ETV Bharat / state

ಯಾರೋ ಹುಲಿಯಾ ಎಂದು ಕರೆದರೆ ನಾನು ಹುಲಿ ಆಗಲ್ಲ; ಕಟೀಲ್ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು

author img

By

Published : Nov 12, 2020, 8:12 PM IST

Updated : Nov 12, 2020, 8:21 PM IST

Siddaramaiah Reaction About Nalin Kumar Kateel Statement
ಸಿದ್ದರಾಮಯ್ಯ

ಕಾಂಗ್ರೆಸ್​ ಮುಖಂಡರು ಬಂಡೆ, ಹುಲಿ ಅಂತ ತಾವೇ ಹೆಸರಿಟ್ಟುಕೊಂಡು ಓಡಾಡುತ್ತಿದ್ದಾರೆ. ಚುನಾವಣೆಯ ನಂತರ ಬಂಡೆಯೂ ಇಲ್ಲ, ಹುಲಿಯೂ ಇಲ್ಲ. ಕಾಂಗ್ರೆಸ್ ಪರಿಸ್ಥಿತಿ ದುಸ್ಥಿತಿಗೆ ತಳ್ಳಲ್ಪಟ್ಟಿದೆ ಎಂದು ಟೀಕೆ ಮಾಡಿದ್ದ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಚಿತ್ರದುರ್ಗ: ನಾವೆಲ್ಲರೂ ಮನುಷ್ಯರು, ನೋ ಬಂಡೆ, ನೋ ಹುಲಿ, ನನ್ನನ್ನು ಯಾರೋ ಒಬ್ಬರು ಹುಲಿಯಾ ಎಂದು ಕರೆದಿದ್ದರು. ನಾನು ಹುಲಿ ಅಲ್ಲ, ನಾನು ಮನುಷ್ಯ ಎಂದು ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಹಿರಿಯೂರು ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಮುಖಂಡ‌ ಶಹನವಾಜ್ ಹುಸೇನ್ ಅವರ ಪುತ್ರಿ ವಿವಾಹದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನಾನು ಹುಲಿ ಅಲ್ಲ, ಮನುಷ್ಯ. ಯಾರೋ ಹುಲಿಯಾ ಎಂದು ಕರೆದರೆ ನಾನು ಹುಲಿ ಆಗಲ್ಲ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿ ಮುಂದೆ ನಡೆದರು.

ಮಾಜಿ ಸಿಎಂ ಸಿದ್ದರಾಮಯ್ಯ

ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯರವರೊಂದಿಗೆ ಮಾಜಿ ಸಚಿವ ಜಮೀರ್ ಅಹಮ್ಮದ್ ಕೂಡ ಇದ್ರು.

Last Updated :Nov 12, 2020, 8:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.