ಚಿಕ್ಕಬಳ್ಳಾಪುರ: ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ಗೌರಿಬಿದನೂರು ರಸ್ತೆಯ ಗುಡಿಬಂಡೆ ಗಡಿ ಭಾಗದವರೆಗಿನ 16 ಕೋಟಿ ಡಬಲ್ ರೋಡ್ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗುಡಿಬಂಡೆಗೆ ಸಂಪರ್ಕ ಕಲ್ಪಿಸುವ ಶೇ.80ರಷ್ಟು ರಸ್ತೆಗಳು ಈಗಾಲೇ ಸಿದ್ಧವಾಗಿವೆ. ಉಳಿದ ಶೇ. 20ರಷ್ಟು ರಸ್ತೆಗಳನ್ನು ಮುಂದಿನ 6 ತಿಂಗಳೊಳಗೆ ಸಂಪೂರ್ಣ ಗುಣಮಟ್ಟದ ರಸ್ತೆಗಳು ಆಗಲಿವೆ. ಬಾಗೇಪಲ್ಲಿ ಕ್ಷೇತ್ರಕ್ಕೆ ಗ್ರಾಮ ಸಡಕ್ ಯೋಜನೆಯಿಂದ ಒಟ್ಟು 21 ಕೋಟಿ ಅನುದಾನ ಬಿಡುಗಡೆಯಾಗಿದೆ. ಅದರಲ್ಲಿ 16 ಕೋಟಿ ಗುಡಿಬಂಡೆ ತಾಲೂಕಿಗೆ ಉಳಿದ 5 ಕೋಟಿ ಬಾಗೇಪಲ್ಲಿ ತಾಲೂಕಿನ ರಸ್ತೆಗಳ ಅಭಿವೃದ್ಧಿಗೆ ಬಿಡುಗಡೆ ಮಾಡಿಸಿಲಾಗಿದೆ. ರಾಷ್ಟ್ರೀಯ ಹೆದ್ದಾರಿ 7 ರಿಂದ ಗುಡಿಬಂಡೆಗೆ ಸಂಪರ್ಕ ಕಲ್ಪಿಸುವ ಬೀಚಗಾನಹಳ್ಳಿ ರಸ್ತೆ, ಪೋಲಂಪಲ್ಲಿ ರಸ್ತೆ, ಹಂಪಸಂದ್ರ ರಸ್ತೆ ಸೇರಿದಂತೆ ಇತರೆ ರಸ್ತೆಗಳಿಗೆ ಗುಣಮಟ್ಟದ ಕಾಮಗಾರಿ ನಡೆದಿದೆ ಎಂದರು.
ಈಗ ರಾಜ್ಯ ಹೆದ್ದಾರಿ 94ರ ಹಲಗೂರು ರಸ್ತೆಗೆ ಗ್ರಾಮ ಸಡಕ್ ಯೋಜನೆಯ 16 ಕೋಟಿಯ ಅನುಧಾನದಲ್ಲಿ ಬಾಗೇಪಲ್ಲಿ ತಾಲೂಕಿನ ಗ್ರೀನ್ ಪಾರ್ಕ್ ಹೋಟೆಲ್ನಿಂದ ಹಂಪಸಂದ್ರದ ವರೆಗೆ, ರೂರಲ್ ಗುಡಿಬಂಡೆ ಬಳಿಯ ರಸ್ತೆ, ಪಟ್ಟಣದ ಮಸೀದಿ ಬಳಿ ಇರುವ ಮೋರಿ ಹಾಗೂ ತಿರುಮಲ ನಗರದಿಂದ ಗೌರಿಬಿದನೂರು ರಸ್ತೆಯ ಗುಡಿಬಂಡೆ ಗಡಿ ವರೆಗೆ ರಸ್ತೆ ಕಾಮಗಾರಿಯನ್ನು 3 ತಿಂಗಳೊಳಗೆ ಮುಗಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.