ETV Bharat / state

99% ಜನ ಹೈಕೋರ್ಟ್ ಆದೇಶ ಪಾಲಿಸಿದರೆ, 1% ಮಕ್ಕಳಿಂದ ಸಮಸ್ಯೆ: ಸಿ.ಟಿ.ರವಿ

author img

By

Published : Apr 23, 2022, 3:37 PM IST

c-t-ravi
ಸಿ ಟಿ ರವಿ

ಪಿಯು ಪರೀಕ್ಷೆಯಲ್ಲಿ ಹಿಜಬ್​ ಧರಿಸಲು ಅವಕಾಶ ನೀಡಬೇಕೆಂದು ಮತ್ತೆ ಗಲಾಟೆ ಮಾಡಿದ ವಿದ್ಯಾರ್ಥಿನಿಯರ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕಿಡಿಕಾರಿದ್ದಾರೆ.

ಚಿಕ್ಕಮಗಳೂರು: ಪಿಯು ಪರೀಕ್ಷೆಯ ವೇಳೆ ಮಂಗಳೂರಿನಲ್ಲಿ ಒಂದಿಬ್ಬರು ಹುಡುಗಿಯರು ಹಿಜಬ್​ಗಾಗಿ ಪರೀಕ್ಷೆಯನ್ನೇ ಬಹಿಷ್ಕರಿಸಿದ್ದನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟೀಕಿಸಿದ್ದಾರೆ. 99% ಜನ ಹೈಕೋರ್ಟ್ ಆದೇಶವನ್ನು ಪಾಲಿಸಿ ಸಮವಸ್ತ್ರ ಧರಿಸಿಕೊಂಡು ಬಂದು ಪರೀಕ್ಷೆ ಬರೆದಿದ್ದಾರೆ. 1% ಜನರು ಮಾತ್ರ ವಿವಾದವನ್ನು ಜೀವಂತವಾಗಿಡಲು ಮತ್ತೆ ಹಿಜಬ್​ ಗಲಾಟೆ ಎಬ್ಬಿಸಿದ್ದಾರೆ ಎಂದರು.


ಹಿಜಬ್​ ಬೇಕೆಂದು ಕೇಳುವ ಜನರು ನಾಟಕ ಮಾಡುತ್ತಿದ್ದಾರೆ. ಕ್ಯಾಮೆರಾ ಕಂಡರೆ ಸಾಕು ಅವರು ಈ ರೀತಿಯ ನಾಟಕ ಶುರು ಮಾಡುತ್ತಾರೆ. ಸಮಾಜದಲ್ಲಿ ಹೀರೋ, ಹೀರೋಯಿನ್​ ಆಗಲು ಮುಂದಾಗಿದ್ದಾರೆ. ನಮಗೆ ಹಿಜಬ್​ ದೊಡ್ಡದೋ, ಪರೀಕ್ಷೆ ದೊಡ್ಡದೋ. ಹಿಜಬ್​ ಬೇಕೆಂದವರು ಪರೀಕ್ಷೆ ಬರೆದಿಲ್ಲ ಎಂದು ಹೇಳಿದರು.

99% ಜನ ಸರ್ಕಾರದ ನಿಲುವು, ಕೋರ್ಟ್ ತೀರ್ಪು ಒಪ್ಪಿಕೊಂಡಿದ್ದಾರೆ. ಅವರಿಗೆ ಸ್ವಾಗತ. ಇನ್ನು ಕೆಲವರು ಸಮಸ್ಯೆಯನ್ನು ಜೀವಂತವಾಗಿಡಲು ಷಡ್ಯಂತ್ರ ನಡೆಸಿದ್ದಾರೆ. 1983ರಿಂದ ಇಲ್ಲದ ಚಳವಳಿ ಈಗ ಏಕೆ ಶುರುವಾಗುತ್ತೆ?. ಇವತ್ತು ಹಿಜಬ್ ದೊಡ್ಡದು ಅಂತಾರೆ, ನಾಳೆ ಸಂವಿಧಾನವೇ ಬೇಡ ಷರಿಯತ್​ ಬೇಕು ಅಂತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ : ಆಡಿಯೋ ಬಗ್ಗೆ ತನಿಖೆಯಾಗಲಿದೆ ಎಂದ ಸಿಎಂ ಬೊಮ್ಮಾಯಿ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.