. ಶ್ರೀ ದೇವಳದ ಇ-ಹುಂಡಿ ಸೇವೆಗೆ ಯಾವುದೇ ಯುಪಿಐ ಮೂಲಕ ಮೊತ್ತವನ್ನು ಪಾವತಿ ಮಾಡಬಹುದು ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಜನವರಿ 22ರ ಅಭಿಜಿನ್ ಮುಹೂರ್ತದಲ್ಲಿ ರಾಮದೇವರ ಪ್ರಾಣಪ್ರತಿಷ್ಠೆ: ಪೇಜಾವರ ಶ್ರೀ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.