ETV Bharat / state

ಚಿಕ್ಕಬಳ್ಳಾಪುರದಲ್ಲಿ ಮೂರು ವರ್ಷಕ್ಕೆ 2,175 ರಸ್ತೆ ಅಪಘಾತ ಪ್ರಕರಣ ದಾಖಲು: ಎಸ್​ಪಿ

author img

By

Published : Jan 11, 2020, 8:34 PM IST

SP abhinav khare
ಎಸ್ಪಿ ಅಭಿನವ್​ ಖರೆ

ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ 2,175 ರಸ್ತೆ ಅಪಘಾತ ಪ್ರಕರಣಗಳು ದಾಖಲಾಗಿದ್ದು, ಸುಮಾರು 686 ಸವಾರರು ಸಾವನ್ನಪ್ಪಿ, 708 ಜನ‌ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಎಸ್​​ಪಿ ಅಭಿನವ್​ ಖರೆ ಮಾಹಿತಿ ನೀಡಿದರು.

ಚಿಕ್ಕಬಳ್ಳಾಪುರ : ರಾಜಧಾನಿ ಬೆಂಗಳೂರಿಗೆ ಸಮೀಪದಲ್ಲಿದ್ದು, ವೇಗವಾಗಿ ಬೆಳೆಯುತ್ತಿರುವ ಜಿಲ್ಲೆ ಚಿಕ್ಕಬಳ್ಳಾಪುರದಲ್ಲಿ ಕಳೆದ ಮೂರು ವರ್ಷಗಳಿಂದ 2,175 ರಸ್ತೆ ಅಪಘಾತ ಪ್ರಕರಣಗಳು ದಾಖಲಾಗಿದ್,ದು ಸುಮಾರು 686 ಸವಾರರು ಸಾವನ್ನಪ್ಪಿ, 708 ಜನ‌ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಎಸ್​​ಪಿ ಅಭಿನವ್​ ಖರೆ ಮಾಹಿತಿ ನೀಡಿದರು.

ಅಪಘಾತ ವಲಯಗಳಲ್ಲಿ 6 ಹೈವೇ ಪ್ಯಾಟ್ರೋಲ್ ವಾಹನಗಳು ಕೆಲಸವನ್ನು ನಿರ್ವಹಿಸುತ್ತಿದ್ದು, ಈ ವರ್ಷದಲ್ಲಿ 3 ವಾಹನಗಳು ಜಿಲ್ಲೆಗೆ ಬರಲಿದ್ದು. ಇದರಿಂದ ಅಪಘಾತಗಳನ್ನು ತಡೆಗಟ್ಟಲು ಸಹಾಕಾರಿಯಾಗಲಿದೆ ಎಂದು ಅಭಿನವ್​ ಖರೆ ಸ್ಪಷ್ಟಪಡಿಸಿದ್ದಾರೆ. ಇನ್ನು ಪೋಕ್ಸೋ ಕಾಯ್ದೆಯಡಿ ಸಾಕಷ್ಟು ಪ್ರಕರಣಗಳು ದಾಖಲಾಗಿದ್ದು, ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸಾಕಷ್ಟು ಯೋಜನೆಗಳನ್ನು ತರಲಾಗುವುದು ಎಂದು ತಿಳಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೂರು ವರ್ಷಕ್ಕೆ 2175 ರಸ್ತೆ ಅಪಘಾತಗಳು ದಾಖಲು

ಕಳೆದ ಮೂರು ವರ್ಷಗಳಲ್ಲಿ 2,175 ಪ್ರಕರಣಗಳ ಪೈಕಿ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರಗಮಲ್ಲಾ ದರ್ಗಾಗೆ ತೆರಳುತ್ತಿರುವ 11 ಪ್ರಯಾಣಿಕರು ತೆರಳುತ್ತಿದ್ದ ವಾಹನಕ್ಕೆ ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಗೆ ಕಪ್ಪುಚುಕ್ಕಿಯಾಗಿದೆ ಎಂದರು.

Intro:ರಸ್ತೆಯಲ್ಲಿ ಪ್ರಯಾಣಿಸುವಾಗ ಸುರಕ್ಷಿತವಾಗಿರಿ,ಕಡ್ಡಾಯವಾಗಿ ಹೆಲ್ಮೇಟ್ ಧರಿಸಿ, ಸೀಟ್ ಬೆಲ್ಟ್ ಧರಿಸಿ ವಾಜನ ಚಾಲನೆ ಮಾಡಿ ಹೀಗೆ ಎಷ್ಟೇ ಸುರಕ್ಷಿತ ಕ್ರಮಗಳನ್ನು ಹೇಳಿದ್ರು ಯಾರೂ ಸಹಾ ಅನುಸರಿಸುವುದಿಲ್ಲಾ.ಆದರೆ ಎಲ್ಲವನ್ನು ಬಿಟ್ಟು ರಸ್ತೆಗಿಳಿದು ಅಪಘಾತಗಳಿಂದ ಸಾಕಷ್ಟು ಜನ ಸ್ಮಾಶಾಣವನ್ನು ಸೇರಿಕೊಂಡ್ರೆ,ಸಾಕಷ್ಟು ಜನರು ಆಸ್ಪತ್ರೆಗಳಲ್ಲಿ ಹಾಗೂ ಕೈಕಾಲು ಮುರಿದುಕೊಂಡು ನೋವನ್ನು ಅನುಭವಿಸುತ್ತಿದ್ದಾರೆ.ಇಷ್ಟಕ್ಕೂ ಚಿಕ್ಕಬಳ್ಳಾಪುರ ಜಿಲ್ಲೆಯ ವ್ತಾಪ್ತಿಯಲ್ಲಿ ಎಷ್ಟು ಅಪಘಾತಗಳಾಗಿವೆ,ಸಾವಿನ ದವಡೆ ಸೇರಿದವರೆಷ್ಟು ಎಂಬುವುದರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ....


Body:ಹೌದು ರಾಜಧಾನಿಗೆ ಕೂಗಳತೆಯಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆ ಅತಿ ವೇಗವಾಗಿ ಬೆಳೆಯುತ್ತಿರುವ ಜಿಲ್ಲೆಯೂ ಹೌದು ಆದರೆ ಗಂಬೀರವಾಗಿ ಅಪಘಾತಗಳಲ್ಲಿ ಸಾವನ್ನಪ್ಪಿದ ಘಟನೆಗಳು ಸಾಕಷ್ಟಿವೆ. ಕಳೆದ ಮೂರು ವರ್ಷಗಳಿಂದ 2175 ಪ್ರಕರಣಗಳು ದಾಖಲಾಗಿದ್ದು ಸುಮಾರು 686 ಸವಾರರು ಸಾವನ್ನಪ್ಪಿದ್ದು,708 ಜನ‌ ಗಂಭೀರ ಗಾಯಗೊಂಡಿದ್ದಾರೆ.

ಬೈಟ್ :- ಎಸ್ಪಿ ಅಭಿನವ್ ಖರೆ‌

ಇನ್ನೂ ಅಪಘಾತ ವಲಯಗಳಲ್ಲಿ 6 ಹೈವೇಪೆಟ್ರೋಲ್ ವಾಹನಗಳು ಕೆಲಸವನ್ನು ನಿರ್ವಹಿಸುತ್ತಿದ್ದು ಈ ವರ್ಷದಲ್ಲಿ 3 ವಾಹನಗಳು ಜಿಲ್ಲೆಗೆ ಬರಲಿದ್ದು.ಇದರಿಂದ ಅಪಘಾತಗಳನ್ನು ತಡೆಗಟ್ಟಲು ಸಹಾಕಾರಿಯಾಗಲಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.ಇನ್ನೂ ಪೋಕ್ಸೋ ಕಾಯ್ದೆಯಡಿ ಸಾಕಷ್ಟು ಪ್ರಕರಣಗಳು ದಾಖಲಾಗಿದ್ದು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸಾಕಷ್ಟು ಯೋಜನೆಗಳನ್ನು ತರಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.

ಬೈಟ್. ಎಸ್ಪಿ ಅಭಿನವ್ ಖರೆ.

ಇನ್ನೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ 2175 ಪ್ರಕರಣಗಳ ಪೈಕಿ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರಗಮಲ್ಲಾ ದರ್ಗಾಗೆ ತೆರಳುತ್ತಿರುವ 11 ಪ್ರಯಾಣಿಕರು ತೆರಳುತ್ತಿದ್ದ ವಾಹನಕ್ಕೆ ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯಲ್ಲಿ ಕಪ್ಪು ಚುಕ್ಕಿಯಾಗಿ ಉಳಿದುಕೊಂಡಿದೆ.




Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.