ETV Bharat / state

ಚಿಕ್ಕಮಗಳೂರು : ಕಾಡಾನೆ ದಾಳಿ, ಓರ್ವ ಮಹಿಳೆ ಸಾವು

author img

By

Published : Mar 26, 2022, 4:03 PM IST

ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಕಾಡಾನೆ ಇಬ್ಬರ ಮೇಲೆ ದಾಳಿ ಮಾಡಿದ್ದು, ಓರ್ವ ಮಹಿಳೆ ಮೃತ ಹೊಂದಿದ್ದು, ಇನ್ನೊಬ್ಬನನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ..

Elephant attacks in Chikmagalur one Death
ಚಿಕ್ಕಮಗಳೂರು: ಕಾಡಾನೆ ದಾಳಿ, ಓರ್ವ ಮಹಿಳೆ ಸಾವು

ಚಿಕ್ಕಮಗಳೂರು : ತೋಟದಲ್ಲಿ ಕೆಲಸ ಮಾಡುವಾಗ ಕಾಡಾನೆ ದಾಳಿ ಮಾಡಿದೆ. ಘಟನೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಚಿಕ್ಕಮಗಳೂರು ತಾಲೂಕಿನ ಕೆಳಗೂರಿನಲ್ಲಿ ಘಟನೆ ನಡೆದಿದೆ.

ಕಾಡಾನೆ ತುಳಿದು, ಮಹಿಳೆ ಸಾವು

ಕಾಡಾನೆ ದಾಳಿಯಿಂದ ಸರೋಜ ಬಾಯಿ (45) ಎಂಬುವರು ಸಾವನ್ನಪ್ಪಿದ್ದು, ದುಗ್ಗಪ್ಪ ಎಂಬಾತ ಗಂಭೀರ ಗಾಯಗೊಂಡಿದ್ದಾರೆ. ಕಾಳು ಮೆಣಸು ಕೊಯ್ಯಲು ತೆರಳಿದಾಗ ಈ ದುರಂತ ನಡೆದಿದ್ದು, ಆಲ್ದೂರು ಠಾಣಾ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಇದನ್ನೂ ಓದಿ: ಮಧ್ಯರಾತ್ರಿ ಆಟೋ ರಿಕ್ಷಾ ಕದ್ದು ಎಸ್ಕೇಪ್.. ಖತರ್ನಾಕ್ ಖದೀಮನ ಕೈಚಳಕ ಸಿಸಿಟಿವಿಯಲ್ಲಿ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.