ETV Bharat / state

ಕೊರೊನಾ ಪರಿಹಾರ ನಿಧಿಗೆ ಪಿಂಚಣಿ ಹಣ ದೇಣಿಗೆ: ಚಾಮರಾಜನಗರ ಪೇದೆಯ ನಿರ್ಧಾರಕ್ಕೆ ಮೆಚ್ಚುಗೆ

author img

By

Published : Apr 13, 2020, 5:52 PM IST

Corona Relief Fund
ಮೆಚ್ಚುಗೆಗೆ ಪಾತ್ರವಾದ ಚಾಮರಾಜನಗರ ಪೇದೆ

ವೃತ್ತ ನಿರೀಕ್ಷಕ ಕಚೇರಿಯ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಂಜಪ್ಪ ಪಿಂಚಣಿ ಹಣವನ್ನು ಕೊರೊನಾ ಪರಿಹಾರ ನಿಧಿಗೆ ನೀಡಲು ಮುಂದಾಗಿದ್ದಾರೆ.

ಚಾಮರಾಜನಗರ: ಕೋವಿಡ್-19 ಪರಿಹಾರ ನಿಧಿಗೆ ಪೊಲೀಸ್ ಪೇದೆಯೊಬ್ಬರು ಪಿಂಚಣಿ ಹಣ ಕೊಡಲು ಮುಂದಾಗಿದ್ದಾರೆ.

Corona Relief Fund
ಕೊರೊನಾ ಪರಿಹಾರ ನಿಧಿಗೆ ಪಿಂಚಣಿ ಹಣ

ಕೊಳ್ಳೆಗಾಲ‌ದ ವೃತ್ತ ನಿರೀಕ್ಷಕ ಕಚೇರಿಯ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಂಜಪ್ಪ ತಮ್ಮ ಎನ್​ಪಿಎಸ್ ಖಾತೆಯಿಂದ‌ 25 ಸಾವಿರ ರೂ.‌ ಹಣವನ್ನು ಕಡಿತಗೊಳಿಸಬೇಕೆಂದು‌‌ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

Corona Relief Fund
ಚಾಮರಾಜನಗರ ಪೇದೆ ಮಂಜಪ್ಪ

ಲಾಕ್​ಡೌನ್​ನಿಂದ ಸಂಕಷ್ಟಕ್ಕೀಡಾಗಿರುವ ಬಡವರು, ಕೂಲಿ ಕಾರ್ಮಿಕರು, ನಿರ್ಗತಿಕರಿಗೆ ಸಹಾಯ ಮಾಡುವ ದೃಷ್ಟಿಯಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ಪತ್ರದಲ್ಲಿ ಮಂಜಪ್ಪ ತಿಳಿಸಿದ್ದಾರೆ. ಪೊಲೀಸ್ ಪೇದೆಯ ಮಾನವೀಯ ನಡೆಗೆ ಹಿರಿಯ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.